ಹರಪನಹಳ್ಳಿ ಭೀಮವ್ವನವರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹರಪನಹಳ್ಳಿ ಭೀಮವ್ವನವರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜನವರಿ 8, 2014

ಹರಿ ಹರಿ ಹರಿ ಎನ್ನದೆ : Hari Hari Hari Ennade

ಹರಿ ಹರಿ ಹರಿ ಎನ್ನದೆ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವನವರು

ಹರಿ ಹರಿ ಎನ್ನದೆ ಈ ನಾಲಿಗಿ-
ನ್ನಿರುವುದ್ಯಾತಕೆ ಸುಮ್ಮನೆ                                    ॥ಪ॥

ಸರಸಿಜಾಕ್ಷನ ದಿವ್ಯ ಸಾಸಿರನಾಮ ಬಿಟ್ಟು
ಪರರ ವಾರ್ತ್ಯೇಲಾಸಕ್ತಿ ಪಾಮರನಾಗುವುದ್ಯಾಕೆ        ॥೧॥

ಕಲ್ಲು ಹಿಟ್ಟಾಗಿ ರಂಗವಾಲಿ ಎನಿಸುವುದು
ಕಲ್ಲಿಗೆ ಕಡೆಯಾದೆ ಮಲ್ಲರಂತಕಗೆ ಬ್ಯಾಗ                  ॥೨॥

ಮಧುರ ಪದಾರ್ಥದಲ್ಲಿ ಮನಸನಿಕ್ಕಲು ಬ್ಯಾಡ
ಮಧುವೈರಿ ಹರಿನಾಮ ಕ್ಷುಧೆಯ ಬೇಡುತಲೀಗ          ॥೩॥

ಅರ್ಕಸುತನ ಭಯ ಅಂಕೆಯಿಲ್ಲದಂತಿರೆ
ಸಿಕ್ಕು ಸಿಗದಂತಿರೆ ಯುಕ್ತಿ ರಕ್ಕಸಾಂತಕನಲ್ಲಿಟ್ಟು          ॥೪॥

ಈಸು ಮತ್ಯಾಕೆ ಯಶೋದೆಕೂಸಿನಾಲಾಪ್ವೊಂದಿರಲಿ
ಲೇಸು ಕಾಂಬುವುದು ಭೀಮೇಶಕೃಷ್ಣಗೆ ಬ್ಯಾಗ            ॥೫॥


Labels: ಹರಿ ಹರಿ ಹರಿ ಎನ್ನದೆ, Hari Hari Hari Ennade, ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ಬುಧವಾರ, ಸೆಪ್ಟೆಂಬರ್ 11, 2013

ಮಂಗಳಾರತಿ ತಂದು ಬೆಳಗಿರೆ : Mangalarati Tandu Belagire

ಮಂಗಳಾರತಿ ತಂದು ಬೆಳಗಿರೆ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವನವರು

ಮಂಗಳಾರತಿ ತಂದು ಬೆಳಗಿರೆ
ಅಂಬುಜಾಸನ ರಾಣಿಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ
ಶಶಿ ಬಿಂಬೆಗೆ                                            ||ಪ||

ಶುದ್ಧ ಸ್ನಾನವ ಮಾಡಿ ನದಿಯಲಿ
ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ                             ||೧||

ಎರೆದು ಪೀತಾಂಬರವನುಡಿಸಿ
ಸರ್ವಾಭರಣವ ರಚಿಸಿದ
ಹರಳಿನೋಲೆ ವಜ್ರಮೂಗುತಿ
ವರಮಹಾಲಕ್ಷ್ಮಿ ದೇವಿಗೆ                              ||೨||

ಹುಟ್ಟುಬಡವೆಯ ಕಷ್ಟಕಳೆದು
ಕೊಟ್ಟಳರಸನ ಸಿರಿಯನು
ಹೆತ್ತ ಕುಮರನ ತೋರಿದಂಥ
ಶುಕ್ರವಾರದ ಲಕ್ಷ್ಮಿಗೆ                                   ||೩||

ನಿಗಮ ವೇದ್ಯಳೆ ನಿನ್ನ ಗುಣಗಳ
ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಏನುತ
ಜಗದೊಡೆಯನ ಭೀಮೇಶ ಕೃಷ್ಣನ ರಾಣಿಗೆ      ||೪||

Labels: ಮಂಗಳಾರತಿ ತಂದು ಬೆಳಗಿರೆ, Mangalarati Tandu Belagire
, ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ಗುರುವಾರ, ಆಗಸ್ಟ್ 22, 2013

ಕಳವು ಕಲಿಸಿದರ್ಯಾರೊ ನಿನಗೆ : Kalavu Kalisidaryaro Ninage

ಕಳವು ಕಲಿಸಿದರ್ಯಾರೊ ನಿನಗೆ 

ಕೀರ್ತನಕಾರರು : ಹರಪನಹಳ್ಳಿ ಭೀಮವ್ವ

ಕಳವು ಕಲಿಸಿದರ್ಯಾರೊ ನಿನಗೆ ಕಂಜನಾಭನೆ            ।।ಪ॥ 

ಕೇರಿ ಕೇರಿ ಮನೆಗಳಲ್ಲಿ 
ಕ್ಷೀರ ಗಡಿಗೆಯನೊಡಿವರೇನಲ್ಲಿ 
ಚೋರತನವ ನೀ ಕಲಿತಿಹುದೆಲ್ಲಿ 
ಜಾರನೆನಿಸಿಕೊಂಬುವುದು ಕೇಳಿ ಬಲ್ಲೆ                         ।।೧।।

ಅಟ್ಟದ ಮ್ಯಾಲಿಟ್ಟಿದ್ದ ಬೆಣ್ಣಿ 
ಚಟ್ಟಿಗಿಯ ಒಡೆದಾಕಳ ಕಣ್ಣಿ 
ಕಟ್ಟಿ ಜುಟ್ಟ ಇವರ ಮನೆ ಹೆಣ್ಣಿ-
ಗಿಟ್ಟು ಮಾಡುವರೆ ಕಣ್ಣು ಸೋನ್ನಿ                                ।।೨।।

ಬಡವರ ಮನಿ ಅನ್ನದಲಿಷ್ಟು
ತುಡುಗುತನವ ನೀ ಮಾಡುವುದೆಷ್ಟು 
ಪಿಡಿಯಲವರಿಗೆ ಬರುವುದತಿ ಸಿಟ್ಟು
ಹಿಡಿದು ಹಾಕೋರು ನಿನಗೊಂದು ಪೆಟ್ಟು                      ।।೩।।

ಕಡೆದ ಬೆಣ್ಣೆ ಕಾಸಿದ ತುಪ್ಪ 
ಕೊಡುವೆನ್ಹಾಲು ನೀ ಕುಡಿಯದಲ್ಯಾಕೊ 
ಮಡದಿಯರ ಸರಿ ನಿಂಗೇನು ಬೇಕೊ 
ಕೇಳಿ ಬ್ಯಾಸರಾದೆನು ನಿನ್ನ ವಾಕು                              ।।೪।।

ಬಣ್ನದ್ವಲ್ಲಿ ಛಾದರ ಹೊದ್ದು 
ಅಣ್ಣ ರಾಮರಲ್ಯಾಡದೆ ಇದ್ದು 
ಹೆಣ್ಣುಮಕ್ಕಳುಡುವ ಸೀರಿ ಕದ್ದು 
ಇನ್ನು ಮರನೇರುವುದೇನು ಮುದ್ದು                             ।।೫।।

ನಂದಗೋಪನ ಮುಂದ್ಹೇಳಿ ಸಿಟ್ಟು 
ಇಂದು ಬಿಡಿಸುವೆ ಭೀಮೇಶ ಕೃಷ್ಣ 
ಮಂದಿ ಮಕ್ಕಳೊಳಗೆ ನೀನೆ ಶ್ರೇಷ್ಠ ಹಾ-
ಗೆಂದು ಬೇಡಿಕೊಂಬುವುದೊ ನೀಡಿಷ್ಟ                          ।।೬।।


Labels: ಕಳವು ಕಲಿಸಿದರ್ಯಾರೊ ನಿನಗೆ, Kalavu Kalisidaryaro Ninage,  ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ಕಲ್ಲು ನಾಯೇನೋ : Kallu Nayeno

ಕಲ್ಲು ನಾಯೇನೋ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವ

ಕಲ್ಲು ನಾಯೇನೋ ಕೈವಲ್ಯದಾಯಕನೆ 
ಕಲ್ಲು  ಕರುಣದಿಂದ್ಹೆಣ್ಣಾಗಿರಲುದ್ಧಾರ ಕೇಳೊ                        ।।ಪ॥ 

ಉಡಬಲ್ಲೆ ಉಣಬಲ್ಲೆ ಉತ್ತಮ ಸಂಗ ಬಿಡಬಲ್ಲೆ 
ನಡೆಯಬಲ್ಲೆನೊ ದುರ್ಮಾರ್ಗದಿಂದ 
ಕಡುಕೋಪದಿಂದ ಕಠಿಣ ಮಾತನಾಡಲು ಬಲ್ಲೆ 
ಕಡಲಶಯನನ್ನ ನಾಮ ನುಡಿಯಲೊಂದರಿಯೆನೊ               ।।೧।।

ಕಾಮಕ್ರೋಧವ ಬಲ್ಲೆ ಮತ್ಸರ ಮದ ಲೋಭ 
ಮೋಹ ಬಲ್ಲೆನೊ ಬಾಂಧವ ಭವದಿ
ಭೇದಬುದ್ಧಿಯ ಬಲ್ಲೆ ಆದಿಮೂರುತಿ ನಿನ್ನ 
ಪದದಿ ಭಕುತಿ ಪರಮಾದರೊಂದರಿಯೆನೊ                        ।।೨।।

ನಿಷ್ಠುರಾಡುತ ಜನರ ನಿಂದಿಸುವುದು ಬಲ್ಲೆ
ಕಷ್ಟಾದಾರಿದ್ರ್ಯ ಒಲ್ಲೆನ್ನ ಬಲ್ಲೆ 
ದುಷ್ಟ ಅಲ್ಪರಿಗೆ ಬಾಯ್ ತೆರೆಯಬಲ್ಲೆ ಭೀಮೇಶ 
ಕೃಷ್ಣ ನಿನದಯ ಬೇದಡಿಕೊಂಬೋದೊಂದರಿಯೆನೊ            ।।೩।।

Labels: ಕಲ್ಲು ನಾಯೇನೋ, Kallu Nayeno,  ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ಮಂಗಳವಾರ, ಆಗಸ್ಟ್ 13, 2013

ಇದು ಏನೆಶೋದಾ : Idu Eneshoda

ಇದು ಏನೆಶೋದಾ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವ

ಇದು ಏನೆಶೋದಾ 
ಇದು ಏನೆಶೋದಾ ದಧಿಯ ದಾಮೋದರ 
ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ                     ।।ಪ।।

ಕೊಳಲನೂದುತಿರೆ ಆಕಳನೆ ಕಾಯುತಲ್ಹೋಗಿ 
ಕಳಲ ಗಡಿಗೆ ಸುತ್ತ ಕುಣಿದಾಡುವುದು                       ।।೧।।

ವತ್ಸ ಕಾಯುತ ವನದೊಳಗೆ ಆಡೆಂದರೆ 
ಕಿಚ್ಚುನುಂಗಿ ಸರ್ಪವ ತುಳಿಯುವುದು                       ।।೨।।

ಚೆಂಡನಾಡುತ ತುರುವ್ಹಿಂಡು ಕಾಯೆಂದರೆ
ಗಂಡನುಳ್ಳವರ‍್ಹಿಂದ್ಹಿಂದೆ ತಿರುಗುವುದು                      ।।೩।।

ವತ್ಸನಂದದಲಿ ಬಾಯ್‍ಹಚ್ಚಿ ಗೋವಿನ ಕ್ಷೀರವ 
ಅಷ್ಟು ಕುಡಿದನಾಶ್ಚರ್ಯ ನೋಡಮ್ಮ                       ।।೪।।

ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ 
ಗಂಡನತಿ ದುಷ್ಟೆನ್ನ ಕೊಲ್ಲುವನಮ್ಮ                         ।।೫।।

ಮೌನಗೌರಿಯ ನೋಟು ನೀರೊಳಗಿದ್ದೆವೆ 
ಮಾನಹೀನರ ಮಾಡಿ ಮರವನೇರುವುದು                ।।೬।।

ಬ್ಯಾಡೋ ಕೃಷ್ಣನೆ ಬಟ್ಟೆ ನೀಡೆಂದಾಲ್ಪರಿಯಲು 
ಜೋಡಿಸಿ ನಿಮ್ಹಸ್ತ ಮುಗಿಯಿರೆಂದಾಡುವುದು              ।।೭।।

ಬುದ್ಧಿಹೇಳೆಂದರೆ ಮುದ್ದುಮಾಡುವರೇನೊ 
ಕದ್ದುಬಂದರೆ ಕಾಲು ಕಟ್ಟಿ ಹಾಕಮ್ಮ                          ।।೮।।

ಅಂಧಕಾರದ ಮನೆಯೊಳಿಟ್ಟಿದ್ದ ದಧಿ ಬೆಣ್ಣೆ 
ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ                  ।।೯।।

ಕೇರಿಮಕ್ಕಳ ನೋಡೋ ಮಹರಾಯ ಬಲರಾಮ 
ದೊಡ್ಡ ಮಗನು ಎಲ್ಲೆ ದೊರಕಿದನಮ್ಮ                       ।।೧೦।।

ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು 
ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ                          ।।೧೧।।

Labels: ಇದು ಏನೆಶೋದಾ, Idu  Eneshoda,  ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ಗುರುವಾರ, ಜುಲೈ 25, 2013

ಭೂಮ ಇಡುಬಾರೆ : Bhooma Idubaare

ಭೂಮ ಇಡುಬಾರೆ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವ  
ರಾಗ :   
ತಾಳ :   

ಭೂಮ ಇಡುಬಾರೆ ದ್ರುಪದರಾಯನರಸಿ 
ಭೀಮಧರ್ಮಾರ್ಜುನ ನಕುಲ ಸಾದೇವ 
ದ್ರೌಪದಿ ಕುಳಿತ ಎಲೆಗೆ                                           ।।ಪ।।

ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿ 
ಚೆಂದದ ಶಾಲ್ಯಾನ್ನ ಶಾವಿಗೆ ಫೇಣಿಗಳು ಎಣ್ಣೋರಿಗೆಯು  ।।೧।।

ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟವಿಮಾಲತಿಯು ಗೌಲಿ
ಬಟ್ಟಲೋಳ್ ತುಂಬಿತ್ತು ಪರಡಿ ಪಾಯಸ ಘೃತ ಸಕ್ಕರೆಯು  ।।೨।।

ಕುಂದಣದ್ಹರಿವಾಣ ಪಿಡಿದು ಕುಸುಮಮಲ್ಲಿಗೆ ಮುಡಿದು ನಡೆದು 
ಬಂದು ಭೇಮೇಶಕೃಷ್ಣನ ಸಖರ‍್ಹೊಂದಿ ಕುಳಿತರು ಕೃಷ್ಣೆಸಹಿತ  ।।೩।।

Labels: ಭೂಮ ಇಡುಬಾರೆ, Bhooma Idubaare, ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru