ಬುಧವಾರ, ಸೆಪ್ಟೆಂಬರ್ 11, 2013

ಮಂಗಳಾರತಿ ತಂದು ಬೆಳಗಿರೆ : Mangalarati Tandu Belagire

ಮಂಗಳಾರತಿ ತಂದು ಬೆಳಗಿರೆ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವನವರು

ಮಂಗಳಾರತಿ ತಂದು ಬೆಳಗಿರೆ
ಅಂಬುಜಾಸನ ರಾಣಿಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ
ಶಶಿ ಬಿಂಬೆಗೆ                                            ||ಪ||

ಶುದ್ಧ ಸ್ನಾನವ ಮಾಡಿ ನದಿಯಲಿ
ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ                             ||೧||

ಎರೆದು ಪೀತಾಂಬರವನುಡಿಸಿ
ಸರ್ವಾಭರಣವ ರಚಿಸಿದ
ಹರಳಿನೋಲೆ ವಜ್ರಮೂಗುತಿ
ವರಮಹಾಲಕ್ಷ್ಮಿ ದೇವಿಗೆ                              ||೨||

ಹುಟ್ಟುಬಡವೆಯ ಕಷ್ಟಕಳೆದು
ಕೊಟ್ಟಳರಸನ ಸಿರಿಯನು
ಹೆತ್ತ ಕುಮರನ ತೋರಿದಂಥ
ಶುಕ್ರವಾರದ ಲಕ್ಷ್ಮಿಗೆ                                   ||೩||

ನಿಗಮ ವೇದ್ಯಳೆ ನಿನ್ನ ಗುಣಗಳ
ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಏನುತ
ಜಗದೊಡೆಯನ ಭೀಮೇಶ ಕೃಷ್ಣನ ರಾಣಿಗೆ      ||೪||

Labels: ಮಂಗಳಾರತಿ ತಂದು ಬೆಳಗಿರೆ, Mangalarati Tandu Belagire
, ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ