ಮಂಗಳವಾರ, ಜುಲೈ 23, 2013

ಮನವೆ ನೀ ದೃಢವಾದರೆ : Manave Nee Drudhavadare

ಮನವೆ ನೀ ದೃಢವಾದರೆ

ಕೀರ್ತನಕಾರರು : ವಿಜಯದಾಸರು 
ರಾಗ : ಸಾವೇರಿ 
ತಾಳ : ಆದಿ

ಮನವೆ ನೀ ದೃಢವಾದರೆ ಮನಸಿ-
ಜನಯ್ಯನ ಚರಣ ಕಾಂಬೆನೊ ನಾನು             ।।ಪ।।

ಹಂಬಲವನ್ನು ಮಾಡದಿದ್ದರೆ ಹರಿ 
ಎಂಬ ನಾಮಪೀಯೂಷ ದೊರಕುವುದು            ।।೧।।

ಚಂಚಲವುಳ್ಳವನಾಗದಿದ್ದರೆ ದುಷ್ಟ
ಪಂಚೇಂದ್ರಿಯಗಳನ್ನು ಸ್ಥಿರವಾಗಿ ನಿಲ್ಲಿಸುವೆ            ।।೨।।

ಅತ್ತಲಿತ್ತಲಿ ಪೋಗದಿರು ಎ-
ನ್ನತ್ತ ವಿಜಯವಿಠಲ ಬರಲಿ                      ।।೩।।

Labels: ಮನವೆ ನೀ ದೃಢವಾದರೆ, Manave Nee Drudhavadare, ವಿಜಯದಾಸರು, Vijayadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ