ಶನಿವಾರ, ಆಗಸ್ಟ್ 31, 2013

ಮಾತು ಮಾತಿಗೆ ಕೇಶವ ನಾರಾಯಣ : Matu Matige Keshava Narayana

ಮಾತು ಮಾತಿಗೆ ಕೇಶವ ನಾರಾಯಣ

ಕೀರ್ತನಕಾರರು : ವಾದಿರಾಜರು
ರಾಗ :  ರೇಗುಪ್ತಿ 
ತಾಳ : ಅಟ್ಟ 

ಮಾತು ಮಾತಿಗೆ ಕೇಶವ ನಾರಾಯಣ
ಮಾಧವ ಎನಬಾರದೆ ಹೇ ಜಿಹ್ವೆ                                         ।।ಪ॥

ಪ್ರಾತಃಕಾಲದೊಳೆದ್ದು ಪಾರ್ಥಸಾರಥಿಯೆಂದು
ಪ್ರೀತಿಲಿ ನೆನೆಯೆ ಸುಪ್ರೀತನಾಗುವ ಹರಿ                              ।।ಅ.ಪ॥

ಜಲಜನಾಭನ ನಾಮವು ಈ ಜಗಕ್ಕೆಲ್ಲ ಜನನ ಮರಣ ಹರವು
ಸುಲಭವೆಂದೆನಲಾಗಿ ಸುಖಕೆ ಕಾರಣವಿದು
ಬಲ್ಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು
ತಿಳಿದು ತಿಳಿಯದಿಹರೇ ಹೇ ಜಿಹ್ವೆ                                        ।।೧।।


ತರಳೆ ದ್ರೌಪದಿ ಸೀರೆಯ ಸೆಳೆಯುತಿರೆ ಹರಿ ನೀನೆ ಗತಿಯೆನಲು
ಪರಮಪುರುಷ ಭವಭಂಜನ ಕೇಶವ
ದುರುಳರ ಮರ್ದಿಸಿ ತರುಣಿಗಭಯವಿತ್ತ 

ಹರಿ ನಮ್ಮೊಡೆಯನಲ್ಲವೆ ಹೇ ಜಿಹ್ವೆ                                       ।।೨।।

ಹೇಮಕಶ್ಯಪಸಂಭವ ಈ ಜಗಕ್ಕೆಲ್ಲ ನಾಮವೆ ಗತಿಯೆನಲು
ವಾಮನ ನೀನೆಂದು ವಂದಿಸಿದವರಿಗೆ ಶ್ರೀಮದನಂತ
ಸ್ವಾಮಿ ಹಯವದನನು 

ಕಮಿಟ ಫಲವೀವನು ಹೇ ಜಿಹ್ವೆ                                          ।।೩।।

Labels: ಮಾತು ಮಾತಿಗೆ ಕೇಶವ ನಾರಾಯಣ, Matu Matige Keshava Narayana, ವಾದಿರಾಜರು, Vadirajaru

2 ಕಾಮೆಂಟ್‌ಗಳು: