ಮಂಗಳವಾರ, ಜುಲೈ 23, 2013

ಅರಿತುಕೊಳ್ಳಿರೊ ಬ್ಯಾಗ : Aritukolliro Byaga

ಅರಿತುಕೊಳ್ಳಿರೊ ಬ್ಯಾಗ 

ಕೀರ್ತನಕಾರರು : ಕಾಖಂಡಕಿ ಕೃಷ್ಣರಾಯರು 
ರಾಗ : ಕಾಪಿ 
ತಾಳ : ತೀನ್ ತಾಲ 

ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ 
ದೊರಕುವುದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲಾ           ।।ಪ।।

ಗುರುಕರುಣ ಕೃಪೆಯಿಂದ ಪರಮ ದಿವ್ಯಾಮೃತವು 
ಸುರಿಸುರಿದು ಚಪ್ಪರಿದು ಸೂರ್ಯಾಡಿ ಸಾರಸವ              ।।೧।।

ಅನುದಿನ ಸೇವಿಸುವ ಅನುಭವಿಗಳೂಟ 
ಏನೆಂದುಸುರಲಿ ನಾ ಆನಂದೋಬ್ರಹ್ಮವ                       ।।೨।।

ಎಂದಿಗೆ ಬಾಹುದು ನೋಡಿ ಸಂದಿಸಿ ಮಾನವಜನ್ಮ 
ಚಂದಮಾಡಿಕೊಳ್ಳಿರೋ ಬಂದ ಕೈಯಲಿ ಬೇಗ                 ।।೩।।

ಆಲಸ್ಯ ಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ 
ಸುಲಲಿತವಾಗಿಹುದು ತಿಳಿದು ಕೊಂಬವರಿಗೆ                    ।।೪।।

ಇರುಳ್ಹಗಲ ಪೂರ್ಣ ಸುರವುತಿಹ ಅಮೃತ 
ತರಳ ಮಹಿಪತಿ ಪ್ರಾಣ ಹೊರೆವ ಸಂಜೀವನ                   ।।೫।।

Labels: ಅರಿತುಕೊಳ್ಳಿರೊ ಬ್ಯಾಗ, Aritukolliro Byaga, ಕಾಖಂಡಕಿ ಕೃಷ್ಣರಾಯರು,  Kakhandaki Krishnarayaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ