ಗುರುವಾರ, ಜುಲೈ 25, 2013

ಭೂಮ ಇಡುಬಾರೆ : Bhooma Idubaare

ಭೂಮ ಇಡುಬಾರೆ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವ  
ರಾಗ :   
ತಾಳ :   

ಭೂಮ ಇಡುಬಾರೆ ದ್ರುಪದರಾಯನರಸಿ 
ಭೀಮಧರ್ಮಾರ್ಜುನ ನಕುಲ ಸಾದೇವ 
ದ್ರೌಪದಿ ಕುಳಿತ ಎಲೆಗೆ                                           ।।ಪ।।

ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿ 
ಚೆಂದದ ಶಾಲ್ಯಾನ್ನ ಶಾವಿಗೆ ಫೇಣಿಗಳು ಎಣ್ಣೋರಿಗೆಯು  ।।೧।।

ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟವಿಮಾಲತಿಯು ಗೌಲಿ
ಬಟ್ಟಲೋಳ್ ತುಂಬಿತ್ತು ಪರಡಿ ಪಾಯಸ ಘೃತ ಸಕ್ಕರೆಯು  ।।೨।।

ಕುಂದಣದ್ಹರಿವಾಣ ಪಿಡಿದು ಕುಸುಮಮಲ್ಲಿಗೆ ಮುಡಿದು ನಡೆದು 
ಬಂದು ಭೇಮೇಶಕೃಷ್ಣನ ಸಖರ‍್ಹೊಂದಿ ಕುಳಿತರು ಕೃಷ್ಣೆಸಹಿತ  ।।೩।।

Labels: ಭೂಮ ಇಡುಬಾರೆ, Bhooma Idubaare, ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ