ಬುಧವಾರ, ಸೆಪ್ಟೆಂಬರ್ 11, 2013

ಹೊಸಗಣ್ಣು ಎನಗೆ ಹಚ್ಚಲಿಬೇಕು : Hosagannu Enage Hachchalibeku

ಹೊಸಗಣ್ಣು ಎನಗೆ ಹಚ್ಚಲಿಬೇಕು

ಕೀರ್ತನಕಾರರು : ಇಂದಿರೇಶರು

ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ
ವಸುದೇವ ಸುತನ ಕಾಂಬುದಕೆ                            ||ಪ||

ಘಸಣಿಯಾಗುವೆ ಭವ ವಿಷಯ ವಾರುಧಿಯೊಳು
ಶಶಿಮುಖಿಯೆ ಕರುಣದಿ ಕಾಯೆ                             ||ಅ.ಪ||

ಪರರ ಅನ್ನವನುಂಡು ಪರರ ಧನವ ಕೊಂಡು
ಪರಿ ಪರಿಯ ಕ್ಲೇಶಗಳನುಂಡು
ವರಲಕ್ಷ್ಮೀ ನಿನ್ನ ಚಾರು ಚರಣಗಳ
ಮೊರೆಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ                   ||೧||

ಮಂದಹಾಸಿನಿ ಭವಸಿಂಧುವಿನೊಳಗಿಟ್ಟು
ಚಂದವೇ ಎನ್ನ ನೋಡುವುದು
ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನ
ಮಂದರಧರನ ತೋರಮ್ಮ                                ||೨||

ಅಂದಚಂದಗಳೊಲ್ಲೆ ಬಂಧುಬಳಗ ಒಲ್ಲೆ
ಬಂಧನಕೆಲ್ಲ ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ ಹೃ
ನ್ಮಂದಿರದೊಳು ಬಂದು ಬೇಗ                            ||೩||

Labels: ಹೊಸಗಣ್ಣು ಎನಗೆ ಹಚ್ಚಲಿಬೇಕು, Hosagannu Enage Hachchalibeku, ಇಂದಿರೇಶರು, Indiresharu

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ