ಶುಕ್ರವಾರ, ಸೆಪ್ಟೆಂಬರ್ 13, 2013

ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ : Apta Matidu Nija Prapta Janake

ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ

ಕೀರ್ತನಕಾರರು : ಗೋಪಾಲದಾಸರು
ರಾಗ : ರೀತಿ ಗೌಳ
ತಾಳ : ಆದಿ


ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ 
ಕುಪಿತರಾದರೆ ಕೇಳೆ ಅಪ್ರಾಪ್ತರು                          ।।ಪ॥ 

ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆ 
ನಿರಯವೇ ಪ್ರಾಪ್ತಿ ಸಂದೇಹವಿಲ್ಲ 
ಹಿರಿದು ಹರಿಗೋಲ ನಂಬಿ ಕಿರಿದ್ಹುಟ್ಟುಗಳ ಬಿಡಲು 
ಭರದಿ ಹೊಳೆದಾಟಿ ತಾ ದಾರಿಯ ಸೇರುವನೆ          ।।೧।।

ಕೃಷ್ಣನಲ್ಲಿ ದ್ವೇಷ ನಾರಾಯಣನಲ್ಲಿ ಭಕುತಿ 
ಎಷ್ಟು ಮಾಡಿದರು ಗತಿಪೊಂದುವನೆ 
ಸಿಟ್ಟಿನಲ್ಲಿ ಸರ್ಪನ ತುಟಿ ತುದಿಯ ಚಿವುಟಿದರೆ 
ಎಷ್ಟು ಸುಖ ಐದುವನು ನಷ್ಟವಿಲ್ಲದೆ                       ।।೨।।

ಹರಿಯಲ್ಲಿ ದ್ವೇಷ ಹರನಲ್ಲಿ ಭಕುತಿ ಮಾಡಿದರೆ 
ಪರಮಪದ ದೊರಕುವುದೆ ಮರುಳನಲ್ಲದೆ 
ಶರಧಿ ಆಶ್ರಯಿಸಿದ್ದ ಮಚ್ಚನ ಬಲಮಾಡಿ 
ಶರಧಿಯನು ದೂಷಿಸಲು ಹರುಷಬಡುವುದೆ             ।।೩।।

ಹರನ ದ್ವೇಷವ ಮಾಡಿ ಪೂಜೆಯ ಮಾಡೆ 
ಪರಮಗತಿಯಾಗುವುದೆ ಪತಿತನಿಗೆ 
ಹರವಿಯಿಲ್ಲದ ಪಾಕ ಕರವಿಟ್ಟು ಕಲಸಿದರೆ 
ವರ ಭೋಜನವು ಅವಗೆ ಒದಗಿ ಆಗುವುದೆ              ।।೪।।

ದೇವನಿಗೆ ಕರ್ತೃತ್ವ ಉಂಟು ಎಂದವ ಗೆದ್ದ 
ದೇವನಲ್ಲದೆ ಜೀವನೆನಲು ಬಿದ್ದ 
ಪಾವನ್ನಮೂರುತಿ ಗೋಪಾಲವಿಠಲನಂಘ್ರಿ
ಸೇವಕಗೇನು ಗತಿ ಅದವರಿಗೆ ಆಗಲಿ                     ।।೫।।

Labels: ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ, Apta Matidu Nija Prapta Janake, ಗೋಪಾಲದಾಸರು, Gopaladasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ