ಮಂಗಳವಾರ, ಜುಲೈ 15, 2014

ಒಂದೆ ಕೂಗಳತೆ ವೈಕುಂಠಕೆ : Onde Kugalate Vaikunthake

ಒಂದೆ ಕೂಗಳತೆ ವೈಕುಂಠಕೆ 

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ
ತಾಳ : ಅಟ್ಟ

ಒಂದೆ ಕೂಗಳತೆ ವೈಕುಂಠಕೆ ॥ಪ॥ 
ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ॥ಅ.ಪ॥ 

ಸರಸಿಯಲಿ ಆನೆ ಪೊರೆಯೆಂದು ಕರೆಯಲು
ತ್ವರಿತದಿ ಬಂದು ಕಾಯ್ದಾ
ನರಹರಿ ಕೃಷ್ಣಾ ಸಲಹೆಂದು ಚೀರಲು
ತರಳ ಪ್ರಹ್ಲಾದಗೆ ಕಂಬದಿಂದಲಿ ಬಂದ ॥೧॥

ಅಂಬರೀಷ ದ್ವಾದಶೀವ್ರತ ಮಾಡಲು
ದೊಂಬಿ ಮಾಡಿದ ದುರ್ವಾಸಮುನಿ
ಕುಂಭಿನೀಪತಿ ಕೃಷ್ಣಾ ಕಾಯೆಂದು ಮೊರೆಯಿಡೆ
ಬೆಂಬತ್ತಿ ಚಕ್ರದಿ ಮುನಿಶಾಪವನು ಕಳೆದ ॥೨॥

ದ್ರುಪದರಾಯನ ಪುತ್ರಿಯಾಪತ್ತ ಕಳೆಯೆನೆ
ಕೃಪೆಯಿಂದ ಅಕ್ಷಯವಿತ್ತ ತಾನು
ಕಪಟನಾಟಕ ಕೃಷ್ಣ ಪುರಂದರವಿಠಲನ
ಗುಪಿತದಿ ನೆನೆವರ ಹೃದಯವೇ ವೈಕುಂಠವು ॥೩॥

Labels: ಒಂದೆ ಕೂಗಳತೆ ವೈಕುಂಠಕೆ, Onde Kugalate Vaikunthake, ಪುರಂದರದಾಸರು, Purandaradasaru 

1 ಕಾಮೆಂಟ್‌: