ಸೋಮವಾರ, ಏಪ್ರಿಲ್ 22, 2013

ಬಾರೋ ಬೇಗ ನೀರಜಾಕ್ಷ : Baro Bega Nirajaksha


ಬಾರೋ ಬೇಗ ನೀರಜಾಕ್ಷ

ಕೀರ್ತನಕಾರರು : ವ್ಯಾಸರಾಯರು
ರಾಗ : ಫರಜು
ತಾಳ : ರೂಪಕ

ಬಾರೋ ಬೇಗ ನೀರಜಾಕ್ಷ
ದೂರು ಇದು ಏತಕೋ ||ಪ||

ಮೊಸರು ಮಾರುವ ಗೊಲ್ಲತಿಯರ
ಅಸವಳಿಸಿ ನೀ ಕೈಯಪಿಡಿದು
ವಶವಾಗು ಎಂದು ಪೇಳಿ
ನಸುನಗುತಲಿದ್ದೆಯಂತೆ ||೧||

ಕುಸುಮಶರನ ಪೆತ್ತವನೆ
ಬಸವನಾದೆ ಊರೊಳಗೆ
ಶಶಿಮುಖಿಯರ ದೂರು ಬಹು
ಪಸರಿಸಿತು ನಾ ಪೇಳಲಾರೆ ||೨||

ಕಂದ ಕೇಳು ಇಂದುಮುಖಿಯರ
ಹೊಂದಿ ನೀನಾಡಲ್ಯಾಕೆ
ಮಂದಿರದೊಳಾಡಿ ಸಲಹೊ
ತಂದೆ ಉಡುಪಿ ಸಿರಿಕೃಷ್ಣ ||೩||

Labels: ಬಾರೋ ಬೇಗ ನೀರಜಾಕ್ಷ, ವ್ಯಾಸರಾಯರು, Vyasarayaru, Baro Bega Nirajaksha, ವ್ಯಾಸರಾಯರು, Vyasarayaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ