ವಾದಿರಾಜರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಾದಿರಾಜರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 11, 2013

ಲೋಕಭರಿತನೋ ರಂಗಾನೇಕ ಚರಿತನೋ : Lokabharitano Ranganekacharitano

ಲೋಕಭರಿತನೋ ರಂಗಾನೇಕ ಚರಿತನೋ

ಕೀರ್ತನಕಾರರು : ವಾದಿರಾಜರು
ರಾಗ : ಪೂರ್ವಿಕಲ್ಯಾಣಿ
ತಾಳ : ಛಾಪು

ಲೋಕಭರಿತನೋ ರಂಗಾನೇಕ ಚರಿತನೋ                     ||ಪ||

ಕಾಕುಜನರ ಮುರಿದು ತನ್ನ ಏಕಾಂತ ಭಕ್ತರ ಪೊರೆವ ಕೃಷ್ಣ   ||ಅ.ಪ||

ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-
ರಾಜಸುತನು ಈತನೇ ಸರ್ವ ಪೂಜೆಗರ್ಹನೆನಿಸಿದಾತ        ||೧||

ಮಿಕ್ಕ ನೃಪರ ಜರಿದು ಅಮಿತ ವಿಕ್ರಮ ಯದುವರನೆ ತನಗೆ
ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ       ||೨||

ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲು
ಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ              ||೩||

ಉತ್ತರೆಯ ಗರ್ಭದಲ್ಲಿ ಸುತ್ತಿ ಮುತ್ತಿದಸ್ಟ್ರವನ್ನು
ಒತ್ತಿ ಚಕ್ರದಿಂದ ನಿಜ ಭಕ್ತ ಪರೀಕ್ಷಿತನ ಕಾಯ್ದ                     ||೪||

ತನ್ನ ಸೇವಕ ಜನರಿಗೊಲಿದು ಉನ್ನತ ಉಡುಪಿಯಲ್ಲಿ ನಿಂತು
ಘನ್ನ ಮಹಿಮೆಯಿಂದ ಪೊರೆವ ಪ್ರಸನ್ನ ಹಯವದನ ಕೃಷ್ಣ      ||೫||

Labels: ಲೋಕಭರಿತನೋ ರಂಗಾನೇಕ ಚರಿತನೋ, Lokabharitano Ranganekacharitano, ವಾದಿರಾಜರು, Vadirajaru

ಸೋಮವಾರ, ಸೆಪ್ಟೆಂಬರ್ 9, 2013

ಧವಳಗಂಗೆಯ ಗಂಗಾಧರ : Dhavalagangeya Gangadhara

ಧವಳಗಂಗೆಯ ಗಂಗಾಧರ

ಕೀರ್ತನಕಾರರು : ವಾದಿರಾಜರು
ರಾಗ : ಮಧ್ಯಮಾವತು
ತಾಳ : ಅಟ್ಟ

ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ
ಧವನ ತೋರಿಸಯ್ಯಾ ಗುರುಕುಲೋತ್ತುಂಗ        ||ಪ||

ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸುಟುವ
ದುಶ್ಚರಿತಗಳೆಲ್ಲ ದೂರದಲ್ಲಿಡುವ ನ
ಮ್ಮಚ್ಯುತಗಲ್ಲದ ಅಸುರರ ಬಡಿವ                ||೧||

ಮಾರನ ಗೆದ್ದ ಮನೋಹರ ಮೂರ್ತಿ
ಸಾರ ಸಜ್ಜನರಿಗೆ ಸುರ ಚಕ್ರವರ್ತಿ
ಧಾರಿಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ ಮು
ರಾರಿಯ ತೋರಯ್ಯಾ ನಿಮಗೆ ಶರಣಾರ್ತಿ        ||೨||

ಚೆನ್ನ ಪ್ರಸನ್ನ ಶ್ರೀಹಯವದನನ್ನ
ಅನುದಿನ ನೆನೆವಂತೆ ಮಾಡೋ ನೀ ಎನ್ನ
ಅನ್ಯನಲ್ಲವೋ ನಾನು ಗುರುವೆಂಬ ನಿನ್ನ
ಇನ್ನಾದರು ಹರಿಯ ತೋರೊ ಮುಕ್ಕಣ್ಣ          ||೩||

Labels: ಧವಳಗಂಗೆಯ ಗಂಗಾಧರ, Dhavalagangeya Gangadhara
, ವಾದಿರಾಜರು, Vadirajaru

ಶನಿವಾರ, ಆಗಸ್ಟ್ 31, 2013

ವೇಣುನಾದ ಪ್ರಿಯ ಗೋಪಾಲಕೃಷ್ಣ : Venunada Priya Gopalakrishna

ವೇಣುನಾದ ಪ್ರಿಯ ಗೋಪಾಲಕೃಷ್ಣ 

ಕೀರ್ತನಕಾರರು : ವಾದಿರಾಜರು

ವೇಣುನಾದ ಪ್ರಿಯ ಗೋಪಾಲಕೃಷ್ಣ          ।।ಪ॥

ವೇಣುನಾದ ವಿನೋದ ಮುಕುಂದ
ಗಾನವಿನೋದ ಶೃಂಗಾರ ಗೋಪಾಲ        ।।ಅ.ಪ॥

ವಂದಿತ ಚರಣ ವಸುಧೆಯ ಆಭರಣ
ಇಂದಿರ ರಮಣ ಇನ ಕೋಟಿ ತೇಜ
ಮಂದರಧರ ಗೋವಿಂದ ಮುಕುಂದ
ಸಿಂಧು ಶಯನ ಹರಿ ಕಂದರ್ಪ ಜನಕ          ।।೧।।

ನವನೀತ ಚೋರ ನಂದ ಕುಮಾರ
ಭುವನೇಕ ವೀರ ಬುದ್ಧಿ ವಿಸ್ತಾರ
ರವಿಕೊಟಿ ತೇಜ ರಘುವಂಶ ರಾಜ
ದಿವಿಜ ವಂದಿತ ಧನುಜಾರಿ ಗೋಪಾಲ        ।।೨।।

ಪರಮ ದಯಾಳು ಪಾವನ ಮೂರ್ತಿ
ವರಕೀರ್ತಿ ಹಾರ ಶೃಂಗಾರ ಲೋಲ
ಉರಗೇಂದ್ರ ಶಯನ ವರಹಯವದನ
ಶರಣು ರಕ್ಷಕ ಪಾಹಿ ಕೋದಂಡ ರಾಮ        ।।೩।।


Labels: ವೇಣುನಾದ ಪ್ರಿಯ ಗೋಪಾಲಕೃಷ್ಣ , Venunada Priya Gopalakrishna, ವಾದಿರಾಜರು, Vadirajaru

ಮಾತು ಮಾತಿಗೆ ಕೇಶವ ನಾರಾಯಣ : Matu Matige Keshava Narayana

ಮಾತು ಮಾತಿಗೆ ಕೇಶವ ನಾರಾಯಣ

ಕೀರ್ತನಕಾರರು : ವಾದಿರಾಜರು
ರಾಗ :  ರೇಗುಪ್ತಿ 
ತಾಳ : ಅಟ್ಟ 

ಮಾತು ಮಾತಿಗೆ ಕೇಶವ ನಾರಾಯಣ
ಮಾಧವ ಎನಬಾರದೆ ಹೇ ಜಿಹ್ವೆ                                         ।।ಪ॥

ಪ್ರಾತಃಕಾಲದೊಳೆದ್ದು ಪಾರ್ಥಸಾರಥಿಯೆಂದು
ಪ್ರೀತಿಲಿ ನೆನೆಯೆ ಸುಪ್ರೀತನಾಗುವ ಹರಿ                              ।।ಅ.ಪ॥

ಜಲಜನಾಭನ ನಾಮವು ಈ ಜಗಕ್ಕೆಲ್ಲ ಜನನ ಮರಣ ಹರವು
ಸುಲಭವೆಂದೆನಲಾಗಿ ಸುಖಕೆ ಕಾರಣವಿದು
ಬಲ್ಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು
ತಿಳಿದು ತಿಳಿಯದಿಹರೇ ಹೇ ಜಿಹ್ವೆ                                        ।।೧।।


ತರಳೆ ದ್ರೌಪದಿ ಸೀರೆಯ ಸೆಳೆಯುತಿರೆ ಹರಿ ನೀನೆ ಗತಿಯೆನಲು
ಪರಮಪುರುಷ ಭವಭಂಜನ ಕೇಶವ
ದುರುಳರ ಮರ್ದಿಸಿ ತರುಣಿಗಭಯವಿತ್ತ 

ಹರಿ ನಮ್ಮೊಡೆಯನಲ್ಲವೆ ಹೇ ಜಿಹ್ವೆ                                       ।।೨।।

ಹೇಮಕಶ್ಯಪಸಂಭವ ಈ ಜಗಕ್ಕೆಲ್ಲ ನಾಮವೆ ಗತಿಯೆನಲು
ವಾಮನ ನೀನೆಂದು ವಂದಿಸಿದವರಿಗೆ ಶ್ರೀಮದನಂತ
ಸ್ವಾಮಿ ಹಯವದನನು 

ಕಮಿಟ ಫಲವೀವನು ಹೇ ಜಿಹ್ವೆ                                          ।।೩।।

Labels: ಮಾತು ಮಾತಿಗೆ ಕೇಶವ ನಾರಾಯಣ, Matu Matige Keshava Narayana, ವಾದಿರಾಜರು, Vadirajaru

ಬಾರೋ ಮುರಾರಿ ಬಾಲಕ ಶೌರಿ : Baro Murari Balaka Shouri

ಬಾರೋ ಮುರಾರಿ ಬಾಲಕ ಶೌರಿ

ಕೀರ್ತನಕಾರರು : ವಾದಿರಾಜರು
 
ಬಾರೋ ಮುರಾರಿ ಬಾಲಕ ಶೌರಿ
ಸಾರ ವಿಚಾರಿ ಸಂತೋಷಕಾರಿ                        ।।ಪ॥ 


ಆಟ ಸಾಕೇಳೋ ಮೈಯೆಲ್ಲ ಧೂಳೋ
ಊಟ ಮಾಡೇಳೊ ಕೃಷ್ಣ ಕೃಪಾಳೊ                  ।।ಅ.ಪ॥

ಅರುಣಾಬ್ಜಚರಣ ಮಂಜುಳಾಭರಣ
ಪರಮ ವಿತರಣ ಪನ್ನಗಶಯನ
ಮನೆಗೆದ್ದು ಬಾರೋ ಕೊನೆಗಯ್ಯ ತೋರೋ
ಚಿನ್ಮಯ ಬಾರೋ ನಗೆಮುಗ ತೋರೋ            ।।೧।।

ವೆಂಕಟರಮಣ ಸಂಕಟಹರಣ
ಕಿಂಕರಾಮರಗಣ ವಂದಿತಚರಣ
ಅರವಿಂದನಯನ ಶರದೇಂದುವದನ
ವರಯದುಸದನ ಸಿರಿ ಹಯವದನ                    ।।೨।।


Labels: ಬಾರೋ ಮುರಾರಿ ಬಾಲಕ ಶೌರಿ, Baro Murari Balaka Shouri, ವಾದಿರಾಜರು, Vadirajaru 

ಶುಕ್ರವಾರ, ಆಗಸ್ಟ್ 23, 2013

ಬಿಡೆನೊ ನಿನ್ನ ಚರಣಕಮಲವ ಎನ್ನ : Bideno Ninna Charanakamalava Enna

ಬಿಡೆನೊ ನಿನ್ನ ಚರಣಕಮಲವ ಎನ್ನ

ಕೀರ್ತನಕಾರರು : ವಾದಿರಾಜರು  
ರಾಗ :  ಕಲ್ಯಾಣಿ 
ತಾಳ : ಆಟ 

ಬಿಡೆನೊ ನಿನ್ನ ಚರಣಕಮಲವ ಎನ್ನ                    ।।ಪ॥ 

ಹೃದಯಮಧ್ಯದೊಳಿಟ್ಟು ಭಜಿಸುವೆ ಅನುದಿನ        ।।ಅ.ಪ॥

ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವ 
ನಳಿನೋದ್ಭವ ಬಂದು ಪಾದವ ತೊಳೆಯೆ 
ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ 
ಹರಿಪಾದ ತೀರ್ಥವೆಂದು ಹರ ಧರಿಸಿದನಾಗ         ।।೧।।

ಆ ಪತಿಶಾಪದಿ ಅಹಲ್ಯೆ ಸಾಸಿರ ಯುಗ 
ಪಾಷಾಣವಾಗುತ್ತ ಪಥದೊಳಗಿರಲು 
ಶ್ರೀಪತಿ ನಿನ್ನಯ ಶ್ರೀಪಾದ ಸೋಕಲು 
ಪಾಪರಹಿತಳಾಗಿ ಪದವಿ ಕಂಡಳಾಗ                   ।।೨।।

ವಜ್ರಾಂಕುಶಧ್ವಜ ಪದುಮ ರೇಖೆಗಳಿಂದ 
ಪ್ರಜ್ವಲಿಸುವ ನಿನ್ನ ಪಾದಪದ್ಮವನು 
ಗರ್ಜಿಸಿ ಭಜಿಸುವೆ ಹಯವದನನೆ ಭವ-
ಜರಜರ ಬಿಡಿಸುವನೆಂದು ನಂಬಿಹೆನಾಗಿ               ।।೩।।

Labels: ಬಿಡೆನೊ ನಿನ್ನ ಚರಣಕಮಲವ ಎನ್ನ, Bideno Ninna Charanakamalava Enna, ವಾದಿರಾಜರು, Vadirajaru

ಸೋಮವಾರ, ಆಗಸ್ಟ್ 19, 2013

ಬೇಗ ಬಾರೋ ಬೇಗ ಬಾರೋ : Bega Baro Bega Baro

ಬೇಗ ಬಾರೋ ಬೇಗ ಬಾರೋ

ಕೀರ್ತನಕಾರರು : ವಾದಿರಾಜರು
 
ರಾಗ :  ಮಧ್ಯಮಾವತಿ  
ತಾಳ : ಆದಿ

ಬೇಗ ಬಾರೋ ಬೇಗ ಬಾರೋ ನೀಲಮೇಘ ವರ್ಣ              ।।ಪ।।
ಬೇಗ ಬಾರೋ  ಬೇಗ ಬಾರೋ ವೇಲಾಪುರದ ಚೆನ್ನ             ।।ಅ. ಪ।।

ಇಂದಿರಾರಮಣ ಗೋವಿಂದ ಬೇಗ ಬಾರೋ 
ನಂದನ ಕಂದ ಮುಕುಂದ ಬೇಗ ಬಾರೋ                         ।।೧।।

ಋದ್ಧ ಸಮೃದ್ಧ ಅನಿರುದ್ಧ ಬೇಗ ಬಾರೋ 
ಹದ್ದನೇರಿದ ಪ್ರಸಿದ್ಧ ಬೇಗ ಬಾರೋ                                 ।।೨।।

ರಂಗ ಉತ್ತುಂಗ ನರಸಿಂಹ ಬೇಗ ಬಾರೋ 
ಕಂಗಳಿಗೆಸೆವ ಶುಭಾಂಗ ಬೇಗ ಬಾರೋ                          ।।೩।।

ಧೀರ ಉದಾರ ಗಂಭೀರ ಬೇಗ ಬಾರೋ 
ಹಾರಾಲಂಕಾರ ರಘುವೀರ ಬೇಗ ಬಾರೋ                       ।।೪।।

ಅಯ್ಯ ವಿಜಯ್ಯ ಸಾಹಯ್ಯ ಬೇಗ ಬಾರೋ 
ದಯಾದ್ರಿವಾಸ ಹಯವದನ ಬೇಗ ಬಾರೋ                     ।।೫।।

Labels: ಬೇಗ ಬಾರೋ  ಬೇಗ ಬಾರೋ, Bega Baro Bega Baro, ವಾದಿರಾಜರು, Vadirajaru

ಗುರುವಾರ, ಜುಲೈ 25, 2013

ಒಂದು ಬಾರಿ ಸ್ಮರಣೆ ಸಾಲದೆ : Ondu Baari Smarane Saalade

ಒಂದು ಬಾರಿ ಸ್ಮರಣೆ ಸಾಲದೆ

ಕೀರ್ತನಕಾರರು : ವಾದಿರಾಜರು
ರಾಗ : ಪಂತುವರಾಳಿ
ತಾಳ : ರೂಪಕ

ಒಂದು ಬಾರಿ ಸ್ಮರಣೆ ಸಾಲದೆ ಆ-
ನಂದ ತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ    ।।ಪ।।

ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು 
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ                 ।।೧।।

ಪ್ರಕೃತಿಬಂಧದಲಿ ಸಿಲುಕಿ ಸಕಲ ವಿಷಯಗಳಲಿ ನೊಂದು 
ಅಕಳಂಕ ಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ             ।।೨।।

ಆರುಮಂದಿ ವೈರಿಗಳನು ಸೇರಿಸಲೀಯದಂತೆ ಜರಿದು 
ಧೀರನಾಗಿ ಹರಿಯ ಪಾದವ ಸೇರಬೇಕೆಂಬುವರಿಗೆ                      ।।೩।।

ಘೋರಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆ 
ಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ                       ।।೪।।

ಹೀನಬುದ್ಧಿಯಿಂದ ಶ್ರೀಹಯವದನನ ಜರಿದು 
ತಾನು ಬದುಕಲರಿಯದಿರಲು ತೋರಿಕೊಟ್ಟ ಮಧ್ವಮುನಿಯ          ।।೫।।

Labels: ಒಂದು ಬಾರಿ ಸ್ಮರಣೆ ಸಾಲದೆ, Ondu Baari Smarane Saalade, ವಾದಿರಾಜರು, Vadirajaru