ಸೋಮವಾರ, ಅಕ್ಟೋಬರ್ 7, 2013

ಎಲ್ಲಿ ಮಾಯವಾದನೆ ರಂಗಯ್ಯನು : Elli Mayavadane Rangayyanu

ಎಲ್ಲಿ ಮಾಯವಾದನೆ ರಂಗಯ್ಯನು

ಕೀರ್ತನಕಾರರು : ವ್ಯಾಸರಾಯರು  
ರಾಗ : ಆನಂದ ಭೈರವಿ
ತಾಳ : ಆದಿ

ಎಲ್ಲಿ ಮಾಯವಾದನೆ ರಂಗಯ್ಯನು       ||ಪ||

ಎಲ್ಲಿ ಮಾಯವಾದ ಫುಲನಾಭ ಕೃಷ್ಣ
ಚಲ್ವಗಂಗಳೆಯರು ಹುಡುಕಹೋಗುವ ಬನ್ನಿ  ||ಅ.ಪ||

ಮಂದಗಮನೆಯರೆಲ್ಲ ಕೃಷ್ಣನ ಕೂಡೆ
ಚಂದದಿ ಇದ್ದೆವಲ್ಲ
ಕಂದರ್ಪನ ಬಾಧೆಗೆ ಗುರಿಯ ಮಾಡಿದನಲ್ಲ
ಮಂದಮತಿಯು ನಮಗೆ ಬಂದು ಒದಗಿತಲ್ಲ ||೧||

ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆ
ಸರಸವಾಡುತಲಿದ್ದೆವೆ
ಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿ
ಚರಣ ಸೇವಕರಾದ ತರುಣಿರಿಲ್ಲೆ ಬಿಟ್ಟು     ||೨||

ಭಕ್ತವತ್ಸಲದೇವನು ತನ್ನವರನು
ಅಕ್ಕರಿಂದಲಿ ಪೋರೆವೇನು
ಸಿಕ್ಕದೆ ಹೋಗನು ಹುಡುಕುತ್ತ ಹೋಗುವ
ಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು      ||೩||

Labels: ಎಲ್ಲಿ ಮಾಯವಾದನೆ ರಂಗಯ್ಯನು, Elli Mayavadane Rangayyanu, ವ್ಯಾಸರಾಯರು, Vyasarayaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ