ಮಂಗಳವಾರ, ಡಿಸೆಂಬರ್ 3, 2013

ಇಂದು ಶುಕ್ರವಾರ ಶುಭವ ತರುವ ವಾರ : Indu Shukravara

ಇಂದು ಶುಕ್ರವಾರ ಶುಭವ ತರುವ ವಾರ

ಕೀರ್ತನಕಾರರು :
ರಾಗ :
ತಾಳ :


ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ತ ಸಾಧಕೇ
ಶರಣ್ಯೇ ತ್ರಯ೦ಬಕೇ ಗೌರಿ ನಾರಾಯಣೀ ನಮೋಸ್ತುತೇ ||ಧೃ||


ಇಂದು ಶುಕ್ರವಾರ ಶುಭವ ತರುವ ವಾರ
ಸುಮಂಗಲಿಯರೆಲ್ಲಾ ನಿನ್ನ
ಪೂಜಿಸುವ ಪುಣ್ಯವಾರ ||ಪ||

ಮುಂಜಾನೆಯ ಮಡಿಯುಟ್ಟು
ಕುಂಕುಮವ ಹಣೆಗಿಟ್ಟು
ರಂಗೋಲಿಯನು ಬಾಗಿಲಿಗಿಟ್ಟು

ಹಣ್ಣುಕಾಯಿ ನೀಡುವ ವಾರ ||೧||

ಮಲ್ಲಿಗೆ ಜಾಜಿ ಹೂಮಾಲೆ ಹಾಕಿ
ಚಂದನ ಹಚ್ಚಿ ಸಿಂಗಾರ ಮಾಡಿ
ಕರ್ಪೂರದಾರತಿ ನಿನಗೆ ಬೆಳಗಿ

ಭಕ್ತಿಯಿ೦ದಲಿ ಭಜಿಸುವ ವಾರ ||೨||

ಸುವಾಸಿನಿಯರಿಗೆ ಕುಂಕುಮ ಹಚ್ಚಿ
ಸಂಭ್ರಮದಿ೦ದ ಬಾಗಿನ ನೀಡಿ
ಸರ್ವ ಮಂಗಲೆಯ ಕೀರ್ತಿಯ ಹಾಡಿ

ಸಕಲ ಭಾಗ್ಯವ ಬೇಡುವ ವಾರ  ||೩||

Labels: ಇಂದು ಶುಕ್ರವಾರ ಶುಭವ ತರುವ ವಾರ, Indu Shukravara

ಸೋಮವಾರ, ಅಕ್ಟೋಬರ್ 7, 2013

ಚಿತ್ತಜನಯ್ಯನ ಚಿಂತಿಸು ಮನವೇ : Chittajanayyana Chintisu Manave

ಚಿತ್ತಜನಯ್ಯನ ಚಿಂತಿಸು ಮನವೇ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕಾಂಬೋದಿ
ತಾಳ : ಆದಿ

ಚಿತ್ತಜನಯ್ಯನ ಚಿಂತಿಸು ಮನವೇ
ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ||ಪ||

ಕಾಲನ ದೂತರು ನೂಲು ಹಗ್ಗವ ತಂದು
ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ
ಕಾಲಪಾಶದೊಳಿಟ್ಟು ಶೂಲದಿಂದಿರುವಾಗ
ಪಾಲಿಸುವರುಂಟೆ ಜಾಲವ ಮಾಡದೆ ||೧||

ದಂಡಧರನ ಭಟರು ಚಂಡಕೋಪದಿ ಬಂದು
ಕೆಂಡದ ನದಿಯ ತಡೆಗೆ ಕೊಂಡೊಯ್ದು
ಖಂಡಖಂಡವ ಕಿತ್ತು ಕೆಂಡದೊಳಿಡುವಾಗ
ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ ||೨||

ಅಂಗಳಿಗೆ ಡಬ್ಬಣಂಗಳ ಸೇರಿಸಿ ಎರಡು
ಕಂಗಳಿಗೆ ಸೀಸವ ಕಾಸಿ ಪೊಯ್ಯಲು
ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ
ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ ||೩||

Labels: ಚಿತ್ತಜನಯ್ಯನ ಚಿಂತಿಸು ಮನವೇ, Chittajanayyana Chintisu Manave, ಶ್ರೀಪಾದರಾಜರು, Sripadarajaru

ಜಗನ್ಮೋಹನನೇ ಕೃಷ್ಣ : Jaganmohanane Krishna

ಜಗನ್ಮೋಹನನೇ ಕೃಷ್ಣ

ಕೀರ್ತನಕಾರರು : ಪುರಂದರದಾಸರು
ರಾಗ : ಬೇಹಾಗ್
ತಾಳ : ಆದಿ

ಜಗನ್ಮೋಹನನೇ ಕೃಷ್ಣ ಜಗವಂ ಪಾಲಿಪನೆ    ॥ಪ॥

ಒಬ್ಬಳ ಬಸುರಿಂದಲಿ ಬಂದೆ ಮ
ತ್ತೊಬ್ಬಳ ಕೈಯಲಿ ನೀ ಬೆಳೆದೆ
ಕೊಬ್ಬಿದ ದೈತ್ಯರ ಒಡಲ ಸೀಳಿದೆ ಇಂಥ
ತಬ್ಬಿಬ್ಬಾಟವನೆಲ್ಲಿ ಕಲಿತೆಯೊ ರಂಗ             ॥೧॥

ಲೋಕದೊಳಗೆ ನೀ ಶಿಶುವಾಗಿ ಮೂ
ರ್ಲೋಕವನೆಲ್ಲ ಬಾಯಲಿ ತೋರಿದೆ
ಆಕಳ ಕಾಯುವ ಚಿಣ್ಣನೆಂದೆನಿಸಿದೆ
ಈ ಕುಟಿಲವನೆಲ್ಲಿ ಕಲಿತೆಯೊ ರಂಗ             ॥೨॥

ಮಗುವಾಗಿ ಪೂತನಿಯ ಮೊಲೆಯನುಂಡೆ ಅವಳು
ಜಗದಗಲಕೆ ಬೀಳಲು ಕೆಡಹಿ
ನಗುತ ನಗುತ ಗೋಪಿ ಮೊಲೆಯುಂಡೆ ಇಂಥ
ತಗಿಬಿಗಿಯಾಟಗಳೆಲ್ಲಿ ಕಲಿತೆಯೊ ರಂಗ  ॥೩॥

ಮಾಡುವ ಧುಮುಕಿ ಕಾಳಿಂಗನ ಶಿರದಲ್ಲಿ
ಮೃಡಸುರಪಾದ್ಯರು ಪೊಗಳುತಿರೆ
ಹೆಡೆಯ ಮೇಲೆ ಕುಣಿದಾಡುತ ಆಡುತ
ಕಡೆ ಸಾರೆಂಬುದನೆಲ್ಲಿ ಕಲಿತೆಯೊ ರಂಗ   ॥೪॥

ಒಂದು ಪಾದವ ಭೂಮಿಯಲೂರಿ ಮ-
ತ್ತೊಂದು ಪಾದವ ಗಗನವನಳೆದು
ಒಂದು ಪಾದವ ಬಲಿ ಶಿರದಲಿಟ್ಟೆ ಇಂತ
ಚೆಂದದ ವಿದ್ಯೆಯನೆಲ್ಲಿ ಕಲಿತೆಯೊ ರಂಗ   ॥೫॥

ನಂಬಿದ ಪ್ರಹ್ಲಾದನು ಸ್ತುತಿಸೆ ನೀ
ಕಂಭವನೊಡೆದು ಬಂದಾಕ್ಷಣದಿ
ದೊಂಬಿಲಿ ದೈತ್ಯನ ಒಡಲ ಸೀಳಿದೆ ಇಂಥ
ಡಂಬರಾಟವನೆಲ್ಲಿ ಕಲಿತೆಯೊ ರಂಗ  ॥೬॥

ಅಂಬರೀಷ ದ್ವಾದಶಿ ಸಾಧಿಸುತಿರೆ ಅಗ
ಬಂದು ದುರ್ವಾಸರು ಶಾಪ ಕೊಡಲು
ಮುಂದಕೆ ಸಾಧನವಹುದೆಂದು ಚಕ್ರವ
ಹಿಂದಟ್ಟಿಸುವುದನೆಲ್ಲಿ ಕಲಿತೆಯೊ ರಂಗ  ॥೭॥

ವರಬಲದಿಂದಲಿ ಭಸ್ಮಾಸುರನು
ಹರಣ ಶಿರಡಿ ಕರವಿಡೆ ಬರಲು
ತರುಣಿಯ ರೂಪವ ತಾಳಿ ಆ ದೈತ್ಯನ
ಹರಣವನಳಿದುದನೆಲ್ಲಿ ಕಲಿತೆಯೊ ರಂಗ ॥೮॥

ವೇದಗಳರಸಿ ಕಾಣದ ಪರಬ್ರಹ್ಮ ನೀ
ಮೋದದಿಂದ ವಿದುರನ ಮನೆಯೈದಿ
ಆದರದಿ ಪಾಲ ಕುಡಿದುಳಿದುದ ನೀ
ಮೇದಿನಿಗಿಳಿಸುವುದೆಲ್ಲಿ ಕಲಿತೆಯೊ ರಂಗ  ॥೯॥

ದುರ್ಯೋಧನ ತನ್ನೊಡ್ಡೋಲಗದೊಳು
ಹರಿಯನು ಕರೆಸೆಂದರುಹಲು ಬಂದು
ಧರಣಿಯುಂಗುಷ್ಟದೊಲೊತ್ತುತ ಅವನನು
ಉರುಳಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೦॥
ಆ ಸಭೆಯಲ್ಲಿ ಖಳ ದುರ್ಯೋಧನನಾಗ
ಮೋಸದಿ ಕೃಷ್ಣನ ಕಟ್ಟೆನಲು
ಸಾಸಿರರೂಪಿನ ಕೃಷ್ಣನೆಂದೆನಿಸಿದ
ವೇಷವನೆಲ್ಲಿ ಕಲಿತೆಯೊ ರಂಗ   ॥೧೧॥

ಸರ್ಪಬಾಣ ಮೊರೆಯುತ ಬರಲು ಕಂ-
ದರ್ಪ ಪಿತನೆ ಕರುಣದಿ ನೀನು
ಒಪ್ಪುವ ಪಾರ್ಥನ ರಥವ ನೆಲಕೆ ಒತ್ತಿ
ತಪ್ಪಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೨॥

ದ್ರೋಣನ ಸಂಗ್ರಾಮದಿ ಹರಿಚಕ್ರವ
ಮಾಣದೆ ಸೂರ್ಯಗೆ ಮರೆಮಾಡಿ
ಕಾಣಿಸಿ ಸೈಂಧವನನು ಕೊಲಿಸಲಾದೆ ಇಂಥ
ಜಾಣತನವ ನೀನೆಲ್ಲಿ ಕಲಿತೆಯೊ ರಂಗ  ॥೧೩॥

ಆ ಶಿರವಾತನ ತಂದೆಯು ಕರದಲಿ
ಸೂಸುತ ರಕುತವು ಬೀಳಲು ಅದನು
ಬೀಸಿ ಬಿಸಾಡಲು ಅವನ ಶಿರವನಾಗ
ಸಾಸಿರ ಮಾಡಿದುದೆಲ್ಲಿ ಕಲಿತೆಯೊ ರಂಗ  ॥೧೪॥

ಅಡಿ ಮೂಲನೆ ಎಂದು ಕರಿರಾಜ ಕರೆಯಲು
ಯಾದವರಾಯ ನೀ ನಗುತಲಿ ಬಂದು
ಆದರದಿಂದ ಗಜೇಂದ್ರನ ಸಲಹಿದೆ
ಆ ದಿವ್ಯಾಟಗಳೆಲ್ಲಿ ಕಲಿತೆಯೊ ರಂಗ   ॥೧೫॥

ಎಂದೆಂದಿಗು ನಿಮ್ಮ ಗುಣಗಳ ಪೊಗಳಲು
ಇಂದ್ರಾದಿಗಳಿಗೆ ಅಳವಲ್ಲ
ಮಂದರಧರ ಶ್ರೀ ಪುರಂದರವಿಠಲನೆ
ಒಂದೊಂದಾಟವನೆಲ್ಲಿ ಕಲಿತೆಯೋ ರಂಗ  ॥೧೬॥

Labels: ಜಗನ್ಮೋಹನನೇ ಕೃಷ್ಣ, Jaganmohanane Krishna, ಪುರಂದರದಾಸರು, Purandaradasaru

ರಂಗನ ನೋಡಿರೆ ರಾಜಕುವರ : Rangana Nodire Rajakuvara

ರಂಗನ ನೋಡಿರೆ ರಾಜಕುವರ

ಕೀರ್ತನಕಾರರು : ಪುರಂದರದಾಸರು

ರಂಗನ ನೋಡಿರೆ ರಾಜಕುವರ ನರ
ಸಿಂಗ ದೇವ ನಮ್ಮ ದೇವಕಿ ಸುತನ ||ಪ||

ಹಮ್ಮಿನ ತಾಯಿತ ತೋಳ ಭಾಪುರಿಯೊ
ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ
ಸುಮ್ಮಹಿಮನ ಕಿವಿಯಲ್ಲಿ ಚೌಕುಲಿಯೊ
ತಿಮ್ಮರಾಯ ನಿಟ್ಟ ಸೊಬಗಿನ ಬಗೆಯೊ  ||೧||

ಶುಕ್ರವಾರದ ಪೂಜೆಗೊಂಬವನ
ಸಕ್ಕರೆ ಪಾಲ್ ಮೊಸರು ಬೆಣ್ಣೆ ಮೆಲ್ಲುವನ
ಘಕ್ಕನೆ ಸುರರಿಗೆ ಅಮೃತವಿತ್ತವನ
ರಕ್ಕಸ ಕುಲವೈರಿ ರಾವಣಾಂತಕನ  ||೨||

ಪಾಪವಿನಾಶಿನಿ ಸ್ನಾನವ ಮಾಡಿ
ಪಾಪಗಳೆಲ್ಲವು ಬೇಗಬಿಟ್ಟೋಡಿ
ಈ ಪರಿ ದಿನ ದಿನ ಮೂರುತಿ ನೋಡಿ
ಶ್ರೀಪತಿ ಪುರಂದರ ವಿಠಲನ ಪಾಡಿ  ||೩||

Labels: ರಂಗನ ನೋಡಿರೆ ರಾಜಕುವರ, Rangana Nodire Rajakuvara, ಪುರಂದರದಾಸರು, Purandaradasaru

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ : Eravina Sirige Bimmane Beretare

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ

ಕೀರ್ತನಕಾರರು : ಪುರಂದರದಾಸರು
ರಾಗ : ಸೌರಾಷ್ಟ್ರ
ತಾಳ : ಅಟ್ಟ

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ
ಕಡೆದರುಂಟೆ ಬೆಣ್ಣೆ ಜೀವವೆ
ಉರಗನ ಹೆಡೆಯ ನೆಳಲ ಸೇರಿದ ಕಪ್ಪೆ
ಸ್ಥಿರಕಾಲ ಬಾಳ್ವುದೆ ಜೀವವೆ                          ॥ಪ॥

ಸತಿ ಸುತರೆಂದು ನೆಚ್ಚಲು ಬೇಡ ಮನದೊಳು
ಹಿತವರೊಬ್ಬರ ಕಾಣೆ ಜೀವವೆ
ವೃಥಾ ನೀನು ಕೆಡಬೇಡ ಮರಣವು ತಪ್ಪದು
ನಾಥ ದಶಕಂಠಗಾದರು ಜೀವವೆ                    ॥೧॥

ಅಸೆ ಮಾಡಲು ಬೇಡ ಭಾಷೆ ತಪ್ಪಲು ಬೇಡನ್ಯ
ಸ್ತ್ರೀಸಂಗವು ಬೇಡ ಜೀವವೆ
ಏಸೇಸು ಜನ್ಮಾಂತರ ಕಳೆದುಳಿದರು
ಈ ಸಾವು ತಪ್ಪದು ಜೀವವೆ                           ॥೨॥

ಆನೆ ಕುದುರೆ ಮಂದಿ ಶಾನೆ ಭಂಡಾರವು
ಏನು ಪಡೆದರಿಲ್ಲ ಜೀವವೆ
ಮಾನ ಸಹ ಸರ್ವ ಹರಿಗೆ ಅರ್ಪಣ ಮಾಡಿ
ಪುನೀತನಾಗಿರು ಜೀವವೆ                             ॥೩॥

ಕೆರೆಯ ಕಟ್ಟಿಸು ಮತ್ತೆ ಪೂದೋಟ ಹಾಕಿಸು
ಸೆರೆಯ ಬಿಡಿಸಲದು ಪುಣ್ಯ ಜೀವವೆ
ಕರೆಯದೆ ಮನೆಗೆ ಬಂದವರಿಗನ್ನವ ನೀಡು
ಪರಲೋಕ ಸಾಧನವದು ಜೀವವೆ                  ॥೪॥

ಸತ್ಯವಂತರ ಸಂಗದೊಳಗೆ ಚರಿಸೆ ಮೃತ್ಯು
ಅತ್ತತ್ತಲಿರುವಳು ಜೀವವೆ
ಸತ್ಯವಂತ ಸಿರಿಪುರಂದರವಿಠಲನೆನ್ನು
ಸತ್ತು ಹುಟ್ಟುವುದಿಲ್ಲ ಜೀವವೆ                         ॥೫॥

Labels: ಎರವಿನ ಸಿರಿಗೆ ಬಿಮ್ಮನೆ ಬೆರೆತರೆ, Eravina Sirige Bimmane Beretare, ಪುರಂದರದಾಸರು, Purandaradasaru

ಎಲ್ಲಿ ಮಾಯವಾದನೆ ರಂಗಯ್ಯನು : Elli Mayavadane Rangayyanu

ಎಲ್ಲಿ ಮಾಯವಾದನೆ ರಂಗಯ್ಯನು

ಕೀರ್ತನಕಾರರು : ವ್ಯಾಸರಾಯರು  
ರಾಗ : ಆನಂದ ಭೈರವಿ
ತಾಳ : ಆದಿ

ಎಲ್ಲಿ ಮಾಯವಾದನೆ ರಂಗಯ್ಯನು       ||ಪ||

ಎಲ್ಲಿ ಮಾಯವಾದ ಫುಲನಾಭ ಕೃಷ್ಣ
ಚಲ್ವಗಂಗಳೆಯರು ಹುಡುಕಹೋಗುವ ಬನ್ನಿ  ||ಅ.ಪ||

ಮಂದಗಮನೆಯರೆಲ್ಲ ಕೃಷ್ಣನ ಕೂಡೆ
ಚಂದದಿ ಇದ್ದೆವಲ್ಲ
ಕಂದರ್ಪನ ಬಾಧೆಗೆ ಗುರಿಯ ಮಾಡಿದನಲ್ಲ
ಮಂದಮತಿಯು ನಮಗೆ ಬಂದು ಒದಗಿತಲ್ಲ ||೧||

ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆ
ಸರಸವಾಡುತಲಿದ್ದೆವೆ
ಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿ
ಚರಣ ಸೇವಕರಾದ ತರುಣಿರಿಲ್ಲೆ ಬಿಟ್ಟು     ||೨||

ಭಕ್ತವತ್ಸಲದೇವನು ತನ್ನವರನು
ಅಕ್ಕರಿಂದಲಿ ಪೋರೆವೇನು
ಸಿಕ್ಕದೆ ಹೋಗನು ಹುಡುಕುತ್ತ ಹೋಗುವ
ಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು      ||೩||

Labels: ಎಲ್ಲಿ ಮಾಯವಾದನೆ ರಂಗಯ್ಯನು, Elli Mayavadane Rangayyanu, ವ್ಯಾಸರಾಯರು, Vyasarayaru

ದುರಿತಗಜ ಪಂಚಾನನ ನರಹರಿಯೆ : Duritagaja Panchanana Narahariye

ದುರಿತಗಜ ಪಂಚಾನನ ನರಹರಿಯೆ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕಾಂಬೋದಿ
ತಾಳ : ಆದಿ

ದುರಿತಗಜ ಪಂಚಾನನ ನರ-
ಹರಿಯೆ ದೇವರ ದೇವ ಕಾಯೊ ಗೋವಿಂದ    ||ಪ||

ಹೆಸರುಳ್ಳ ನದಿಗಳನೊಳಗೊಂಬ ಸಮುದ್ರನು
ಬಿಸುಡುವನೆ ಕಾಲುಹೊಳೆಗಳನು ಗೊವಿಂದ   ||೧||

ಒಂದು ಮೊಲಕೆ ಆರು ಹುಲಿ ಬಂದು ಕವಿದಿವೆ
ಬಂಧನ ಬಿಡಿಸೆನ್ನ ತಂದೆ ಗೋವಿಂದ  ||೨||

ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸುಡುವರೆ ಗೋವಿಂದ  ||೩||

ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ
ನಿನ್ನನ್ನು ಓಲೈಸಲ್ಯಾಕೆ ಗೋವಿಂದ  ||೪||

ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆ
ಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ  ||೫||

ಅರಸು ಮುಟ್ಟಲು ದಾಸಿ ರಂಭೆಯಾದಳು ದೇವ
ಪರುಷ ಮುಟ್ಟಲು ಲೋಹ ಹೊನ್ನು ಗೋವಿಂದ ||೬||

ಮಾನಾಭಿಮಾನದೊಡೆಯ ರಂಗವಿಠಲ
ಜ್ಞಾನಿಗಳರಸನೆ ಕಾಯೋ ಗೋವಿಂದ   ||೭||

Labels: ದುರಿತಗಜ ಪಂಚಾನನ ನರಹರಿಯೆ, Duritagaja Panchanana Narahariye, ಶ್ರೀಪಾದರಾಜರು, Sripadarajaru

ಊರದೇವರ ಮಾಡಬೇಕಣ್ಣ : Uradevara Madabekanna

ಊರದೇವರ ಮಾಡಬೇಕಣ್ಣ 

ಕೀರ್ತನಕಾರರು : ಪುರಂದರದಾಸರು
ರಾಗ : ನಾದನಾಮಕ್ರಿಯೆ
ತಾಳ : ಅಟ್ಟ

ಊರದೇವರ ಮಾಡಬೇಕಣ್ಣ ತನ್ನೊಳಗೆ ತಾನೆ                               ॥ಪ॥ ಊರ ದೇವರ ಮಾಡಿರೆಂದು ಸಾರುತಿದೆ ಶ್ರುತಿ ಇರುಳು ಹಗಲು

ದ್ವಾರಗಳೊಂಭತ್ತು ಮುಚ್ಚಿ ನಿಲ್ಲಿಸಿ ಭ್ರೂಮಧ್ಯದಲ್ಲಿ                            ॥ಅ.ಪ॥

ಎಷ್ಟು ಯುಗಗಳು ತೀರಿ ಹೋಯ್ತಣ್ಣ ದೇವರ ಮಾಡದೆ
ಕಷ್ಟದಿಂದ ನೊಂದೆ ಕಾಣಣ್ಣ
ಅಷ್ಟ ದಳದ ಕಂಭ ನಿಲ್ಲಿಸಿ ಕಟ್ಟಿ ಚಕ್ರಂಗಳನು ಹಾಕಿ
ಸೃಷ್ಟಿದೇವರ ತಂದು ನಿಲ್ಲಿಸಿ ದುಷ್ಟ ಕೋಣನ ಶಿರವ ತರಿದು                ॥೧॥

ಕಷ್ಟಕರ್ತವೆಂಬ ಕುರಿಯಣ್ಣ ಅದನ್ನು ತಂದು
ಕಟ್ಟಿ ತಲೆಯನು ಹೊಡೆಯಬೇಕಣ್ಣ
ಅಷ್ಟಮದದ ಕುರಿಗಳನ್ನು ಕಟ್ಟಿ ತಲೆಯನು ಚಂಡನಾಡಿ
ಅಟ್ಟಿ ತಿರುಗುವ ಕೋಳಿಯನ್ನು ಕುಟ್ಟಿ ಸೂರೆ ಹಾಕುತಲ್ಲಿ                      ॥೨॥

ನಾನು ಎಂಬುವ ಮೇಕೆ ಹೋತಣ್ಣ ಅದಕ್ಕೆ ತಕ್ಕ
ಜ್ಞಾನವೆಂಬುವ ಪೋತರಾಜಣ್ಣ
ಮಾನವೆಂಬ ಚಾಟಿ ಹೊಡೆದು ಹೀನ ಹೋತನ ಸೀಳಿ ಬಿಸುಟು
ಧ್ಯಾನ ಗುಡಿಸಲು ಸೂರೆಗೊಂಡು ತಾನೆ ಬೆಳಗುವ ಜ್ಯೋತಿ ನಿಲ್ಲಿಸಿ       ।೩॥

ನಾಳೆ ನೋಡೋಣ್ಣೆನ್ನಬೇಡಣ್ಣ ಕೇಳಣ್ಣ ನಿನ್ನ
ಬಾಳು ಅಸ್ಥಿರವೆಂದು ತಿಳಿಯಣ್ಣ
ಪಾಳ್ಯಗಾರನಂತೆ ಬಹನು ಬಾಳುವ ಕಾಲದಿ ಯಮನು
ಕೋಳಿ ಪಿಳ್ಳೆಯಾಡುವಾಗ ಹಾಳುಹದ್ದು ಒಯ್ಯುವಂತೆ                        ॥೪॥

ಹೆಂಡಿರು ಮಕ್ಕಳು ಸುಳ್ಳು ಕೇಳಣ್ಣ ನಿನ್ನ
ಮಂಡೆ ತುಂಬ ಬಳಗ ಕಾಣಣ್ಣ
ದಂಡಧಾರಿ ಯಮನು ಬಂದು ಮಂಡೆ ಮೇಲೆ ಹೊಯ್ಯುವಾಗ
ಹೆಂಡಿರು ಮಕ್ಕಳು ನಿನ್ನ ಕಂಡು ಭಂಗಬಿಡಿಸಬಲ್ಲರೇನಣ್ಣ                    ॥೫॥

ಸತ್ತ ಪೆಣವ ನೋಡುವಿಯಲ್ಲ ನೀ ಗಳಿಸಿದಂಥ
ಬುತ್ತಿನೋಡಿ ಉಬ್ಬುವಿಯಲ್ಲೊ
ಮೃತ್ಯುವಿನ ಬಾಯಿಯೊಳಗೆ ತುತ್ತು ಆಗಿ ಹೋಗಬೇಡ
ತೊತ್ತು ಆಗಿ ಗುರುವಿಗೆ ನೀ ಹತ್ತಿ ನೋಡೋ ಗುಡ್ಡವನು                      ॥೬॥

ಮುಂದೆ ಇಂಥ ಜನ್ಮ ಬರದಣ್ಣ ನೋಡಣ್ಣ ನಿನಗೆ
ಮಂದಮತಿಯು ಬೇಡ ಕಾಣಣ್ಣ
ಹಿಂದಿನ ಕಷ್ಟವ ಮರೆದು ಕಾಣಣ್ಣ
ತಂದೆ ಪುರಂದರವಿಠಲನ್ನ ಹೊಂದಲು ನೀ ಮುಕ್ತನಣ್ಣ                        ॥೭॥

Labels: ಊರದೇವರ ಮಾಡಬೇಕಣ್ಣ, Uradevara Madabekanna, ಪುರಂದರದಾಸರು, Purandaradasaru

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ : Anjikinyatakayya Sajjanarige

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ
ತಾಳ : ಅಟ್ಟ

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ
ಭಯವು ಇನ್ಯಾತಕಯ್ಯ                                  ॥ಪ॥

ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ         ॥ಅ.ಪ॥
ಕನಸಿಲಿ ಮನಸಿಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಭೀತಿ          ॥೧॥

ರೋಮ ರೋಮಕೆ  ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ           ॥೨॥

ಪುರಂದರವಿಠಲನ ಪೂಜೆಯ ಮಾಡುವ
ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ     ॥೩॥

Labels: ಅಂಜಿಕಿನ್ಯಾತಕಯ್ಯ ಸಜ್ಜನರಿಗೆ, Anjikinyatakayya Sajjanarige, ಪುರಂದರದಾಸರು, Purandaradasaru

ಆವ ರೀತಿಯಿಂದ ನೀಯೆನ್ನ ಪಾಲಿಸೊ : Ava Ritiyinda Niyenna Paliso

ಆವ ರೀತಿಯಿಂದ ನೀಯೆನ್ನ ಪಾಲಿಸೊ

ಕೀರ್ತನಕಾರರು : ವಾದಿರಾಜರು 
ರಾಗ : ಮೋಹನ
ತಾಳ : ರೂಪಕ

ಆವ ರೀತಿಯಿಂದ ನೀಯೆನ್ನ ಪಾಲಿಸೊ
ಶ್ರೀವಿಭು ಹಯವದನ                    ||ಪ||

ಈ ವಿಧ ಭವದೊಳು ಇಷ್ಟು ಬವಣೆಪಟ್ಟೆ
ತಾವರೆದಳನಯನ ಹಯವದನ       ||ಅ.ಪ||

ಕಾಮನ ಬಾಧೆಯ ತಡೆಯಲಾರದೆ ಕಂಡ
ಕಾಮಿನಿಯರನೆ ಕೂಡಿ
ನೇಮನಿಷ್ಠೆಯಿಂದ ನಿನ್ನನು ಭಜಿಸದೆ
ಪಾಮರನಾದೆನೊ ಹಯವದನ  ||೧||

ಅಂಗನೆಯರಲ್ಲಿ ಅಧಿಕ ಮೋಹದಿಂದ
ಶೃಂಗಾರಗಳನೆ ಮಾಡಿ
ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ
ಭಂಗಕ್ಕೆ ಒಳಗಾದೆನೊ ಹಯವದನ ||೨||

ಹೀನಸಂಗವನೆಲ್ಲ ಹಯಮುಖದೇ-
ವನೆ ವರ್ಜಿಸುವಂತೆ ಮಾಡೊ
ಜ್ಞಾನಿಗಳರಸನೆ ದಯವಿಟ್ಟು ನಿನ್ನನು
ಧ್ಯಾನಿಸುವಂತೆ ಮಾಡೊ ಹಯವದನ ||೩||

Labels: ಆವ ರೀತಿಯಿಂದ ನೀಯೆನ್ನ ಪಾಲಿಸೊ, Ava Ritiyinda Niyenna Paliso, ವಾದಿರಜರು, Vadirajaru

ಅಂಬೆಗಾಲಿಕ್ಕುತಲಿ ಬಂದ ಗೋವಿಂದ : Ambegalikkkutali Banda Govinda

ಅಂಬೆಗಾಲಿಕ್ಕುತಲಿ ಬಂದ ಗೋವಿಂದ

ಕೀರ್ತನಕಾರರು : ಪುರಂದರದಾಸರು
ರಾಗ : ಧನ್ಯಾಸಿ
ತಾಳ : ಅಟ್ಟ

ಅಂಬೆಗಾಲಿಕ್ಕುತಲಿ ಬಂದ ಗೋವಿಂದ                 ॥ಪ॥

ಅಂಬುಜನಾಭ ದಯದಿಂದ ಮನೆಗೆ                    ॥ಅ.ಪ॥

ಜಲಚರ ಜಲವಾಸ ಧರಣಿಧರ ಮೃಗರೂಪ
ನೆಲನೆಳೆದು ಮೂರಡಿ ಮಾಡಿಬಂದ
ಕುಲನಾಶ ವನವಾಸ ನವನೀತ ಚೋರನಿವ
ಲಲನೆಯರ ವ್ರತಭಂಗ ವಾಹನ ತುರಂಗ             ॥೧॥

ಕಣ್ಣಬಿಡುವನು ತನ್ನ ಬೆನ್ನ ತಗ್ಗಿಸುವನು
ಮಣ್ಣು ಕೆದರಿ ಕೋರೆ ಬಾಯ ತೆರೆದು
ಚಿಣ್ಣ ಭಾರ್ಗವ ಲಕ್ಷ್ಮಣನನ್ನ ಬೆಣ್ಣೆಯಕಳ್ಳ
ಮಾನವ ಬಿಟ್ಟು ಕುದುರೆಯನೇರಿದ                      ॥೨॥

ನೀರ ಪೋಕ್ಕನು ಗಿರಿಯನೆಗಹಿ ಧರಣಿಯ ತಂದು
ನರಮೃಗ ಬಲಿಬಂಧ ಕೊರಳುಗೊಯಿಕ
ಶರಮುರಿದೊರಳೆಳೆದು ನಿರವಾಣಿ ಹಾಯ ಹತ್ತಿ
ಪುರಂದರವಿಠಲ ಮನೆಗೆ ತಾ ಬಂದ                    ॥೩॥

Labels: ಅಂಬೆಗಾಲಿಕ್ಕುತಲಿ ಬಂದ ಗೋವಿಂದ, Ambegalikkkutali Banda Govinda,
ಪುರಂದರದಾಸರು, Purandaradasaru

ಏಕೆ ಚಿಂತಿಸುತಿದ್ದಿ ಕೋತಿ ಮನವೆ : Eke Chintisutiddi Koti Manave

ಏಕೆ ಚಿಂತಿಸುತಿದ್ದಿ ಕೋತಿ ಮನವೆ

ಕೀರ್ತನಕಾರರು : ಪುರಂದರದಾಸರು 
ರಾಗ : ಭೈರವಿ 
ತಾಳ : ಝಂಪೆ 

ಏಕೆ ಚಿಂತಿಸುತಿದ್ದಿ ಕೋತಿ ಮನವೆ                      ।।ಪ॥ 

ಲೋಕನಾಥನ ನೆನೆದು ಸುಖಿಯಾಗು ಮನವೆ       ।।ಅ.ಪ॥ 

ಹುಟ್ಟುವಾಗಾಪತ್ತಿಗಾರು ಚಿಂತಿಸಿದವರು 
ಕಟ್ಟ ಕಡೆಯಲಿ ಲಯಕೆ ಯಾರ ಚಿಂತೆ 
ನಟ್ಟನಡುವಿನ ಬಾಳಿಗೇಕೆ ಚಿಂತಿಸುತಿರುವೆ 
ಹುಟ್ಟಿದವರಿಗೆ ಮೂರು ಬಟ್ಟಿಲ್ಲವೆ ಮರುಳೆ             ।।೧।।

ನವಿಲಿಂಗೆ ಚಿತ್ರಪತ್ರವನಾರು ಬರೆದವರು 
ಪವಳದಾ ಲತೆಗೆ ಕೆಂಪಿಟ್ಟವರು ಯಾರು 
ಸವಿಮಾತಿನರಗಿಣಿಗೆ ಹಸುರು ಬಳಿದವರಾರು 
ಆವ ಮಾಡಿದವ ನಮ್ಮ ಮರೆತಿಹನೆ ಮರುಳೆ       ।।೨।।

ಬಸಿರೊಳಗೆ ಶಿಶುವನು ಆದಾರು ಸಲಹಿದವರು 
ವಸುಧೆಯನು ಬಸಿರೊಳಿಟ್ಟಿರುವರಾರು 
ಹಸಗೆಡದೆ ನಮ್ಮ ಶ್ರೀಪುರಂದರವಿಠಲನ 
ಬಿಸಜಪಾದವ ನಂಬಿ ಸುಖಿಯಾಗು ಮರುಳೆ         ।।೩।। 

Labels: ಏಕೆ ಚಿಂತಿಸುತಿದ್ದಿ ಕೋತಿ ಮನವೆ, Eke Chintisutiddi Koti Manave, ಪುರಂದರದಾಸರು, Purandaradasaru 

ಕೇಳಲೊಲ್ಲನೆ ಎನ್ನ ಮಾತನು : Kelalollane Enna Matanu

ಕೇಳಲೊಲ್ಲನೆ ಎನ್ನ ಮಾತನು

ಕೀರ್ತನಕಾರರು : ಪುರಂದರದಾಸರು

ಕೇಳಲೊಲ್ಲನೆ ಎನ್ನ ಮಾತನು ರಂಗ   ॥ಪ॥

ಕಾಳಿಯಮರ್ದನ ಕೃಷ್ಣಗೆ
ಪೇಳೆ ಗೋಪ್ಯಮ್ಮ ಬುದ್ಧಿ        ॥ಅ.ಪ॥

ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗ
ಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆ
ಸಿಟ್ಟಿಸಿ ಕೋರೆ ಹಲ್ಲ ತೋರ್ದನೆ ಅತಿ
ಗಟ್ಟಿ ಉಕ್ಕಿನ ಕಂಭವನೊಡೆದು ಬಂದನೆ ॥೧॥

ಮೂರಡಿ ಭೂಮಿಯ ಬೇಡಿದನೆ ಅರಸರ
ಬೇರ ಕಡಿಯೆ ಕೊಡಲಿ ತಂದನೆ
ನಾರ ಸೀರೆಯನಿಟ್ಟುಕೊಂಡನೆ ಬೇಗ
ಚೋರತನದಿ ಹರವಿ ಹಾಲ ಕುಡಿದನಮ್ಮ  ॥೨॥

ಬತ್ತಲೆ ನಾರಿಯರನಪ್ಪಿದ ಬೇಗ
ಉತ್ತಮ ಅಶ್ವವ ಹತ್ತಿದ
ಹತ್ತವತಾರವ ತಾಳಿದ ನಮ್ಮ
ದಿಟ್ಟ ಮೂರುತಿ ಪುರಂದರ ವಿಠಲ   ॥೩॥

Labels: ಕೇಳಲೊಲ್ಲನೆ ಎನ್ನ ಮಾತನು, Kelalollane Enna Matanu, ಪುರಂದರದಾಸರು, Purandaradasaru

ವನಜನಯನನ ಮನವ ಮಧುಪ ನಂಬುವರೆ : Vanajanayanana Manava

ವನಜನಯನನ ಮನವ ಮಧುಪ ನಂಬುವರೆ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಆಹರಿ
ತಾಳ : ಝಂಪೆ

ವನಜನಯನನ ಮನವ ಮಧುಪ ನಂಬುವರೆ
ಮನದೆಗೆದ ಮದನಪಿತ ವಿಠಲರೇಯಾ                   ||ಪ||

ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನ
ನೆರೆದು ರತಿಪತಿಯ ಸುಖ ನೆರೆದೋರಿದ
ತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿ
ವಿರಹದುರಿ ತಾನಳವಡರಿ ಸುಡುತಿಹುದು               ||೧||

ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿ
ಬಿಡದೆಯೆಮ್ಮನು ತನ್ನ ವಶಮಾಡಿದ
ಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿ
ಮಡದಿ ತಡೆದಳೊ ಮಧುರೆಯಲಿ ನಲ್ಲನ  ||೨||

ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತು
ಇಂದುಮುಖಿ ನಾರಿಯರ ನೆರೆ ನಂಬಿಸಿ
ನಂದನಂದನ ನಮ್ಮ ಕಾನನದೊಳೀಡ್ಯಾಡಿ
ಇಂದು ಮಧುರೆಯ ನಾರಿಯರ ನೆಚ್ಚಿದ   ||೩||

ಇವನ ವಚನದ ಕಪಟ ತಿಳಿಯಲರಿಯದೆ ನಾವು
ನವ ಹರಿಣಿಯಂತೆ ಮರುಳಾಗಿ ಕೇಳಿ
ವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪ
ಇವನ ಗುಣವರಿಯದೆ ಕಡು ಕರುಣಿ ಎಂಬುವರು ಬರಿದೆ ||೪||

ಪತಿಸುತರ ಭವಬಂಧನಗಳೆಲ್ಲ ಈಡ್ಯಾಡಿ
ಗತಿ ನಮಗೆ ಅವನೆಂದು ಮನಸೋತೆವೋ
ಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದ
ಪತಿಯೊಡನೆ ಸಂಧಾನವೆಂತೊ ಎಲೊ ಮಧುಪ ||೫||

ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿ
ಇರುಳು ಹಗಲು ಜರಿ ಜರಿದಳಲುವೆವು
ಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೊ
ಹರಿ ನಮ್ಮ ನೆರೆದುದಚರಿಯಲ್ಲವೇ ಜಗದಿ ||೬||

ತುಂಗಗುಣ ನಿಲಯ ಅಂಗಜನ ಪಿತನೆಂದು
ರಂಗನಿಗೆ ಮನಸೋತು ಮರುಳಾದೆವೋ
ಹಿಂಗು ಬದುಕುವುದೆಂತೋ ಘೃಂಗ ಮಧುರೆಗೆ ಪೋಗಿ
ರಂಗವಿಠಲನ ತಂದೆಮ್ಮನುಳುಹುವುದೋ ||೭||

Labels: ವನಜನಯನನ ಮನವ ಮಧುಪ ನಂಬುವರೆ, Vanajanayanana Manava, ಶ್ರೀಪಾದರಾಜರು, Sripadarajaru

ಈಸಬೇಕು ಇದ್ದು ಜಯಿಸಬೇಕು : Isabeku Iddu Jayisabeku

ಈಸಬೇಕು ಇದ್ದು ಜಯಿಸಬೇಕು

ಕೀರ್ತನಕಾರರು : ಪುರಂದರದಾಸರು
ರಾಗ : ಧನ್ಯಾಸಿ
ತಾಳ : ಆದಿ

ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸ೦ಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ     ||ಪ||

ತಾಮರಸ ಜಲದ೦ತೆ
ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ
ಕಾಮಿತ ಕೈಗೊ೦ಬರೆಲ್ಲ                                ||೧||

ಗೇರು ಹಣ್ಣಿನಲ್ಲಿ ಬೀಜ
ಸೇರಿದ೦ತೆ ಸ೦ಸಾರದಿ
ಮೀರೀ ಆಸೆ ಮಾಡದಂತೆ
ಧೀರ ಕೃಷ್ಣನ ಭಕುತರೆಲ್ಲ                               ||೨||

ಮಾ೦ಸದಾಸೆಗೆ ಮತ್ಸ್ಯ ಸಿಲುಕಿ
ಹಿ೦ಸೆಪಟ್ಟ ಪರಿಯಂತೆ
ಮೋಸ ಹೋಗದ್ಹಾ೦ಗೆ ಜಗ-
ದೀಶ ಪುರಂದರವಿಠಲನ ನೆನೆದು                    ||೩||

Labels: ಈಸಬೇಕು ಇದ್ದು ಜಯಿಸಬೇಕು, Isabeku Iddu Jayisabeku, ಪುರಂದರದಾಸರು, Purandaradasaru

ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ : Ishtu Dayavullavana Yake Barabedendi

ಇಷ್ಟು ದಯವುಳ್ಳವನ

ಕೀರ್ತನಕಾರರು : ವಾದಿರಾಜರು 
ರಾಗ : ಕಲ್ಯಾಣಿ
ತಾಳ : ಆದಿ

ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ
ಎಷ್ಟು ನಿರ್ದಯಳೆ ನೀನು                     ||ಪ||

ಮುಟ್ಟುಕೋಪವ ದೂರಬಿಟ್ಟು ಸಂತೋಷದಲಿ
ಕೃಷ್ಣನ ಬಳಿಗೆ ಬಾರೆ                        ||ಅ.ಪ||

ನಿನ್ನಲ್ಲಿ ಭೋಗಲೋಲತೆ ಇಲ್ಲದಿದ್ದರೆ ನಿನಗೆ ಪೂಮಾಲೆಯ ಕೊಡುವನೆ
ಸಣ್ಣ ಕಮಲದಲೈದು ಬಣ್ಣಗಿಳಿಗಳ ಬರೆದ ಸಣ್ಣ ಸೀರೆಯ ಕೊಡುವನೆ
ಕಣ್ಣಿಗೆ ಬೇಕಾದ ಕನಕಮಯ ಕರೆದು ಕೈಯಲಿ ಕೊಡುವನೆ
ಬಿನ್ನಾಣವಾಡುತಲಿ ಬಗೆಬಗೆಯ ಮಾತಿನಲಿ ಬಾಯಿಮುದ್ದನೆ ಕೊಡುವನೆ ಓ ಸಖಿಯೆ ||೧||

ಕಳಿಯಡಿಕೆ ಅಲಗು ಕರ್ಪೂರ ಕಾಚನ ಗುಳಿಗೆ ಕರೆದು ಕೈಯಲಿ ಕೊಡುವನೆ
ಬೆಳದಿಂಗಳಲ್ಲಿ ಶೋಭಿಸುವ ಹೊಂಬಣ್ಣದ ಬಿಳಿಯೆಲೆಯ ನಿನಗೀವನೆ
ತಳಿತ ಮಾವಿನ ಚಿಗುರು ಇರುವ ರುಮಾಲೆಯ ತಲೆಯಲ್ಲಿ ಕಟ್ಟಿ ಬರುವನೆ
ಥಳಿಥಳಿಪ ನವಿಲಗರಿ ಮುತ್ತಿನ ತುರಾಯಿಯಿಟ್ಟು ತರುಣಿ ನಿನ್ನಲಿ ಬರುವನೆ ಓ ಸಖಿಯೆ   ||೨||

ಉರುಟಾಣಿ ಮುತ್ತು ಸರ ಉಚಿತವಾಗಿತ್ತು ನಿನ್ನ ಉರುಟು ಕುಚಗಳ ಪಿಡಿವನೆ
ಕಿರುನಗೆಯ ನಗುತಲಿ ಸರಸವಾಡುತ ನಿನ್ನ ಸೆರಗ ಪಿಡಿದು ಸೆಳೆವನೆ
ಕರಕಮಲದಿಂದಲಿ ಕಿರುಬೆವರು ಒರಸುತ ಕಸ್ತೂರಿಯ ಬೊಟ್ಟಿಡುವನೆ
ಸಿರಿಯರಸ ಹಯವದನ ಕೃಷ್ಣನ ಚರಣಕ್ಕೆ ಶರಣಿಪೊಕ್ಕಿನ್ನು ಸುಖಿಸೆ ಓ ಸಖಿಯೆ    ||೩||

Labels: ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ, Ishtu Dayavullavana Yake Barabedendi, ವಾದಿರಜರು, Vadirajaru

ಶುಕ್ರವಾರ, ಸೆಪ್ಟೆಂಬರ್ 13, 2013

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ : Hetta Tayiginta Atyadhika Mayavunte

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ

ಕೀರ್ತನಕಾರರು : ಕನಕದಾಸರು 
ರಾಗ : ಮೋಹನ 
ತಾಳ : ಅಟ 

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ 
ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ               ।।ಪ॥ 

ವಿತ್ತವುಳ್ಳವನ ಕುಲ ಎಣಿಸುವುದುಂಟೆ 
ಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ              ।।೧।।

ಅತ್ತೆಮನೆ ಸೇರುವಗೆ ಅಭಿಮಾನವುಂಟೆ 
ಬತ್ತಲೆ ತಿರುಗುವಗೆ ಭಯವು ಇನ್ನುಂಟೆ                ।।೨।।

ಪೃಥ್ವಿಯೊಳಗೆ ಕಾಗಿನೆಲೆಯಾದಿ ಕೇಶವಗೆ 
ಮರ್ತ್ಯದೊಳನ್ಯ ದೇವರು ಸರಿಯುಂಟೆ                ।।೩।।

Labels: ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ, Hetta Tayiginta Atyadhika Mayavunte, ಕನಕದಾಸರು

ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ : Apta Matidu Nija Prapta Janake

ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ

ಕೀರ್ತನಕಾರರು : ಗೋಪಾಲದಾಸರು
ರಾಗ : ರೀತಿ ಗೌಳ
ತಾಳ : ಆದಿ


ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ 
ಕುಪಿತರಾದರೆ ಕೇಳೆ ಅಪ್ರಾಪ್ತರು                          ।।ಪ॥ 

ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆ 
ನಿರಯವೇ ಪ್ರಾಪ್ತಿ ಸಂದೇಹವಿಲ್ಲ 
ಹಿರಿದು ಹರಿಗೋಲ ನಂಬಿ ಕಿರಿದ್ಹುಟ್ಟುಗಳ ಬಿಡಲು 
ಭರದಿ ಹೊಳೆದಾಟಿ ತಾ ದಾರಿಯ ಸೇರುವನೆ          ।।೧।।

ಕೃಷ್ಣನಲ್ಲಿ ದ್ವೇಷ ನಾರಾಯಣನಲ್ಲಿ ಭಕುತಿ 
ಎಷ್ಟು ಮಾಡಿದರು ಗತಿಪೊಂದುವನೆ 
ಸಿಟ್ಟಿನಲ್ಲಿ ಸರ್ಪನ ತುಟಿ ತುದಿಯ ಚಿವುಟಿದರೆ 
ಎಷ್ಟು ಸುಖ ಐದುವನು ನಷ್ಟವಿಲ್ಲದೆ                       ।।೨।।

ಹರಿಯಲ್ಲಿ ದ್ವೇಷ ಹರನಲ್ಲಿ ಭಕುತಿ ಮಾಡಿದರೆ 
ಪರಮಪದ ದೊರಕುವುದೆ ಮರುಳನಲ್ಲದೆ 
ಶರಧಿ ಆಶ್ರಯಿಸಿದ್ದ ಮಚ್ಚನ ಬಲಮಾಡಿ 
ಶರಧಿಯನು ದೂಷಿಸಲು ಹರುಷಬಡುವುದೆ             ।।೩।।

ಹರನ ದ್ವೇಷವ ಮಾಡಿ ಪೂಜೆಯ ಮಾಡೆ 
ಪರಮಗತಿಯಾಗುವುದೆ ಪತಿತನಿಗೆ 
ಹರವಿಯಿಲ್ಲದ ಪಾಕ ಕರವಿಟ್ಟು ಕಲಸಿದರೆ 
ವರ ಭೋಜನವು ಅವಗೆ ಒದಗಿ ಆಗುವುದೆ              ।।೪।।

ದೇವನಿಗೆ ಕರ್ತೃತ್ವ ಉಂಟು ಎಂದವ ಗೆದ್ದ 
ದೇವನಲ್ಲದೆ ಜೀವನೆನಲು ಬಿದ್ದ 
ಪಾವನ್ನಮೂರುತಿ ಗೋಪಾಲವಿಠಲನಂಘ್ರಿ
ಸೇವಕಗೇನು ಗತಿ ಅದವರಿಗೆ ಆಗಲಿ                     ।।೫।।

Labels: ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ, Apta Matidu Nija Prapta Janake, ಗೋಪಾಲದಾಸರು, Gopaladasaru

ರಂಗ ನಮ್ಮನೆಗೆ ಬಂದ : Ranga Nammanege Banda

ರಂಗ ನಮ್ಮನೆಗೆ ಬಂದ 

ಕೀರ್ತನಕಾರರು : ಗಲಗಲಿ ಅವ್ವನವರು

ರಂಗ ನಮ್ಮನೆಗೆ ಬಂದ ಮತ್ತೇನು ತಂದ                                     ।।ಪ॥ 

ಜಗದೋದ್ಧಾರನ ಸಭೆಗೆ ಬಂದ ನಗುವ ಪರಿಯ ಹೇಳಿದ್ದು ತಂದ
ಬಗೆ ಬಗೆ ವಸ್ತ್ರಕೊಳ್ಳಿರೆಂದ ಪಗಡಿ ಧರ್ಮಗೆ ತರಲಿಲ್ಲೆಂದ                 ।।೧।।

ವಾಣಿ ಮಾವ ಮನೆಗೆ ಬಂದ ಜಾಣತನವ ಹೇಳಿದ್ದು ತಂದ 
ಮಾಣಿಕ ಮುತ್ತುಕೊಳ್ಳಿರೆಂದ ಕ್ವಾಣವ ಧರ್ಮಗೆ ತರಲಿಲ್ಲಂದ            ।।೨।।

ಕೃಷ್ಣರಾಯ ಸಭೆಗೆ ಬಂದ ಎಷ್ಟು ಜಂಬ ಹೇಳಿದ್ದು ತಂದ 
ಪಟ್ಟಾವಳಿ ಕೊಳ್ಳಿರೆಂದ ಹುಟ್ಟು ಭೀಮಗೆ ತರಲಿಲ್ಲೆಂದ                     ।।೩।।

ನಳಿನಾಕ್ಷಸಭೆಯೊಳು ಬಂದ ಹೊಳೆವೊ ಎಷ್ಟು ಹೇಳಿದ್ದು ತಂದ 
ಝಳಿಸೋ ವಸ್ತ್ರಕೊಳ್ಳಿರೆಂದ ಬಳೆ ಪಾರ್ಥಗೆ ತರಲಿಲ್ಲೆಂದ               ।।೪।।

ರಾಜ್ಯ ಲಕ್ಷ್ಮಣನಿಗಿಲ್ಲೆಂದ ಮಾಜುದಾ ಕುಲ ಧರ್ಮ ಕುಂದ 
ತೇಜ ಮುಂದೆ ಓಡಿದ್ದು ಚೆಂದ ಸೋಜಿಗವಲ್ಲ ನಕುಲನೆಂದ              ।।೫।।


ಸುಮನಸರು ನಗುವೊರೆಂದ ಭ್ರಮೆಯ ಕಳೆದ್ಯೋ ಸಹದೇವ ಎಂದ 
ಅಮಿತದನವ ಕಾಯ್ವೋಛಂದ  ರಮಿಯರಸು ನಗುವನೆಂದ            ।।೬।।

ಅಂದ ಮಾತಿಗೆ ಬಲರಾಮ ಹೀಗೆಂದ ಚಂದವಾಯಿತು ಕುಶಲವೆಂದ 
ನಿಂದ್ಯವ ನೀ ಮಾಡಿಕೊ ಎಂದ ಇಂದಿರೇಶಗೆ ತಿಳಿಸಿರೆಂದ              ।।೭।।


Labels: ರಂಗ ನಮ್ಮನೆಗೆ ಬಂದ, Ranga Nammanege Banda, ಗಲಗಲಿ ಅವ್ವನವರು, Galagali Avvanavaru 

ಗುರುವಾರ, ಸೆಪ್ಟೆಂಬರ್ 12, 2013

ಹತ್ತೆಂಟು ಸಾಲಿನ ಬತ್ತಾಸದಂಗಡಿ : Hattentu Salina Battasadangadi

ಹತ್ತೆಂಟು ಸಾಲಿನ ಬತ್ತಾಸದಂಗಡಿ

ಕೀರ್ತನಕಾರರು : ಗಲಗಲಿ ಅವ್ವನವರು

ಹತ್ತೆಂಟು ಸಾಲಿನ ಬತ್ತಾಸದಂಗಡಿ 
ಭತ್ತದ ಅರಳು ಮೊದಲಾಗಿ 
ಭತ್ತದ ಅರಳು ಮೊದಲಾಗಿ ಸಕ್ಕರಿ ಬೊಂಬೆಯ 
ತಂದಿಟ್ಟು ಮಾರುವವರು ಕಡಿಮೆಯಿಲ್ಲ                          ।।ಪ॥ 

ಕುಂಕುಮ ಬುಕ್ಕಿಟ್ಟುಗಳ ಸಾಲು ಅಂಗಡಿ ಕುರಿತಾಗಿ 
ಕುಂಕುಮ ಅರಿಷಿಣ ಅಲಂಕಾರ ದ್ರವ್ಯವ ಅಂಕ ಅಂಕಣಕ ನೆರೆವ್ಯಾರೆ 
ಅಂಕ ಅಂಕಣಕ ನೆರೆವ್ಯಾರೆ ಬೆಲಿ ಮಾಡೊ 
ಕಂಕಣದ ಕೈಯ ಕೆಲದೆಯರು ಕಡಿಮೆಯಿಲ್ಲ                   ।।೧।।

ಬುಕ್ಕಿಟ್ಟು ಪರಿಮಳ ದ್ರವ್ಯ ಪೊಟ್ಟಣವ  ಕಟ್ಟಿ ಥರಥರವು 
ದ್ರವ್ಯವ ಕೊಟ್ಟು ಕೊಂಬುವರು ಕಡಿಮೆಯಿಲ್ಲ 
ಸೋಜಿಗವಾಗಿದ್ದ ಜಾಜಿ ಮಲ್ಲಿಗೆ ಹೂ ಸೂಜಿ ಮಲ್ಲಿಗೆ ಸರಗಳು 
ರಂಗ ಪೂಜೆಗೆ ಒಯ್ಯೋ ಪುರುಷರು                             ।।೨।।

ನಾಲ್ಕು ದಿಕ್ಕಿಗೆ ದಿವ್ಯ ಅಕಾಲ ಹಿಂಡುಗಳು ಸಾಕುವ ಎರಳೆ 
ಎಳಿಗಾವು ಎತ್ತೆತ್ತ ನೋಡಿದರು ಮುತ್ತಿನ ಪಲ್ಲಕ್ಕಿ 
ಉತ್ತಮ ರಥವು ಹಿಡಿದೇಜಿಯ 
ಹಿಡಿದೇಜಿಯ ಮ್ಯಾಲಿನ್ನು ಹತ್ತಿಬಾಹುವರು ಕಡಿಮೆಯಿಲ್ಲ   ।।೩।।

ಬಾಜಾರದೊಳಗಿನ್ನು ರಾಜ ಸಿಂಹಾಸನ 
ರಾಜ ರಮೇಶ ಕುಳಿತಲ್ಲಿಯೆ 
ರಾಜ ರಮೇಶ ಕುಳಿತು ಪೂಜಿಗೊಂಬೊ 
ಮೂರ್ಜಗವು ಮುದದಿಂದ                                         ।।೪।।

Labels: ಹತ್ತೆಂಟು ಸಾಲಿನ ಬತ್ತಾಸದಂಗಡಿ, Hattentu Salina Battasadangadi, ಗಲಗಲಿ ಅವ್ವನವರು, Galagali Avvanavaru

ಪಾಲಿಸೆ ಸರಸ್ವತಿ ಪಾಲಿಸೆ : Palise Saraswati Palise

ಪಾಲಿಸೆ ಸರಸ್ವತಿ ಪಾಲಿಸೆ

ಕೀರ್ತನಕಾರರು : ಗಲಗಲಿ ಅವ್ವನವರು

ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾಲಿಗೆ ಬಂದೆನು 
ಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ                  ।।ಪ॥ 

ಆದಿ ಬ್ರಹ್ಮನ ರಾಣಿಯೆ ವೇದಕ್ಕಭಿಮಾನಿಯೆ 
ಮೋದ ಗಾಯನ ಕುಶಳಲೆ 
ಮೋದ ಗಾಯನ ಕುಶಳಲೆ ಸರಸ್ವತಿ 
ನೀ ದಯಮಾಡಿ ಮತಿಯ ಕೊಡು                                  ।।೧।।

ಹೊನ್ನವರೆ ಹೊಸ ಕಪ್ಪುಬೆನ್ನಿನ ಮ್ಯಾಲಿನ ಹೆರಳು 
ಕಿನ್ನರಿ ನಿನ್ನ ಬಲಗೈಯ
ಕಿನ್ನರಿ ನಿನ್ನ ಬಲಗೈಯಲಿ ಹಿಡಕೊಂಡು 
ಖನಿ ಬಾ ನಮ್ಮ ವಚನಕ್ಕೆ                                            ।।೨।।

ಮಿತ್ರಿ ಸರಸ್ವತಿಗೆ  ಮುತ್ತಿನ ಉಡಿಯಕ್ಕಿ 
ಮತ್ತೆ ಮಲ್ಲಿಗೆಯ ನೆನೆದಂಡೆ 
ಮತ್ತೆ ಮಲ್ಲಿಗೆಯ ನೆನೆದಂಡೆ ತಂದಿದೆ 
ಪ್ರತ್ಯಕ್ಷವಾಗ ಸಭೆಯೊಳು                                            ।।೩।।

ಹರದಿ ಸರಸ್ವತಿಗೆ ಹವಳದ ಉಡಿಯಕ್ಕಿ 
ಅರಳು ಮಲ್ಲಿಗೆ ನೆನೆದಂಡೆ
ಅರಳು ಮಲ್ಲಿಗೆ ನೆನೆದಂಡೆ ತಂದಿದೆ 
ತಡೆಯದೆ ನಮಗೆ ವರವಕೊಡು                                    ।।೪।।

ಗುಜ್ಜಿಸರಸ್ವತಿಗೆ ಗೆಜ್ಜಿಸರಪಳಿಯಿಟ್ಟು 
ವಜ್ರ ಮಾಣಿಕ್ಯದಾಭರಣ 
ವಜ್ರ ಮಾಣಿಕ್ಯದಾಭರಣ ಭೂಷಿತಳಾಗಿ 
ನಿರ್ಜರೊಳುತ್ತಮಳೆ ನಡೆ ಮುಂದೆ                                 ।।೫।।

ಹರಡಿ ಸರಸ್ವತಿ-ಸರಿಗೆ ದಾರಿಗಳಿಟ್ಟು 
ಜರದ ಸೀರೆಯನೆ ನಿರಿದಿಟ್ಟು 
ಜರದ ಸೀರೆಯನೆ ನಿರಿದಿಟ್ಟು ಬಾರಮ್ಮ
ದೊರೆ ರಾಮೇಶನ ಅರಮನೆಗೆ                                     ।।೬।।

Labels: ಪಾಲಿಸೆ ಸರಸ್ವತಿ ಪಾಲಿಸೆ, Palise Saraswati Palise, ಗಲಗಲಿ ಅವ್ವನವರು, Galagali Avvanavaru 

ಕೋಲೆನ್ನಿ ಕೋಮಲೆಯರು : Kolenni Komaleyaru

ಕೋಲೆನ್ನಿ ಕೋಮಲೆಯರು

ಕೀರ್ತನಕಾರರು : ಗಲಗಲಿ ಅವ್ವನವರು 

ಕೋಲೆನ್ನಿ ಕೋಮಲೆಯರು ಅಮ್ಮಯ್ಯ 
ಮುಯ್ಯ ಮೇಲೆನ್ನಿ ಮೇಲೆನ್ನಿರಿ ಅಕ್ಕಯ್ಯ          ।।ಪ॥ 

ಇಂದು ಗುರುಗಳಂಘ್ರಿಗೆರಗಿ ಅಮ್ಮಯ್ಯ
ಸುಭದ್ರೆ ತಂದ ಮುಯ್ಯ ರಚಿಪೆನಕ್ಕಯ್ಯ           ।।೧।।

ನಿಷ್ಠಿಲೆ ಗುರುಗಳಿಗೆ ನಮಿಸಿ ಅಮ್ಮಯ್ಯ 
ದ್ರೌಪದಿ ಕೊಟ್ಟ ಮುಯ್ಯವ ರಚಿಪೆ ಅಕ್ಕಯ್ಯ       ।।೨।।

ಅರ್ಚಿಸಿ ಗುರುಗಳ ಪಾದ ಅಮ್ಮಯ್ಯ 
ಭಾವೆ ಚರ್ಚಾ ಮಾತುಗಳನ್ನೆ ರಚಿಪೆನಕ್ಕಯ್ಯ   ।।೩।।

ಮುಖ್ಯ ಗುರುಗಳಂಘ್ರಿಗೆರಗಿ ಅಮ್ಮಯ್ಯ 
ರುಕ್ಮಿಣಿ ನಕ್ಕು ನುಡಿದ ನುಡಿಯ ರಚಿಪೆನಕ್ಕಯ್ಯ  ।।೪।।

ನಮ್ಮ ಗುರುಗಳಂಘ್ರಿಗೆರಗಿ ಅಮ್ಮಯ್ಯ 
ಪಾರ್ಥ ರಮಿಯರಸನ ಮಹಿಮೆ ರಚಿಪೆನಕ್ಕಯ್ಯ   ।।೫।।

Lables: ಕೋಲೆನ್ನಿ ಕೋಮಲೆಯರು, Kolenni Komaleyaru, ಗಲಗಲಿ ಅವ್ವನವರು, Galagali Avvanavaru

ಆನೆ ಬಂತಾನೆ ಬಂತಾನೆ : Ane Bantane Bantane

ಆನೆ ಬಂತಾನೆ ಬಂತಾನೆ

ಕೀರ್ತನಕಾರರು : ಪ್ರಸನ್ನ ವೆಂಕಟದಾಸರು

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ
ದಾನವ ಕದಳಿಯಕಾನನ ಮುರಿಯುತ              ||ಪ||

ಗುಂಗುರುಗುರುಳ ನೀಲಾಂಗ ಚೆಲ್ವಾನೆ
ಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆ
ಬಂಗಾರದಣುಗಂಟೆ ಶೃಂಗಾರದಾನೆ
ಮಂಗಳ ತಿಲಕದ ರಂಗನೆಂಬಾನೆ                    ||೧||

ಕೆಳದಿ ಗೋಪಿಯರೊಳು ಗೆಳೆತನದಾನೆ
ಸುಲಭದಿಂದಲಿಯುವ ಎಳೆಮರಿ ಆನೆ
ಘಲಿರುಘಲಿರುರವದಿ ನಲಿದಾಡೋ ಆನೆ
ಮಲೆತವರೆದೆಮ್ಯಾಲೆ ತುಳಿದಾಡೋ ಆನೆ         ||೨||

ನಳಿನಜಭವರಿಗೆ ಸಿಲುಕದ ಆನೆ
ಒಲವಿಂದ ಭಕುತರ ಸಲಹುವ ಆನೆ
ಹಲವು ಕವಿಗಳೀಗೆ ನಿಲುಕದ ಆನೆ
ಬಲ ಪ್ರಸನ್ವೆಂಕಟ ನಿಲಯನೆಂಬಾನೆ               ||೩||

Labels: ಆನೆ ಬಂತಾನೆ ಬಂತಾನೆ, Ane Bantane Bantane, ಪ್ರಸನ್ನ ವೆಂಕಟದಾಸರು, Prasanna Venkatadasaru

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ, Sharanembe Vani Poreye Kalyani

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ                                 ||ಪ||

ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ   ||ಅ.ಪ||

ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ                            ||೧||

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರ                                         ||೨||

Labels: ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ, Sharanembe Vani Poreye Kalyani, ಪುರಂದರದಾಸರು, Purandaradasaru

ಕೃಷ್ಣ ಬಾರೊ ಕೃಷ್ಣ ಬಾರೋ : Krishna Baro Krishna Baro

ಕೃಷ್ಣ ಬಾರೊ ಕೃಷ್ಣ ಬಾರೋ

ಕೀರ್ತನಕಾರರು : ಪುರಂದರದಾಸರು

ಕೃಷ್ಣ ಬಾರೊ ಕೃಷ್ಣ ಬಾರೋ
ಕೃಷ್ಣಯ್ಯ ನೀ ಬಾರಯ್ಯ                             ||ಪ||

ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ           ||ಅ||

ಮನ್ಮಥಜನಕನೆ ಬೇಗನೆ ಬಾರೊ
ಕಮಲಾಪತಿ ನೀ ಬಾರೊ
ಅಮಿತಪರಾಕ್ರಮ ಶಂಕರ ಬಾರೊ
ಕಮನೀಯ ಗಾತ್ರನೆ ಬಾರಯ್ಯ ದೊರೆಯೆ       ।।೧।।

ಸುರುಳು ಕೇಶಗಳ ಒಲಿವ ಅಂದ
ಭರದ ಕಸ್ತೂರಿ ತಿಲಕದ ಚಂದ
ಶಿರದಿ ಒಪ್ಪುವ ನವಿಲುಕಣ್ಗಳಿಂದ
ತರತರದ ಆಭರಣಗಳ ಧರಿಸಿ ನೀ ಬಾರೊ      ।।೨।।

ಹಾಲುಬೆಣ್ಣೆಗಳ ಕೈಯಲಿ ಕೊಡುವೆ
ಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆ
ಜಾಲ ಮಾಡದೆ ಬಾರಯ್ಯ ಮರಿಯೆ
ಬಾಲ ಎನ್ನ ತಂದೆ ಪುರಂದರವಿಠಲ                ।।೩।।

Labels: ಕೃಷ್ಣ ಬಾರೊ ಕೃಷ್ಣ ಬಾರೋ, Krishna Baro Krishna Baro, ಪುರಂದರದಾಸರು, Purandaradasaru

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ : Hyange Bareditto Prachinadalli

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ

ಕೀರ್ತನಕಾರರು : ಪುರಂದರದಾಸರು
ರಾಗ : ಮೋಹನ
ತಾಳ : ಛಾಪು

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ           ||ಪ||

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಅದು ಹಾರಿಹೋದಂತೆ        ||೧||

ಸಂತೆ ನೆರೆಯಿತು ನಾನಾ ಪರಿ
ತಿರುಗಿ ಹಿಡಿಯಿತು ತಮ್ಮ ತಮ್ಮ ದಾರಿ   ||೨||

ಆಡುವ ಮಕ್ಕಳು ಮನೆಯ ಕಟ್ಟಿದರು
ಆಟ ಸಾಕೆಂದು ಮುರಿದೋಡಿದರು         ||೩||

ವಸತಿಕಾರನು ವಸತಿಗೆ ಬಂದಂತೆ
ಹೊತ್ತಾರೆದ್ದು ಹೊರಟು ಹೋದಂತೆ        ||೪||

ಸಂಸಾರ ಪಾಶವ ನೀನೇ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ           ||೫||

Labels: ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ, Hyange Bareditto Prachinadalli, ಪುರಂದರದಾಸರು, Purandaradasaru

ಬುಧವಾರ, ಸೆಪ್ಟೆಂಬರ್ 11, 2013

ವೆಂಕಟರಮಣನೆ ಬಾರೋ : Venkataramanane Baro

ವೆಂಕಟರಮಣನೆ ಬಾರೋ

ಕೀರ್ತನಕಾರರು : ಪುರಂದರದಾಸರು
ರಾಗ : ನಾಟಕುರುಂಜಿ
ತಾಳ : ರೂಪಕ

ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ              ||ಪ||

ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ              ||ಅ.ಪ||

ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ         ||೧||

ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೇ ಬಾರೋ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ    ||೨||

ಕಾಮನಯ್ಯ ಕರುಣಾಳು ಶ್ಯಾಮಲ ವರ್ಣನೆ ಬಾರೋ
ಕೋಮಾಳಾಂಗ ಶ್ರೀಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ  ||೩||

Labels: ವೆಂಕಟರಮಣನೆ ಬಾರೋ, Venkataramanane Baro, ಪುರಂದರದಾಸರು, Purandaradasaru

ರಾಯಬಾರೊ ತಂದೆತಾಯಿ ಬಾರೊ : Raya Baro Tande Tayi Baro

ರಾಯಬಾರೊ ತಂದೆತಾಯಿ ಬಾರೊ

ಕೀರ್ತನಕಾರರು : ಜಗನ್ನಾಥದಾಸರು
ರಾಗ : ಪೂರ್ವಿ
ತಾಳ : ಆದಿ

ರಾಯಬಾರೊ ತಂದೆತಾಯಿ ಬಾರೊ
ನಮ್ಮ ಕಾಯಿ ಬಾರೊ
ಮಾಯಿಗಳ ಮರ್ದಿಸಿದ ರಾಘವೇಂದ್ರ                          ||ಪ||

ವಂದಿಪ ಜನರಿಗೆ ಮಂದಾರ ತರುವಂತೆ
ಕುಂದದಭೀಷ್ಟೆಯ ಸಲಿಸುತಿಪ್ಪ ಸುರಮುನಿ
ಮಂದನ ಮತಿಗೆ ರಾಘವೇಂದ್ರ ರಾಯಬಾರೊ               ||೧||

ಭಾಸುರಚರಿತನೆ ಭೂಸುರವಂದ್ಯನೆ
ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ
ದೇಶಿಕರೊಡೆಯ ರಾಘವೇಂದ್ರ ರಾಯಬಾ                     ||೨||

ರಾಮಪದಸರಸೀರುಹಭೃಂಗ ಕೃಪಾಂಗ
ಭ್ರಾಮಕಜನರ ಮತಭಂಗ ಮಾಡಿದ
ಧೀಮಂತರೊಡೆಯನೆ ರಾಘವೇಂದ್ರ ರಾಯಬಾರೊ         ||೩||

ಆರು ಮೂರೇಳು ನಾಲ್ಕೆಂಟು ಗ್ರಂಥಸಾರಾರ್ಥ
ತೋರಿಸಿದೆ ಸರ್ವರಿಗೆ ಸರ್ವಜ್ಞ
ಸೂರಿಗಳರಸನೆ ರಾಘವೇಂದ್ರ ರಾಯಬಾರೊ                 ||೪||

ಭೂತಳನಾಥನ ಭೀತಿಯ ಬಿಡಿಸಿದೆ
ಪ್ರೇತತ್ವ ಕಳೆದೆ ಮಹಿಷಿಯ ಶ್ರೀಜಗ
ನ್ನಾಥವಿಠಲನ ಪ್ರೀತಿಪಾತ್ರ ರಾಘವೇಂದ್ರ ರಾಯಬಾರೊ  ||೫||

Labels: ರಾಯಬಾರೊ ತಂದೆತಾಯಿ ಬಾರೊ, Raya Baro Tande Tayi Baro, ಜಗನ್ನಾಥದಾಸರು, Jagannathadasaru

ಮಂಗಳಾರತಿ ತಂದು ಬೆಳಗಿರೆ : Mangalarati Tandu Belagire

ಮಂಗಳಾರತಿ ತಂದು ಬೆಳಗಿರೆ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವನವರು

ಮಂಗಳಾರತಿ ತಂದು ಬೆಳಗಿರೆ
ಅಂಬುಜಾಸನ ರಾಣಿಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ
ಶಶಿ ಬಿಂಬೆಗೆ                                            ||ಪ||

ಶುದ್ಧ ಸ್ನಾನವ ಮಾಡಿ ನದಿಯಲಿ
ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ                             ||೧||

ಎರೆದು ಪೀತಾಂಬರವನುಡಿಸಿ
ಸರ್ವಾಭರಣವ ರಚಿಸಿದ
ಹರಳಿನೋಲೆ ವಜ್ರಮೂಗುತಿ
ವರಮಹಾಲಕ್ಷ್ಮಿ ದೇವಿಗೆ                              ||೨||

ಹುಟ್ಟುಬಡವೆಯ ಕಷ್ಟಕಳೆದು
ಕೊಟ್ಟಳರಸನ ಸಿರಿಯನು
ಹೆತ್ತ ಕುಮರನ ತೋರಿದಂಥ
ಶುಕ್ರವಾರದ ಲಕ್ಷ್ಮಿಗೆ                                   ||೩||

ನಿಗಮ ವೇದ್ಯಳೆ ನಿನ್ನ ಗುಣಗಳ
ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಏನುತ
ಜಗದೊಡೆಯನ ಭೀಮೇಶ ಕೃಷ್ಣನ ರಾಣಿಗೆ      ||೪||

Labels: ಮಂಗಳಾರತಿ ತಂದು ಬೆಳಗಿರೆ, Mangalarati Tandu Belagire
, ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ನಮೋ ನಮಸ್ತೇ ನರಸಿಂಹ : Namo Namaste Narasimha Deva

ನಮೋ ನಮಸ್ತೇ ನರಸಿಂಹ ದೇವಾ

ಕೀರ್ತನಕಾರರು : ಜಗನ್ನಾಥ ದಾಸರು

ನಮೋ ನಮಸ್ತೇ ನರಸಿಂಹ ದೇವಾ ಸ್ಮರಿಸುವವರ ಕಾವ
ಸುಮಹಾತ್ಮ ನಿನಗೆಣೆ ಲೋಕದೊಳಗಾವ ತ್ರಿಭುವನ ಸಂಜೀವಾ
ಉಮೆಯರಸ ಹೃತ್ಕಮಲದ್ಯುಮಣಿ
ಮಾ ರಮಣ ಕನಕ ಸಂಯಮಿವರವರದಾ                     
||ಪ||

ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕಶರಣ್ಯ
ಶಫರಕೇತುಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯ
ಕಶಿಪುತನಯನ ಕಾಯ್ದೆಪೆನೆನುತಲಿ
ನಿಷ್ಕಪಟ ಮನುಜಹರಿವಪುಷ ನೀನಾದೆ                         ||೧||

ವೇದವೇದಾಂಗವೇದ್ಯ ಸಾಧ್ಯ ಅಸಾಧ್ಯ
ಶ್ರೀದ ಮುಕ್ತಾಮುಕ್ತಾರಾಧ್ಯ
ಅನುಪಮ ಅನವದ್ಯ ಮೋದಮಯನೆ ಪ್ರಹ್ಲಾದ
ವರದ ನಿತ್ಯೋದಯ ಮಂಗಳ ಪಾದಕಮಲಕೆ                   ||೨||

ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ
ನಿನಗೆ ಬಿನ್ನೈಪೆ ಎನ್ನಯ ಮಾತ ಲಾಲಿಸುವದು ತಾತ
ಗಣನೆಯಿಲ್ಲದವಗುಣವೆನಿಸಿದೆ ಪ್ರತಿ
ಕ್ಷಣಕೆ ಕಥಾಮೃತ ಉಣಿಸು ಕರುಣದಿ                             ||೩||

Labels: ನಮೋ ನಮಸ್ತೇ ನರಸಿಂಹ, Namo Namaste Narasimha Deva, ಜಗನ್ನಾಥ ದಾಸರು, Jagannathadasaru

ವೀರ ಹನುಮ ಬಹು ಪರಾಕ್ರಮಾ : Veera Hanuma Baru Parakrama

ವೀರ ಹನುಮ ಬಹು ಪರಾಕ್ರಮಾ

ಕೀರ್ತನಕಾರರು : ಪುರಂದರದಾಸರು
ರಾಗ : ರೇಗುಪ್ತಿ
ತಾಳ : ಅಟ್ಟ

ವೀರ ಹನುಮ ಬಹು ಪರಾಕ್ರಮಾ                                   ||ಪ||

ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ                        ||ಅ.ಪ||

ರಾಮ ದೂತನೆನೆಸಿಕೊಂಡೆ ನೀ
ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆ ಇತ್ತು ಜಗತಿಗೆಲ್ಲ ಹರುಷವಿತ್ತು
ಚೂಡಾಮಣಿಯ ರಾಮಗಿತ್ತು ಲೋಕಕೆ ಮುತ್ತೆನಿಸಿಬರುವ     ||೧||

ಗೋಪಿಸುತನ ಪಾದಪೂಜಿಸಿ
ಗದೆಯ ಧರಿಸಿ ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ      ||೨||

ಮಧ್ಯಗೆಹನಲ್ಲಿ ಜನಿಸಿ ನೀ
ಬಾಲ್ಯದಲ್ಲಿ ಮತ್ಸರಿಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ             ||೩||

Labels: ವೀರ ಹನುಮ ಬಹು ಪರಾಕ್ರಮಾ, Veera Hanuma Baru Parakrama, ಪುರಂದರದಾಸರು, Purandaradasaru

ವೆಂಕಟೇಶ ಬೇಡಿಕೊಂಬೆ : Venkatesha Bedikombe

ವೆಂಕಟೇಶ ಬೇಡಿಕೊಂಬೆ

ಕೀರ್ತನಕಾರರು : ಪುರಂದರದಾಸರು

ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ
ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ    ||ಪ||

ನಷ್ಟ ಮೊದಲಾದಂಥ ಕಷ್ಟ ಬಿಡಿಸೊ
ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ
ಇಷ್ಟ ಭಕ್ತಜನರೊಳು ಎನ್ನ ಸೇರಿಸೊ
ಈ ಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ       ||೧||

ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ
ಪೊಂಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ
ಗಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ
ಮುಂದೆ ಹುಟ್ಟಿ ಇಹ ಜನ್ಮಂಗಳ ಎನಗೆ ಬಿಡಿಸೊ       ||೨||

ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ
ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ
ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ ಸ್ವಾಮಿ
ದಿಟ್ಟ ಪುರಂದರ ವಿಠಲನೆ ದಯದಿ ಪಾಲಿಸೊ          ||೩||

Labels: ವೆಂಕಟೇಶ ಬೇಡಿಕೊಂಬೆ, Venkatesha Bedikombe, ಪುರಂದರದಾಸರು, Purandaradasaru

ಲಂಬೋದರ ಲಕುಮಿ ಕರಾ : Lambodara Lakumi Kara

ಲಂಬೋದರ ಲಕುಮಿ ಕರಾ

ಕೀರ್ತನಕಾರರು : ಪುರಂದರದಾಸರು
ರಾಗ : ಮಲಹರಿ
ತಾಳ : ರೂಪಕ

ಲಂಬೋದರ ಲಕುಮಿ ಕರಾ ಅಂಬಾ ಸುತ ಅಮರ ವಿನುತ         ||ಪ||

ಶ್ರೀ ಗಣನಾಥ ಸಿಂಧೂರ ವರ್ಣ ಕರುಣ ಸಾಗರ ಕರಿ ವಾದನ      ||೧||

ಸಿದ್ಧ ಚರಣ ಗಣ ಸೇವಿತ ಸಿದ್ಧಿ ವಿನಾಯಕ ತೇ ನಮೋ ನಮೋ   ||೨||

ಸಕಲ ವಿದ್ಯಾ ಆದಿ ಪೂಜಿತ ಸರ್ವೋತ್ತಮ ತೇ ನಮೋ ನಮೋ  ||೩||

Labels: ಲಂಬೋದರ ಲಕುಮಿ ಕರಾ, Lambodara Lakumi Kara, ಪುರಂದರದಾಸರು, Purandaradasaru

ನೀಕರುಣಿಸೋ ವಿಠ್ಠಲ : Nee Karuniso Vithala

ನೀಕರುಣಿಸೋ ವಿಠ್ಠಲ

ಕೀರ್ತನಕಾರರು : ಪ್ರಸನ್ನ ವೆಂಕಟದಾಸರು

ನೀಕರುಣಿಸೋ ವಿಠ್ಠಲ ನಮ್ಮ ಸಾಕೋ ಪಂಡರಿ ವಿಠ್ಠಲಾ                  ||ಪ||

ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಠ್ಠಲಾ
ನಾಸುವೆಯಷ್ಟು ಬಕುತಿಯನರಿಯೆನು ಶೇಷಶಯನ ಹರಿ ವಿಠಲಾ       ||೧||

ಭವಸಾಗರದೊಳು ಮುಳಿಗುವೆ ಸುಮ್ಮನೆ ಅವಲೋಕಿಪರೆ ವಿಠ್ಠಲಾ
ನವನವ ವಿಷಯಕೆ ಹಿಗ್ಗುತಲಿಹ ಮನದವಸರ ಕಾಯೊ ವಿಠ್ಠಲಾ          ||೨||

ನಿಶಿದಿನ ಅಶನಾ ವಸನಕೆ ಹೆಣಗಿ ಹುಸಿಯ ಸಂಗ್ರಹಿಸಿದೆ ವಿಠ್ಠಲಾ
ನಿಷೇಧ ಮಾಯ ಇಲ್ಲವು ನರಕದ ಗಸಣಿಗೆ ಅಂಜುವೆ ವಿಠ್ಠಲಾ            ||೩||

ತನು ಸಂಬಂಧಿಗಳತಿಕಾಯಾರ್ಥರು ಎನಗ್ಯಾರಿಲ್ಲೊ ವಿಠ್ಠಲಾ
ಬಿನುಗುಮಾನವರ ಅನುಸರಣಿಯಲಿ ದಣಿಸದಿರಯ್ಯ ವಿಠ್ಠಲಾ            ||೪||

ಝವಕೆ ಮಾಡುವೆ ಸಾವಿರ ತಪ್ಪನು ಕಾಯೋ ದಯಾಂಬುದಿ ವಿಠ್ಠಲಾ
ಶ್ರೀವರ ಪ್ರಸನ್ನವೆಂಕಟವಿಠಲಾ ಜೀವಕೆ ಹೊಣೆ ನೀ ವಿಠಲಾ             ||೫||

Labels: ನೀಕರುಣಿಸೋ ವಿಠ್ಠಲ, Nee Karuniso Vithala, ಪ್ರಸನ್ನ ವೆಂಕಟದಾಸರು, Prasanna Venkatadasaru

ವಂದಿಸುವದಾದಿಯಲಿ ಗಣನಾಥನ : Vandisuvadadiyali Gananathana

ವಂದಿಸುವದಾದಿಯಲಿ ಗಣನಾಥನ

ಕೀರ್ತನಕಾರರು : ಪುರಂದರದಾಸರು
ರಾಗ : ನಾಟ
ತಾಳ : ಖಂಡಛಾಪು

ವಂದಿಸುವದಾದಿಯಲಿ ಗಣನಾಥನ                    ||ಪ||

ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು         ||ಅ.ಪ||

ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನು ಕೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು                ||೧||

ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು               ||೨||

ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿಪುರಂದರವಿಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ            ||೩||

Labels: ವಂದಿಸುವದಾದಿಯಲಿ ಗಣನಾಥನ, Vandisuvadadiyali Gananathana, ಪುರಂದರದಾಸರು, Purandaradasaru

ರಾಮ ಮಂತ್ರವ ಜಪಿಸೋ : Rama Mantrava Japiso

ರಾಮ ಮಂತ್ರವ ಜಪಿಸೋ

ಕೀರ್ತನಕಾರರು : ಪುರಂದರದಾಸರು
ರಾಗ : ಜೌನ್ ಪುರಿ
ತಾಳ : ಆದಿ

ರಾಮ ಮಂತ್ರವ ಜಪಿಸೋ ಹೇ ಮನುಜ                 ||ಪ||

ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ       ||ಅ.ಪ||

ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆ ಕೊಂಬುವ ಮಂತ್ರ      ||೧||

ಜ್ಞಾನನಿಧಿ ನಮ್ಮ ಆನಂದತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರವಿಠಲನ ಮಂತ್ರ                  ||೨||

Labels: ರಾಮ ಮಂತ್ರವ ಜಪಿಸೋ, Rama Mantrava Japiso, ಪುರಂದರದಾಸರು, Purandaradasaru

ಸ್ಮರಿಸೊ ಸರ್ವದ ಹರಿಯ : Smariso Sarvada Hariya

ಸ್ಮರಿಸೊ ಸರ್ವದ ಹರಿಯ

ಕೀರ್ತನಕಾರರು : ಪುರಂದರದಾಸರು
ರಾಗ : ಹಮೀರ್ ಕಲ್ಯಾಣಿ
ತಾಳ : ಆದಿ

ಸ್ಮರಿಸೊ ಸರ್ವದ ಹರಿಯ                     ||ಪ||

ಸುರವರ ದೊರೆಯ ಕರುಣಾನಿಧಿಯ         ||ಅ.ಪ||

ಮುನಿಜನ ವಂದ್ಯನ ಮನಸಿಜನಯ್ಯನ
ಮನದಲಿ ಅನುದಿನ ನೆನೆಯೊ ಹರಿಯ       ||೧||

ವರಗುಣಪೂರ್ಣನ ಸರಸಿಜನೇತ್ರನ
ಪರವಾಸುದೇವನ ಪ್ರಾಣದ ಪ್ರಿಯನ         ||೨||

ವೆಂಕಟರಮಣನ ಸಂಕಟಹರಣನ
ಲಕ್ಷ್ಮೀರಮಣನ ಪುರಂದರವಿಠಲನ           ||೩||

Labels: ಸ್ಮರಿಸೊ ಸರ್ವದ ಹರಿಯ, Smariso Sarvada Hariya, ಪುರಂದರದಾಸರು, Purandaradasaru

ರಾಮ ರಾಮ ರಾಮ ಎನ್ನಿರೋ : Rama Rama Rama Enniro

ರಾಮ ರಾಮ ರಾಮ ಎನ್ನಿರೋ

ಕೀರ್ತನಕಾರರು : ಪುರಂದರದಾಸರು
ರಾಗ : ಚಾರುಕೇಶಿ
ತಾಳ : ಆದಿ

ರಾಮ ರಾಮ ರಾಮ ಎನ್ನಿರೋ ಇಂಥ
ಸ್ವಾಮಿಯ ನಾಮವ ಮರೆಯದಿರೋ           ||ಪ||

ತುಂಬಿದ ಪಟ್ಟಣಕೊಂಭತ್ತು ಭಾಗಿಲು
ಸಂಭ್ರಮದರಸರು ಐದು ಮಂದಿ
ಡಂಭಕತನದಿಂದ ತಿರುಗುವ ಕಾಯವ
ನಂಬಿ ನೆಚ್ಚಿ ನೀವು ಕೆಡಬೇಡಿರೊ               ||೧||

ನೆಲೆ ಇಲ್ಲದ ಕಾಯ ಎಲುವಿನ ಪಂಜರ
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವು ಕ್ರಿಮಿಗಳಿಂದ
ಭರಿತ ದೇಹವ ನೆಚ್ಚಿ ಕೆಡಬೇಡಿರೊ            ||೨||

ಹರಿ ಬ್ರಹ್ಮ ಸುರರಿಂದ ವಂದಿತ ಆಗಿಪ್ಪ
ಹರಿ ಸರ್ವೋತ್ತಮನೆಂದೆನ್ನಿರೊ
ಪುರಂದರವಿಠಲನ ಚರಣವ ಭಜಿಸಿರೊ
ದುರಿತ ಭಯಗಳಿಂದ ದೂರಾಗಿರೊ           ||೩||

Labels: ರಾಮ ರಾಮ ರಾಮ ಎನ್ನಿರೋ, Rama Rama Rama Enniro, ಪುರಂದರದಾಸರು, Purandaradasaru

ನರಸಿಂಹನ ಪಾದ ಭಜನೆಯ : Narasimhana Pada Bhajaneya

ನರಸಿಂಹನ ಪಾದ ಭಜನೆಯ

ಕೀರ್ತನಕಾರರು : ಪುರಂದರದಾಸರು

ನರಸಿಂಹನ ಪಾದ ಭಜನೆಯ ಮಾಡೋ          ||ಪ ||
ದುರಿತ ಪರ್ವತವ ಖಂಡಿಸುವ ಕುಲಿಶದಂತೆ      ||ಅ.ಪ||

ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ         ||೧||

ತರಳನ ಮೊರೆ ಕೇಳಿ ತ್ವರಿತದಲಿ ಬಂದು
ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ        ||೨||

ಹರಿ ವಿರಿಂಚಾರಾದ್ಯರು ಕರವೆತ್ತಿ ಮುಗಿಯಲು
ಪರಮ ಶಾಂತನಾದ ಪುರಂದರವಿಠಲ             ||೩||

Labels: ನರಸಿಂಹನ ಪಾದ ಭಜನೆಯ, Narasimhana Pada Bhajaneya, ಪುರಂದರದಾಸರು, Purandaradasaru

ಪಿಳ್ಳಂಗೋವಿಯ ಚೆಲುವ ಕೃಷ್ಣನ : Pillangoviya Chelva Krishnana

ಪಿಳ್ಳಂಗೋವಿಯ ಚೆಲುವ ಕೃಷ್ಣನ

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ
ತಾಳ : ತ್ರಿವಿಡೆ

ಪಿಳ್ಳಂಗೋವಿಯ ಚೆಲುವ ಕೃಷ್ಣನ
ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ                 ||ಪ||

ಎಲ್ಲಿ ನೋಡಿದರಲ್ಲಿ ತನಿಲ್ಲದಿಲ್ಲವೆಂದು ಬಲ್ಲ ಜಾಣರು     ||ಅ.ಪ||

ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ ಚಂದದ ಗೋಪಬಾಲರ ವೃಂದ್ವೃಂದದಲಿ
ಸುಂದರಾಂಗದ ಸುಂದರಿಯರ ಹಿಂದುಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ        ||೧||

ಶ್ರೀ ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ
ಅಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು ಸದಾ ಬಾಗಿ ಪಡುವ ರಾಗ ರಾಗದಲಿ        ||೨||

ಈ ಚರಾಚರದೊಳಗೆ ಜನಂಗಳಾಚೆ ಈಚೆಯಲಿ
ಖೇಚರೇಂದ್ರನ ಸುತನ ರಥದ ಚೌಕ ಪೀಠದಲಿ
ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಂಡದ ಪುರಂದರವಿಠಲನ ಲೋಚನಾಗ್ರದಲಿ    ||೩||

Labels: ಪಿಳ್ಳಂಗೋವಿಯ ಚೆಲುವ ಕೃಷ್ಣನ, Pillangoviya Chelva Krishnana, ಪುರಂದರದಾಸರು, Purandaradasaru

ಲಾಲಿಸಿದಳು ಮಗನ ಯಶೋದೆ : Lalisidalu Magana Yashode

ಲಾಲಿಸಿದಳು ಮಗನ ಯಶೋದೆ

ಕೀರ್ತನಕಾರರು : ಪುರಂದರದಾಸರು
ರಾಗ : ಆರಭಿ
ತಾಳ : ಆದಿ

ಲಾಲಿಸಿದಳು ಮಗನ ಯಶೋದೆ
ಲಾಲಿಸಿದಳು ಮಗನ                                        ||ಪ||

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ              ||೧||

ಬಾಲಕನೆ ಕೆನೆ ಹಾಲು ಮೊಸರನೀವೇ
ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು     ||೨||

ಮುಗುಳುನಗೆಯಿಂದ ಮುದ್ದು ತಾತಾರೆಂದು
ಜಗದೊಡೆಯನೇ ಶ್ರೀಪುರಂದರವಿಠಲನ               ||೩||

Labels: ಲಾಲಿಸಿದಳು ಮಗನ ಯಶೋದೆ, Lalisidalu Magana Yashode, ಪುರಂದರದಾಸರು, Purandaradasaru

ತುಂಗಾತೀರ ವಿರಾಜಂ ಶ್ರೀಗುರು : Tungateera Virajam

ತುಂಗಾತೀರ ವಿರಾಜಂ ಶ್ರೀಗುರು

ಕೀರ್ತನಕಾರರು : ಕಮಲೇಶ ವಿಠಲ

ತುಂಗಾತೀರ ವಿರಾಜಂ ಶ್ರೀಗುರು
ರಾಘವೇಂದ್ರ ಯತಿರಾಜಂ ಭಜಮನ               ||ಪ||

ಮಂಗಲಕರ ಮಂತ್ರಾಲಯವಾಸಂ
ಶೃಂಗಾರಾನನ ವಿಲಸಿತಹಹಾಸಂ
ರಾಘವೇಂದ್ರ ಯತಿರಾಜಂ ಭಜಮನ               ||೧||

ಕರಧೃತ ದಂಡ ಕಮಂಡಲು ಮಾಲಂ
ಸುರುಚಿರ ಚೇಲಮ್ ಧೃತ ಮಣಿ ಮಾಲಂ
ನಿರುಪಮ ಸುಂದರ ಕಾಯಂ ಸುಶೀಲಂ
ವರಕಮಲೇಶಾರ್ಪಿತ ನಿಜ ಸಕಲಂ
ರಾಘವೇಂದ್ರ ಯತಿರಾಜಂ ಭಜಮನ               ||೨||

Labels: ತುಂಗಾತೀರ ವಿರಾಜಂ ಶ್ರೀಗುರು, Tungateera Virajam, ಕಮಲೇಶ ವಿಠಲ, Kamalesha Vithala

ವಾದಿರಾಜ ಮುನಿಪಾ ಹಯಮುಖ : Vadiraja Munipa Hayamukha

ವಾದಿರಾಜ ಮುನಿಪಾ ಹಯಮುಖ

ಕೀರ್ತನಕಾರರು : ಗೋಪಾಲದಾಸರು
ರಾಗ : ಖರಹರಪ್ರಿಯ
ತಾಳ : ಆದಿ

ವಾದಿರಾಜ ಮುನಿಪಾ ಹಯಮುಖ
ಪಾದಕಮಲ ಮಧುಪಾ                                   ||ಪ||

ನೀ  ದಯದಲಿ ತವ ಪಾದ ಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು                         ||ಅ.ಪ||

ಮೂಷಕ ಬಿಲದಿಂದ ಉದರಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ                       ||೧||

ಮುಂದೆ ಭೂತನರನಾ ಪ್ರೇರಿಸಿ
ಹಿಂದೆ ಒಬ್ಬ ನರನಾ
ನಿಂದಿರಿಸಿದೆ ಆನಂದದಿಂದ ಜನ
ವೃಂದ ನೋಡುತಿರೆ ಅಂದಣ ನಡಿಸಿದ್ಯೋ          ||೨||

ಕ್ಷಿತಿಯೊಳು ಸತಿ ತನ್ನಾ ವಲ್ಲಭ
ಮೃತಿಯೈದಿರೆ ಮುನ್ನಾ
ಅತಿಶೋಕದಿ ಬಂದು ನುತಿಸಲು ಆ
ಪತಿಯನು ಬದುಕಿಸಿ ಹಿತದಿ ರಕ್ಷಿಸಿದೆ                 ||೩||

ನರಪತಿ ವ್ಯಾಧಿಯಲಿ ಬಳಲ್ವದ
ತ್ವರಿತದಿ ನೀ ಕೇಳಿ
ಹರುಷದಿ ವ್ಯಾಧಿಯ ಪರಿಹರಿಸ್ಯವನಿಗೆ
ಹರುಷದಿಂದಲಭಯದ ತೋರಿದೆ                     ||೪||

ಶಾಸ್ತ್ರ ಪ್ರಸಂಗದಲಿ ನಾರಾಯಣ ಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ ಶ್ರೀ
ನಾಥನ ಮಂದಿರ ಪ್ರೀತಿಲಿ ತರಿಸಿದ್ಯೋ                ||೫||

ತುರಗವದನ ಪಾದಾ ಭುಜಗಳಲಿ
ಧರಿಸಿಕೊಂಡು ಮೋದ ಕಡಲೆ ಮಡ್ಡಿಯನು
ಕರದಿಂದುಣಿಸಿದ ಗುರುವರ ಶೇಖರ                    ||೬||

ಆ ಮಹಾ ಗೋಪಾಲವಿಠ್ಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನುಕೊಡುವ
ಆ ಮಹಾಮಹಿಮ                                            ||೭||

Labels: ವಾದಿರಾಜ ಮುನಿಪಾ ಹಯಮುಖ, Vadiraja Munipa Hayamukha, ಗೋಪಾಲದಾಸರು, Gopaladasaru

ಹೊಸಗಣ್ಣು ಎನಗೆ ಹಚ್ಚಲಿಬೇಕು : Hosagannu Enage Hachchalibeku

ಹೊಸಗಣ್ಣು ಎನಗೆ ಹಚ್ಚಲಿಬೇಕು

ಕೀರ್ತನಕಾರರು : ಇಂದಿರೇಶರು

ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ
ವಸುದೇವ ಸುತನ ಕಾಂಬುದಕೆ                            ||ಪ||

ಘಸಣಿಯಾಗುವೆ ಭವ ವಿಷಯ ವಾರುಧಿಯೊಳು
ಶಶಿಮುಖಿಯೆ ಕರುಣದಿ ಕಾಯೆ                             ||ಅ.ಪ||

ಪರರ ಅನ್ನವನುಂಡು ಪರರ ಧನವ ಕೊಂಡು
ಪರಿ ಪರಿಯ ಕ್ಲೇಶಗಳನುಂಡು
ವರಲಕ್ಷ್ಮೀ ನಿನ್ನ ಚಾರು ಚರಣಗಳ
ಮೊರೆಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ                   ||೧||

ಮಂದಹಾಸಿನಿ ಭವಸಿಂಧುವಿನೊಳಗಿಟ್ಟು
ಚಂದವೇ ಎನ್ನ ನೋಡುವುದು
ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನ
ಮಂದರಧರನ ತೋರಮ್ಮ                                ||೨||

ಅಂದಚಂದಗಳೊಲ್ಲೆ ಬಂಧುಬಳಗ ಒಲ್ಲೆ
ಬಂಧನಕೆಲ್ಲ ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ ಹೃ
ನ್ಮಂದಿರದೊಳು ಬಂದು ಬೇಗ                            ||೩||

Labels: ಹೊಸಗಣ್ಣು ಎನಗೆ ಹಚ್ಚಲಿಬೇಕು, Hosagannu Enage Hachchalibeku, ಇಂದಿರೇಶರು, Indiresharu

ರಥವನೇರಿದ ರಾಘವೇಂದ್ರ : Rathavanerida Raghavendra

ರಥವನೇರಿದ ರಾಘವೇಂದ್ರ

ಕೀರ್ತನಕಾರರು : ಗೋಪಾಲದಾಸರು
ರಾಗ : ಮೋಹನ
ತಾಳ : ಆದಿ

ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ         ||ಪ||

ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋರಥವ ನೀಡುವೆನೆಂದು              ||ಅ.ಪ||

ಚತುರ ದಿಕ್ಕುವಿದಿಕ್ಕುಗಳಲ್ಲಿ ಹರಿವೋ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ
ನುತಿಸುತ ಪರಿಪರಿ ನತರಾಗಿ ಹರಿಗೆ
ಗತಿಪೇಳದೆ ಸರ್ವಥಾ ನಾ ಬಿಡೆನೆಂದು                       ||೧||

ಅತುಲ ಮಹಿಮಾನೆ ಆ ದಿನದಲ್ಲಿ ದಿತಿವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ಮತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ-
ಪಿತನೊಲಿಸಿದೆ ಜಿತ ಕರುಣದಲಿ                                ||೨||

ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರ
ಪ್ರತಿವಾದಿಕದಳಿವನಕರಿಯೆ ಕರ ಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ವರ
ಮಂತ್ರಾಲಯದೊಳು ಶುಭವೀಯುತ                         ||೩||

Labels: ರಥವನೇರಿದ ರಾಘವೇಂದ್ರ, Rathavanerida Raghavendra, ಗೋಪಾಲದಾಸರು, Gopaladasaru

ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ : Ksheerabdhi Kannike Srimahalakshmi

ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ

ಕೀರ್ತನಕಾರರು : ಪುರಂದರದಾಸರು
ರಾಗ : ರಾಗಮಾಲಿಕೆ
ತಾಳ : ಆದಿ

ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ
ಯಾರಿಗೆ ವಧುವಾಗುವೇ ನೀನು                          ||ಪ||

ಶರಧಿ ಬಂಧನ ರಾಮಚಂದ್ರ ಮೂರ್ತಿಗೋ
ಪರಮಾತ್ಮ ಅನಂತ ಪದ್ಮನಾಭಗೋ
ಸರಸಿಜನಾಭ ಶ್ರೀ ಜನಾರ್ಧನ ಮೂರ್ತಿಗೋ
ಉಭಯಕಾವೇರಿ ರಂಗ ಪಟ್ಟಣದರಸಗೋ            ||೧||

ಚೆಲುವ ಮೂರುತಿ ಬೇಲೂರ ಚೆನ್ನಿಗರಾಯನಿಗೋ
ಗೆಳತಿ ಹೇಳು ಉಡುಪಿ ಶ್ರೀ ಕ್ರಿಷ್ಣರಾಯನಿಗೋ
ಇಳೆಯೊಳು ಪಾಂಡುರಂಗ ವಿಠಲ ರಾಯಗೋ
ನಳಿನಾಕ್ಷಿ ಹೇಳಮ್ಮ ಬದರಿ ನಾರಾಯಣಗೋ         ||೨||

ಮಲಯಜ ಗಂಧೀ ಬಿಂದು ಮಾಧವರಾಯಗೋ
ಸುಲಭ ದೇವರು ಪುರುಷೋತ್ತಮಗೋ
ಫಲದಾಯಕ ನಿತ್ಯ ಮಂಗಳದಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ          ||೩||

ವಾಸವಾರ್ಚಿತ ಕಂಚಿ ವರದರಾಜನಿಗೋ
ಆ ಶ್ರೀಮುಷ್ಣದಲ್ಲಿ ಆದೀವರಾಯನಿಗೋ
ಶೇಷಶಾಯಿಯಾದ ಶ್ರೀಮನ್ ನಾರಾಯಣಗೋ
ಸಾಸಿರ ನಾಮದೊಡೆಯ ಅಳಗಿರಿಶಗೋ              ||೪||

ಶರಣಾಗತ ರಕ್ಷಕ ಸಾರಂಗ ಪಾಣಿಗೋ
ವರಗಳ ನೀಡುವ ಶ್ರೀನಿವಾಸಗೋ
ಕುರುಕುಲಾಂತಕ ರಾಜಗೋಪಾಲ ಮೂರ್ತಿಗೋ
ಸ್ಥಿರವಾಗಿ ಪುರಂದರ ವಿಠ್ಠಲರಾಯನಿಗೋ             ||೫||

Labels: ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ, Ksheerabdhi Kannike Srimahalakshmi, ಪುರಂದರದಾಸರು, Purandaradasaru

ಬದುಕಿದೆನು ಬದುಕಿದೆನು : Badukidenu Badukidenu

ಬದುಕಿದೆನು ಬದುಕಿದೆನು

ಕೀರ್ತನಕಾರರು : ಪುರಂದರದಾಸರು
ರಾಗ : ಚಾರುಕೇಶಿ
ತಾಳ : ಖಂಡಛಾಪು

ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು       ||ಪ||

ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು
ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು
ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ              ||೧||

ಹರಿಯ ತೀರ್ಥ ಪ್ರಸಾದವಿಂದೆನಗೆ ದೊರಕಿತು
ಹರಿಕಥಾಮೃತವೆನ್ನ ಕಿವಿಗೊದಗಿತೋ
ಹರಿದಾಸರು ಎನ್ನ ಬಂಧು ಬಳಗಾದರು
ಹರಿಮುದ್ರೆ ಎನಗಾಭರಣವಾಯಿತು                      ||೨||

ಹಿಂದೆನ್ನ ಸಂತತಿಗೆ ಸಕಲ ಸಾಧನವಾಯಿತು
ಮುಂದೆನ್ನ ಜನ್ಮವು ಸಫಲವಾಯಿತು
ತಂದೆ ಪುರಂದರ ವಿಠಲನೆಂದೆಂಬ ಪರದೈವ
ಬಂದು ಹೃದಯದಲಿ ನೆಲೆಯಾಗಿ ನಿಂತ                ||೩||

Labels: ಬದುಕಿದೆನು ಬದುಕಿದೆನು, Badukidenu Badukidenu, ಪುರಂದರದಾಸರು, Purandaradasaru

ಯಾದವರಾಯ ಬೃಂದಾವನದೊಳು : Yadavaraya Brindavanadolu

ಯಾದವರಾಯ ಬೃಂದಾವನದೊಳು

ಕೀರ್ತನಕಾರರು : ಕನಕದಾಸರು
ರಾಗ : ರಾಗಮಾಲಿಕೆ

ಯಾದವರಾಯ ಬೃಂದಾವನದೊಳು
ವೇಣು ನಾದವ ಮಾಡುತಿರೆ                          ||ಪ||

ರಾಧಾ ಮುಂತಾದ ಗೋಪಿಯರೆಲ್ಲ
ಮಧುಸೂದನ ನಿನ್ನನು ಸೇವಿಸುತಿರೆ
ಸುರರು ಅಂಬರದಿ ಸಂದಣಿಸಿರೆ
ಅಪ್ಸರ ಸ್ತ್ರೀಯರು ಮೈ ಮರೆತಿರೇ ಅನುಪಲ್ಲವಿ  ||೧||

ಕರದಲಿ ಕೊಳಲನು ಊದುತ ಪಾಡುತ
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ಹರಿ ಹರ ಬ್ರಹ್ಮರು ನಲಿದಾಡುತಿರೆ
ತುಂಬುರು ನಾರದರು ಪಾಡುತಿರೆಚರಣ          ||೨||

ಕರುಗಳ ಸಹಿತಲೇ ಗೋಕುಲವೆಲ್ಲ
ಸಿರಿ ಕಾಗಿನೆಲೆಯಾದಿ ಕೇಶವ ರಾಯ
ತರುಗಳ ಸಹಿತಲೇ ವರಗೋಪಾಲಚರಣ        ||೩||

Labels: ಯಾದವರಾಯ ಬೃಂದಾವನದೊಳು, Yadavaraya Brindavanadolu, ಕನಕದಾಸರು, Kanakadasaru

ಪಾಲಿಸೆಮ್ಮ ಮುದ್ದು ಶಾರದೆ : Palisemma Muddu Sharade

ಪಾಲಿಸೆಮ್ಮ ಮುದ್ದು ಶಾರದೆ

ಕೀರ್ತನಕಾರರು : ಪುರಂದರದಾಸರು
ರಾಗ : ಮುಖಾರಿ
ತಾಳ : ಆದಿ

ಪಾಲಿಸೆಮ್ಮ ಮುದ್ದು ಶಾರದೆ
ಎನ್ನ ನಾಲಿಗೆಯಲಿ ನಿಲ್ಲ ಬಾರದೆ                    ||ಪ||

ಲೋಲಲೋಚನೆ ತಾಯೆ
ನಿರುತ ನಂಬಿದೆ ನಿನ್ನ                                  ||ಅ.ಪ||

ಅಕ್ಷರಕ್ಷರ ವಿವೇಕವಾ ನಿನ್ನ ಕುಕ್ಷಿಯೊಳಿರೆ
ಏಳು ಲೋಕವ ಸಾಕ್ಷಾತ್ ರೂಪದಿಂದ
ಒಲಿದು ರಕ್ಷಿಸು ತಾಯೆ                                 ||೧||

ಶೃಂಗಾರಪುರ ನೆಲೆವಾಸಿನೀ ದೇವಿ
ಸಂಗೀತಗಾನ ವಿಲಾಸಿನೀ
ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ    ||೨||

ಸರ್ವಾಲಂಕಾರ ದಯಾಮೂರುತಿ ನಿನ್ನ
ಚರಣವ ಸ್ಮರಿಸುವೆ ಕೀರುತಿ
ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ  ||೩||

Labels: ಪಾಲಿಸೆಮ್ಮ ಮುದ್ದು ಶಾರದೆ, Palisemma Muddu Sharade, ಪುರಂದರದಾಸರು, Purandaradasaru

ಶರಣು ಸಕಲೋದ್ಧಾರ : Sharanu Sakaloddhara

ಶರಣು ಸಕಲೋದ್ಧಾರ

ಕೀರ್ತನಕಾರರು : ಪುರಂದರದಾಸರು

ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ
ಶರಣು ದಶರಥ ಬಾಲ ಜಾನಕೀಲೋಲ                     ||ಪ||

ಈ ಮುದ್ದು ಈ ಮುಖವು ಈ ತನುವಿನಾ ಕಾಂತಿ
ಈ ಬಿಲ್ಲು ಈ ಬಾಣ ಈ ನಿಂತ ಈ ಭಾವ
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ
ಯಾವ ದೇವರಿಗೆ ಉಂಟು ಮೂರುಲೋಕದೊಳಗೆ       ||೧||

ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂ
ದೊಡ್ಡ ನವರತ್ನದ ಆಭರಣ ಇರಲು
ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ
ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ                         ||೨||

ಪಾಲಿಸಲು ಅಯೋಧ್ಯ ಪಟ್ಟಣದಲ್ಲಿ ಪುರವಾಸ
ಬೇಡಿದ ಇಷ್ಟಾರ್ಥಗಳ ಕೊಡುವೆನೆನುತ
ಭಾವ ಶುದ್ಧಿಯುಳ್ಳ ತನ್ನ ಭಕುತರ ಪೊರೆವ
ಪುರಂದರ ವಿಟ್ಟಲನೆ ಅಯೋಧ್ಯ ರಾಮ                    ||೩||

Labels: ಶರಣು ಸಕಲೋದ್ಧಾರ, Sharanu Sakaloddhara, ಪುರಂದರದಾಸರು, Purandaradasaru

ತೂಗಿರೆ ರಂಗನ ತೂಗಿರೆ ಕೃಷ್ಣನ : Tugire Rangana Tugire Krishnana

ತೂಗಿರೆ ರಂಗನ ತೂಗಿರೆ ಕೃಷ್ಣನ

ಕೀರ್ತನಕಾರರು : ಪುರಂದರದಾಸರು
ರಾಗ : ಶಂಕರಾಭರಣ
ತಾಳ : ಛಾಪು

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತ ಅನಂತನ                      ||ಪ||

ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ
ತೂಗಿರೆ ಕಾವೇರಿ ರಂಗಯ್ಯನ                   ||ಅ.ಪ||

ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ
ನಾಗಕನ್ನಿಕೆಯರು ತೂಗಿರೇ
ನಾಗವೇಣಿಯರು ನೇಣು ಪಿಡಿದುಕೊಂಡು
ಬೇಗನೆ ತೊಟ್ಟಿಲ ತೂಗಿರೆ                        ||೧||

ಇಂದ್ರ ಲೋಕದಲ್ಲುಪೇಂದ್ರ ಮಲಗ್ಯಾನೆ
ಇಂದು ಮುಖಿಯರೆಲ್ಲ ತೂಗಿರೆ
ಇಂದ್ರ ಕನ್ನಿಕೆಯರು ಬಂದು
ಮುಕುಂದನ ತೊಟ್ಟಿಲ ತೂಗಿರೆ                  ||೨||

ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ
ನೀಲ ಕುಂತಳೆಯರು ತೂಗಿರೆ
ವ್ಯಾಳ ಶಯನ ಹರಿ ಮಲಗು ಮಲಗು ಎಂದು
ಬಾಲ ಕೃಷ್ಣಯ್ಯನ ತೂಗಿರೆ                        ||೩||

ಸಾಸಿರ ನಾಮದ ಸರ್ವೋತ್ತಮನೆಂದು
ಸೂಸುತ್ತ ತೊಟ್ಟಿಲ ತೂಗಿರೆ
ಲೇಸಾಗಿ ಮಡುವಿನೊಳು ಶೇಷನ ತುಳಿದಿಟ್ಟ
ದೋಷ ವಿದೂರನ ತೂಗಿರೆ                       ||೪||

ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ
ತರಳನ ತೊಟ್ಟಿಲ ತೂಗಿರೇ
ಸಿರಿದೇವಿ ರಮಣನ ಪುರಂದರ ವಿಠಲನೆ
ಕರುಣದಿ ಮಲಗೆಂದು ತೂಗಿರೆ                    ||೫||

Labels: ತೂಗಿರೆ ರಂಗನ ತೂಗಿರೆ ಕೃಷ್ಣನ, Tugire Rangana Tugire Krishnana, ಪುರಂದರದಾಸರು, Purandaradasaru

ರಾಮ ನಾಮ ಪಾಯಸಕ್ಕೆ : Rama Nama Payasakke

ರಾಮ ನಾಮ ಪಾಯಸಕ್ಕೆ

ಕೀರ್ತನಕಾರರು : ಪುರಂದರದಾಸರು
ರಾಗ : ಆನಂದಭೈರವಿ
ತಾಳ : ರೂಪಕ

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಕಲಸಿ ಬಾಯ ಚಪ್ಪರಿಸಿರೋ              ||ಪ||

ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದು       ||೧||

ಹೃದಯವೆಂಬೊ ಮಡಕೆಯಲಿ ಭಾವವೆಂಬೊ ಎಸರನಿಟ್ಟು
ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು          ||೨||

ಆನಂದ ಆನಂದವೆಂಬೊ ತೇಗು ಬಂದಿತು ಕಾಣಿರೊ
ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೊ    ||೩||

Labels: ರಾಮ ನಾಮ ಪಾಯಸಕ್ಕೆ, Rama Nama Payasakke, ಪುರಂದರದಾಸರು, Purandaradasaru

ಮೂರುತಿಯನೆ ನಿಲ್ಲಿಸೋ : Murutiyane Nilliso

ಮೂರುತಿಯನೆ ನಿಲ್ಲಿಸೋ

ಕೀರ್ತನಕಾರರು : ಪುರಂದರದಾಸರು
ರಾಗ : ಖಮಾಚ್
ತಾಳ : ರೂಪಕ

ಮೂರುತಿಯನೆ ನಿಲ್ಲಿಸೋ ಮಾಧವ ನಿನ್ನ          ||ಪ||

ಎಳೆ ತುಳಸಿಯ ವನಮಾಲೆಯು ಕೊರಳೊಳು
ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ        ||೧||

ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀ ಲಕುಮಿಯ ಉರದೊಳೊಪ್ಪುವ ನಿನ್ನ   ||೨||

ಭಕ್ತರ ಕಲ್ಪತರು ಭಾಗ್ಯದ ಸುರಧೇನು
ಮುಕ್ತಿದಾಯಕ ಸಿರಿ ಪುರಂದರ ವಿಠಲ ನಿನ್ನ        ||೩||

Labels: ಮೂರುತಿಯನೆ ನಿಲ್ಲಿಸೋ, Murutiyane Nilliso, ಪುರಂದರದಾಸರು, Purandaradasaru

ಜಯತು ಕೋದಂಡರಾಮ ಜಯತು : Jyatu Kodandarama Jayatu

ಜಯತು ಕೋದಂಡರಾಮ ಜಯತು

ಕೀರ್ತನಕಾರರು : ಪುರಂದರದಾಸರು
ರಾಗ : ಶಹನ
ತಾಳ : ಖಂಡಛಾಪು

ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು     ||ಪ||

ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲಿ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ                              ||೧||

ಬಲಿಯೊಳ್ ದಾನವ ಮಾಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾದಿ ಮೆರೆದ ರಘುರಾಮ                              ||೨||

ವಸುದೇವಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ
ಬಿಸಜಾಕ್ಷಯೋಧ್ಯಪುರವಾಸ ರಘುರಾಮ                               ||೩||

Labels: ಜಯತು ಕೋದಂಡರಾಮ ಜಯತು, Jyatu Kodandarama Jayatu,
ಪುರಂದರದಾಸರು, Purandaradasaru

ಆವನಾವನು ಕಾಯ್ದ ಅವನಿಯೊಳಗೆ : Avanavanu Kayda Avaniyolage

ಆವನಾವನು ಕಾಯ್ದ ಅವನಿಯೊಳಗೆ

ಕೀರ್ತನಕಾರರು : ಪುರಂದರದಾಸರು

ಆವನಾವನು ಕಾಯ್ದ ಅವನಿಯೊಳಗೆ
ದೇವ ದೇವೇಶ ಶ್ರೀ ಹರಿಯಲ್ಲದೆ                    ||ಪ||

ಆವ ತಂದೆಯು ಸಲಹಿದನು ಪ್ರಹ್ಲಾದನ
ಆವ ತಾಯಿ ಕಾಯ್ದೆಳು ಧ್ರುವರಾಯನ
ಆವ ಮಗ ಸಲಹಿದನು ಆ ಉಗ್ರ ಸೇನನ
ಜೀವಂಗೆ ಪೋಷಕನು ಶ್ರೀ ಹರಿಯಲ್ಲದೆ          ||೧||

ಆವ ಬಾಂಧವರು ಸಲಹಿದರು ಆ ಗಜರಾಜನ
ಆವ ಪತಿ ಕಾಯ್ದ ದ್ರೌಪದಿಯ ಮಾನ
ಆವ ಸೋದರ ಸಲಹಿದನು ಆ ವಿಭೀಷಣನ
ಜೀವರಿಗೆ ದಾತೃ ಶ್ರೀ ಹರಿಯಲ್ಲದೇ               ||೨||

ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆ
ಆವ ರಕ್ಷಕನು ಪಶು ಜಾತಿಗಳಿಗೆ
ಆವ ಪೋಷಕನು ಗರ್ಭದಲ್ಲಿಪ್ಪ ಶಿಶುವಿಗೆ
ದೇವ ಸಿರಿ ಪುರಂದರವಿಠಲನಲ್ಲದಲೆ             ||೩||

Labels: ಆವನಾವನು ಕಾಯ್ದ ಅವನಿಯೊಳಗೆ, Avanavanu Kayda Avaniyolage,
ಪುರಂದರದಾಸರು, Purandaradasaru

ಯತಿಕುಲಮುಕುಟ ಶ್ರೀಜಯತೀರ್ಥ : Yatikulamukuta Sri Jayathiratha

ಯತಿಕುಲಮುಕುಟ ಶ್ರೀಜಯತೀರ್ಥ

ಕೀರ್ತನಕಾರರು : ಜಯತೀರ್ಥರು

ಯತಿಕುಲಮುಕುಟ ಶ್ರೀಜಯತೀರ್ಥ ಸದ್ಗುಣಭರಿತ             ||ಪ||

ಅತಿಸದ್ಭಕುತಿಲಿ ನುತಿಪ ಜನರ ಸಂ
ತತ ಪಾಲಿಸುತಲಿ ಪೃಥಿವಿಲಿ ಮೆರೆವ                               ||ಅ.ಪ||

ಶ್ರೀಮಧ್ವಮತವಾರಿಧಿ ನಿಜಸೋಮ ಅಗಣಿತಸನ್ಮಹಿಮ
ಆ ಮಹಾ ಭಕ್ತಾರ್ತಿಹ ನಿಷ್ಕಾಮ ಮುನಿಸಾರ್ವಭೌಮ
ರಾಮಪದಾರ್ಚಕ ಈ ಮಹೀಸುರರನು
ಪ್ರೇಮದಿ ಪಾಲಿಪ ಕಾಮಿತಫಲದ                                   ||೧||

ಮಧ್ವಮುನಿಗಳ ಗ್ರಂಥಕೆ ವ್ಯಾಖ್ಯಾನ ರಚಿಸಿದ ಸುಜ್ಞಾನ
ವಿದ್ಯಾರಣ್ಯನ ಸದ್ವಾದದಿ ನಿಧನ ಗೈಸಿದ ಸುಖಸದನ
ಅದ್ವೈತಾಟವಿದಗ್ಧ ಕೃತಾನಲ
ಸದ್ವೈಷ್ಣವಹೃತ್ಪದ್ಮಸುನಿಲಯ                                        ||೨||

ಲಲಿತ ಮಂಗಳವೇಡಿಸ್ಥ ರಘುನಾಥ ವನಿತಾಸಂಜಾತ
ನಿಲಯ ಮಳಖೇಡ ಕಾಗಿಣಿ ತೀರ ವಾಸ ತಾಪತ್ರಯದೂರ
ನಲಿವ ವರದೇಶವಿಠಲನ ಒಲುಮೆಯ
ಇಳೆಯೊಳು ಬೋಧಿಪ ಅಲವಬೋಧಾಪ್ತಾ                       ||೩||

Labels: ಯತಿಕುಲಮುಕುಟ ಶ್ರೀಜಯತೀರ್ಥ, Yatikulamukuta Sri Jayathiratha, ಜಯತೀರ್ಥರು, Jayateertharu

ವರವ ಕೊಡು ಎನಗೆ ವಾಗ್ದೇವಿ : Varava Kodu Enage Vagdevi

ವರವ ಕೊಡು ಎನಗೆ ವಾಗ್ದೇವಿ

ಕೀರ್ತನಕಾರರು : ಕನಕದಾಸರು
ರಾಘ : ಕಲ್ಯಾಣಿ
ತಾಳ : ಝಂಪೆ

ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣಕಮಲಂಗಳನ ದಯಮಾಡು ದೇವಿ            ||ಪ||

ಶಶಿ ಮುಖದ ನಸುನಗೆಯ ಬಾಲೆ
ಎಸೆವ ಕರ್ಣದ ಮುತ್ತಿನೋಲೆ
ನಸುನಗುವ ಸುಲಿಪಲ್ಲ ಗುಣಶೀಲೆ ದೇವಿ
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು             ||೧||

ಇಂಪು ಸೊಂಪಿನ ಚಂದ್ರಬಿಂಬೆ
ಕೆಂಪು ತುಟಿಗಳ ನಾಸಿಕದ ರಂಭೆ
ಜೋಂಪು ಮದನನ ಪೂರ್ಣಶಕ್ತಿ ಗೊಂಬೆ ಒಳ್ಳೆ
ಸಂಪಿಗೆಯ ಮುಡಿಗಿಟ್ಟು ರಾಜಿಪ ಶಾರದಾಂಬೆ     ||೨||

ರವಿಕೋಟಿ ತೇಜಪ್ರಕಾಶೇ ಮಹಾ
ಕವಿಜನರ ಹ್ರಿತ್ಕಮಲ ವಾಸೇ
ಅವಿರಳಪುರಿಯ ಸಿರಿಕಾಗಿನೆಲೆಯಾದಿ ಕೇ
ಶವನ ಸುತನಿಗೆ ಸನ್ನುತ ರಾಣಿವಾಸೆ                 ||೩||

Labels: ವರವ ಕೊಡು ಎನಗೆ ವಾಗ್ದೇವಿ, Varava Kodu Enage Vagdevi, ಕನಕದಾಸರು, Kanakadasaru

ಲಾಲಿ ಲಾಲಿ ನಮ್ಮ ಹರಿಯೆ ಲಾಲಿ : Lali Lalli Namma Hariye Lali

ಲಾಲಿ ಲಾಲಿ ನಮ್ಮ ಹರಿಯೆ ಲಾಲಿ

ಕೀರ್ತನಕಾರರು : ಪುರಂದರದಾಸರು

ಲಾಲಿ ಲಾಲಿ ನಮ್ಮ ಹರಿಯೆ ಲಾಲಿ                                  ||ಪ||

ಸುರ ನರರಿಗೆ ಒಲಿದು ಕರುಣವ ಬೀರುವ ದೊರೆಯೆ ಲಾಲಿ    ||ಅ.ಪ||

ರಾಮ ಲಾಲಿ ಮೇಘಶ್ಯಾಮ ಲಾಲಿ
ರಮಾ ಮನೋಹರ ಅಮಿತ ಸದ್ಗುಣ ಧಾಮ ಲಾಲಿ              ||೧||

ಕೃಷ್ಣ ಲಾಲಿ ಸರ್ವೋತ್ಕೃಷ್ಟ ಲಾಲಿ
ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆವ ಸಂತುಷ್ಟ ಲಾಲಿ                   ||೨||

ರಂಗ ಲಾಲಿ ಮಂಗಳಾಂಗ ಲಾಲಿ
ಗಂಗೆಯ ಪಡೆದ ತುಂಗ ಮಹಿಮ ನರಸಿಂಗ ಲಾಲಿ              ||೩||

ನಂದ ಲಾಲಿ ಗೋಪಿ ಕಂದ ಲಾಲಿ
ಮಂದರ ಗಿರಿಧರ ಮಧುಸೂದನ ಮುಕುಂದ ಲಾಲಿ             ||೪||

ಶೂರ ಲಾಲಿ ರಣಧೀರ ಲಾಲಿ
ಮಾರನಯ್ಯ ನಮ್ಮ ವರ ಪುರಂದರವಿಠಲ ಲಾಲಿ               ||೫||

Labels: ಲಾಲಿ ಲಾಲಿ ನಮ್ಮ ಹರಿಯೆ ಲಾಲಿ, Lali Lalli Namma Hariye Lali,
ಪುರಂದರದಾಸರು, Purandaradasaru

ಹರಿ ಕುಣಿದಾ ನಮ್ಮ ಹರಿ ಕುಣಿದ : Hari Kunida Namma Hari Kunida

ಹರಿ ಕುಣಿದಾ ನಮ್ಮ ಹರಿ ಕುಣಿದ

ಕೀರ್ತನಕಾರರು : ಪುರಂದರದಾಸರು
ರಾಗ : ಬೇಹಾಗ್
ತಾಳ : ಆದಿ

ಹರಿ ಕುಣಿದಾ ನಮ್ಮ ಹರಿ ಕುಣಿದ                 ||ಪ||

ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗೂಡಿ ಹರಿ ಕುಣಿದ               ||೧||

ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ
ಚೆಂದದಿ ನಲಿಯುತ ಹರಿ ಕುಣಿದ                  ||೨||

ಅಕಳಂಕಚರಿತ ಮಕರಕುಂಡಲಧರ
ಸಕಲರ ಪಾಲಿಪ ಹರಿ ಕುಣಿದ                     ||೩||

ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ
ದಿಟ್ಟ ಮಲ್ಲರ ಗಂಡ ಹರಿ ಕುಣಿದ                  ||೪||

ಪರಮಭಾಗವತರ ಕೇರಿಯೊಳಾಡುವ
ಪುರಂದರವಿಠಲ ಹರಿ ಕುಣಿದ                     ||೫||

Labels: ಹರಿ ಕುಣಿದಾ ನಮ್ಮ ಹರಿ ಕುಣಿದ, Hari Kunida Namma Hari Kunida, ಪುರಂದರದಾಸರು, Purandaradasaru

ಜಯ ಮಂಗಳಂ ನಿತ್ಯ : Jaya Mangalam Nitya Shubha Mangalam

ಜಯ ಮಂಗಳಂ ನಿತ್ಯ ಶುಭ ಮಂಗಳಂ

ಕೀರ್ತನಕಾರರು : ಪುರಂದರದಾಸರು
 

ಜಯ ಮಂಗಳಂ ನಿತ್ಯ ಶುಭ ಮಂಗಳಂ    ||ಪ||

ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ
ಸುಕಂಠಕೆ ಮಂಗಳ ಸೂಕರ ರೂಪಗೆ
ನಖಕ್ಕೆ ಮಂಗಳ ನರಸಿಂಹಗೆ                  ||೧||

ವಕ್ಷಕ್ಕೆ ಮಂಗಳ ವಟು ವಾಮನಗೆ
ಪಕ್ಷಕ್ಕೆ ಮಂಗಳ ಪರಶುರಾಮಗೆ
ಕಕ್ಷಕ್ಕೆ ಮಂಗಳ ಕಾಕುತ್ಸ್ಥರಾಮಗೆ
ಕುಕ್ಷಿಗೆ ಮಂಗಳ ಶ್ರೀಕೃಷ್ಣಗೆ                     ||೨||

ಊರುಗಳಿಗೆ ಮಂಗಳ ಉತ್ತಮಬೌದ್ಧಗೆ
ಚರಣಕ್ಕೆ ಮಂಗಳ ಚೆಲುವ ಕಲ್ಕಿಗೆ
ಪರಿಪರಿ ರೂಪಗೆ ಪರಮಾನಂದಗೆ
ಪುರಂದರವಿಠಲಗೆ ಜಯಮಂಗಳಂ         ||೩||

Labels: ಜಯ ಮಂಗಳಂ ನಿತ್ಯ, Jaya Mangalam Nitya Shubha Mangalam, ಪುರಂದರದಾಸರು, Purandaradasaru

ಎಂಥಾ ಬಲವಂತನೊ : Entha Balavantano

ಎಂಥಾ ಬಲವಂತನೊ ಕುಂತಿಯ ಸುಜಾತನೊ

ಕೀರ್ತನಕಾರರು : ಪುರಂದರದಾಸರು
ರಾಗ : ಶಹನ
ತಾಳ : ಆದಿ

ಎಂಥಾ ಬಲವಂತನೊ ಕುಂತಿಯ ಸುಜಾತನೊ                 ||ಪ||

ಭಾರತಿಗೆ ಕಾಂತನೊ ನಿತ್ಯ ಶ್ರೀಮಂತನೊ                      ||ಅ.ಪ||

ರಾಮಚಂದ್ರನ ಪ್ರಾಣನೊ ಅಸುರಹೃದಯಬಾಣನೊ
ಖಳರ ಗಂಟಲಗಾಣನೊ ಜಗದೊಳಗೆ ಪ್ರವೀಣನೊ             ||೧||

ಕುಂತಿಯ ಕಂದನೊ ಸೌಗಂಧಿಕವ ತಂದನೊ
ಕುರುಕ್ಷೇತ್ರಕೆ ಬಂದನೊ ಕೌರವರ ಕೊಂದನೊ                  ||೨||

ಭಂಡಿ ಅನ್ನವನುಂಡನೊ ಬಕನ ಪ್ರಾಣವ ಕೊಂಡನೊ
ಭೀಮ ಪ್ರಚಂಡನೊ ದ್ರೌಪದಿಗೆ ಗಂಡನೊ                     ||೩||

ವೈಷ್ಣವಾಗ್ರಗಣ್ಯನೊ ಸಂಚಿತಾಗ್ರಪುಣ್ಯನೊ
ದೇವವರೇಣ್ಯನೊ ದೇವಶರಣ್ಯನೊ                           ||೪||

ಮಧ್ವಶಾಸ್ತ್ರವ ರಚಿಸಿದನೊ ಸದ್ವೈಷ್ಣವರ ಸಲಹಿದನೊ
ಉಡುಪಿಲಿ ಕೃಷ್ಣನ ನಿಲಿಸಿದನೊ ಪುರಂದರವಿಠಲಗೆ ದಾಸನೊ   ||೫||

Labels: ಎಂಥಾ ಬಲವಂತನೊ, Entha Balavantano, ಪುರಂದರದಾಸರು, Purandaradasaru

ಕಲ್ಯಾಣಂ ತುಳಸಿ ಕಲ್ಯಾಣಂ : Kalyanam Tulasi Kalyanam

ಕಲ್ಯಾಣಂ ತುಳಸಿ ಕಲ್ಯಾಣಂ 

ಕೀರ್ತನಕಾರರು : ಪುರಂದರದಾಸರು

ಕಲ್ಯಾಣಂ ತುಳಸಿ ಕಲ್ಯಾಣಂ                      ||ಪ||

ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ                       ||ಅ.ಪ||

ಅಂಗಳದೊಳಗೆಲ್ಲ ತುಳಸಿಯ ವನಮಾಡಿ
ಶೃಂಗಾರವ ಮಾಡಿ ಶೀಘ್ರದಿಂದ
ಕಂಗಳ ಪಾಪವ ಪರಿಹರಿಸುವ
ಮುದ್ದುರಂಗ ಬಂದಲ್ಲಿ ತಾ ನೆಲೆಸಿದನು          ||೧||

ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು
ತಂದ ಶ್ರೀಗಂಧಾಕ್ಷತೆಗಳಿಂದ
ಸಿಂಧುಶಯನನ ವೃಂದಾವನದಿ ಪೂಜಿಸೆ
ಕುಂದದ ಭಾಗ್ಯವ ಕೊಡುತಿಹಳು                 ||೨||

ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿತ್ತು
ಲಕ್ಷ ಬತ್ತಿಯ ದೀಪವ ಹಚ್ಚಿ
ಅಧೋಕ್ಷಜ ಸಹಿತ ವೃಂದಾವನ ಪೂಜಿಸೆ
ಸಾಕ್ಷಾತ್ ಮೋಕ್ಷವ ಕೊಡುತಿಹಳು              ||೩||

ಉತ್ಥಾನ ದ್ವಾದಶಿ ದಿವಸದಿಂದಲಿ ಕೃಷ್ಣ
ಉತ್ತಮ ತುಳಸಿಗೆ ವಿವಾಹವ
ಚಿತ್ತನಿರ್ಮಲರಾಗಿ ಮಾಡಿದವರಿಗೆ
ಉತ್ತಮ ಗತಿ ಈವ ಪುರಂದರವಿಠಲ           ||೪||

Labels: ಕಲ್ಯಾಣಂ ತುಳಸಿ ಕಲ್ಯಾಣಂ, Kalyanam Tulasi Kalyanam, ಪುರಂದರದಾಸರು, Purandaradasaru

ಹನುಮ ನಮ್ಮ ತಾಯಿ ತಂದೆ : Hanuma Namma Tayi Tande

ಹನುಮ ನಮ್ಮ ತಾಯಿ ತಂದೆ

ಕೀರ್ತನಕಾರರು : ಪುರಂದರದಾಸರು

ಹನುಮ ನಮ್ಮ ತಾಯಿ ತಂದೆ                                    ||ಪ||

ಭೀಮ ನಮ್ಮ ಬಂಧು ಬಳಗ
ಆನಂದ ತೀರ್ಥರೆ ನಮ್ಮ ಗತಿ ಗೋತ್ರವಯ್ಯ                 ||ಅ.ಪ||

ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ
ಆಯಾಸವಿಲ್ಲದೆ ಸಂಜೀವನವ ತಂದೆ
ಗಾಯಗೊಂಡ ಕಪಿಗಳನು ಸಾಯದಂತೆ ಪೊರೆದ
ರಘು ರಾಯನಂಘ್ರಿಗಳೇ ಸಾಕ್ಷಿ ತ್ರೇತಾಯುಗದಿ             ||೧||

ಬಂಧುಬಳಗದಂತೆ ಆಪದ್ಭಾಂಧವನಾಗಿ ಪಾರ್ಥನಿಗೆ
ಬಂದ ಬಂದ ದುರಿತಗಳ ಪರಿಹರಿಸಿ
ಅಂಧಕಜಾತಕರ ಕೊಂದು ನಂದ ಕಂದಾರ್ಪನೆಂದು
ಗೋವಿಂದನಂಘ್ರಿಗಳೇ ಸಾಕ್ಷಿ ದ್ವಾಪರ ಯುಗದಿ             ||೨||

ಗತಿಗೋತ್ರರಂತೆ ಸಾಧುತತಿಗಳಿಗೆ ಮತಿಯ ತೋರಿ
ಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ
ಗತಿಗೆಟ್ಟ ಸದ್ವೈಷ್ಣವರಿಗೆ ಸದ್ಗತಿಯ ತೋರಿದ ಪರಮಾತ್ಮ
ಗತಿ ಪುರಂದರವಿಠಲನೆ ಸಾಕ್ಷಿ ಕಲಿಯುಗದಲಿ                ||೩||

Labels: ಹನುಮ ನಮ್ಮ ತಾಯಿ ತಂದೆ, Hanuma Namma Tayi Tande, ಪುರಂದರದಾಸರು, Purandaradasaru