ಮಂಗಳವಾರ, ಜುಲೈ 15, 2014

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ : Ombhattu Bagilolu Onde Divige Hachchi

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ

ಕೀರ್ತನಕಾರರು : ಪುರಂದರದಾಸರು
ರಾಗ : ಮಾಯಾಮಾಳವ ಗೌಳ
ತಾಳ : ಆದಿ

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ॥ಪ॥ 

ತನುವೆಂಬ ಕಲ್ಲಿನೊಳು ಮನವೆಂಬ ಧಾನ್ಯವ ತುಂಬಿ
ವನವನದು ನವಬೇಳೆ ಬೀಸಿದೆನೆ  ॥೧॥

ಅಷ್ಟಕರ್ತೃಗಳೆಂಬೋ ಅಷ್ಟನವಧಾನ್ಯವ ತಂದು
ಕುಟ್ಟಿತಟ್ಟಿ ಕಜ್ಜಾಯ ಕರಿದೆನೆ  ॥೨॥

ಅಷ್ಟಕರ್ಮಗಳೆಂಬೋ ಕಾಷ್ಠವನ್ನುರುಹಿ ನಾನು
ನಿಷ್ಥೆಯಿಂದಲಿ ಅನ್ನವ ಬಾಗಿದೆನೆ  ॥೩॥

ಅಷ್ಟರೊಳಗೆನ್ನ ಗಂಡ ಬಂದು ಅಡುವ ಮಡಿಕೆಯ ಒಡೆದು
ಮುಟ್ಟಿಮುರಿದು ಮೂಲೆಗೆ ಹಾಕಿದನೆ  ॥೪

ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ
ತಿರುಗಿ ಬಾರದ್ಹಾಂಗೆ ಮಾಡಿದನೆ  ॥೫॥

ಮಾಡಿದೆ ಒಗೆತನವ ನಂಬಿಕಿಲ್ಲದ ಸಂಸಾರವ ನೆಚ್ಚಿ
ಕೂಡಿದೆ ಪುರಂದರವಿಠಲನ್ನ ದಾಸರ  ॥ ೬॥

Labels: ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ, Ombhattu Bagilolu Onde Divige Hachchi, ಪುರಂದರದಾಸರು, Purandaradasaru

ಒಂದೆ ಕೂಗಳತೆ ವೈಕುಂಠಕೆ : Onde Kugalate Vaikunthake

ಒಂದೆ ಕೂಗಳತೆ ವೈಕುಂಠಕೆ 

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ
ತಾಳ : ಅಟ್ಟ

ಒಂದೆ ಕೂಗಳತೆ ವೈಕುಂಠಕೆ ॥ಪ॥ 
ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ॥ಅ.ಪ॥ 

ಸರಸಿಯಲಿ ಆನೆ ಪೊರೆಯೆಂದು ಕರೆಯಲು
ತ್ವರಿತದಿ ಬಂದು ಕಾಯ್ದಾ
ನರಹರಿ ಕೃಷ್ಣಾ ಸಲಹೆಂದು ಚೀರಲು
ತರಳ ಪ್ರಹ್ಲಾದಗೆ ಕಂಬದಿಂದಲಿ ಬಂದ ॥೧॥

ಅಂಬರೀಷ ದ್ವಾದಶೀವ್ರತ ಮಾಡಲು
ದೊಂಬಿ ಮಾಡಿದ ದುರ್ವಾಸಮುನಿ
ಕುಂಭಿನೀಪತಿ ಕೃಷ್ಣಾ ಕಾಯೆಂದು ಮೊರೆಯಿಡೆ
ಬೆಂಬತ್ತಿ ಚಕ್ರದಿ ಮುನಿಶಾಪವನು ಕಳೆದ ॥೨॥

ದ್ರುಪದರಾಯನ ಪುತ್ರಿಯಾಪತ್ತ ಕಳೆಯೆನೆ
ಕೃಪೆಯಿಂದ ಅಕ್ಷಯವಿತ್ತ ತಾನು
ಕಪಟನಾಟಕ ಕೃಷ್ಣ ಪುರಂದರವಿಠಲನ
ಗುಪಿತದಿ ನೆನೆವರ ಹೃದಯವೇ ವೈಕುಂಠವು ॥೩॥

Labels: ಒಂದೆ ಕೂಗಳತೆ ವೈಕುಂಠಕೆ, Onde Kugalate Vaikunthake, ಪುರಂದರದಾಸರು, Purandaradasaru