ಬುಧವಾರ, ಸೆಪ್ಟೆಂಬರ್ 11, 2013

ಯಾದವರಾಯ ಬೃಂದಾವನದೊಳು : Yadavaraya Brindavanadolu

ಯಾದವರಾಯ ಬೃಂದಾವನದೊಳು

ಕೀರ್ತನಕಾರರು : ಕನಕದಾಸರು
ರಾಗ : ರಾಗಮಾಲಿಕೆ

ಯಾದವರಾಯ ಬೃಂದಾವನದೊಳು
ವೇಣು ನಾದವ ಮಾಡುತಿರೆ                          ||ಪ||

ರಾಧಾ ಮುಂತಾದ ಗೋಪಿಯರೆಲ್ಲ
ಮಧುಸೂದನ ನಿನ್ನನು ಸೇವಿಸುತಿರೆ
ಸುರರು ಅಂಬರದಿ ಸಂದಣಿಸಿರೆ
ಅಪ್ಸರ ಸ್ತ್ರೀಯರು ಮೈ ಮರೆತಿರೇ ಅನುಪಲ್ಲವಿ  ||೧||

ಕರದಲಿ ಕೊಳಲನು ಊದುತ ಪಾಡುತ
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ಹರಿ ಹರ ಬ್ರಹ್ಮರು ನಲಿದಾಡುತಿರೆ
ತುಂಬುರು ನಾರದರು ಪಾಡುತಿರೆಚರಣ          ||೨||

ಕರುಗಳ ಸಹಿತಲೇ ಗೋಕುಲವೆಲ್ಲ
ಸಿರಿ ಕಾಗಿನೆಲೆಯಾದಿ ಕೇಶವ ರಾಯ
ತರುಗಳ ಸಹಿತಲೇ ವರಗೋಪಾಲಚರಣ        ||೩||

Labels: ಯಾದವರಾಯ ಬೃಂದಾವನದೊಳು, Yadavaraya Brindavanadolu, ಕನಕದಾಸರು, Kanakadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ