ಬುಧವಾರ, ಜುಲೈ 24, 2013

ಆರು ಹಿತವರು ಎಂದು ನಂಬಬೇಡ : Aru Hitavaru Endu Nambabeda

ಆರು ಹಿತವರು ಎಂದು ನಂಬಬೇಡ

ಕೀರ್ತನಕಾರರು : ಕನಕದಾಸರು
ರಾಗ : ಕಾಂಬೋದಿ
ತಾಳ : ಝಂಪೆ


ಆರು ಹಿತವರು ಎಂದು ನಂಬಬೇಡ                      ।।ಪ।।
ಯಾರಿಗ್ಯಾರಿಲ್ಲ ಆಪತ್ತು ಬಂದೊದಗಿದಡೆ               ।।ಅ.ಪ।।

ಜನಕ ಹಿತದವನೆಂದು ನಂಬಬಹುದೇ ಹಿಂದೆ 
ತನಯ ಪ್ರಹ್ಲಾದನಿಗೆ ಪಿತ ಮುನಿದನು 
ಜನನಿಯೇ ರಕ್ಷಿಪಳೆಂತೆಂಬೆನೆ ಅ ಕುಂತಿ 
ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ            ।।೧।

ಮಗನು ತೆತ್ತಿಗನೆನಲು ಕಂಸ ತನ್ನಯ ಪಿತನ 
ವಿಗಡ ಬಂಧನದಿಂದ ಬಂಧಿಸಿದನು 
ಜಗವರಿಯೇ ಸೋದರನು ಮಮತೆಯುಳ್ಳವನೆನಲು 
ಹಗೆವರಸಿ ವಾಲಿಯನು ಅನುಜ ಕೊಲಿಸಿದ ಮೇಲೆ    ।।೨।।

ತನಗೆ ದೇಹಾನುಬಂಧುಗಳೇ ಬಂಧುಗಳೆಂದು 
ಮನದಿ ನಿಶ್ಚಯವಾಗಿ ನಂಬಬೇಡ 
ಘನಕೃಪಾನಿಧಿ ಕಾಗಿನೆಲೆಯಾದಿ ಕೇಶವ 
ಅನುದಿನ ನಂಬಿದವಗಿಹಪರದಿ ಸುಖವು                   ।।೩।।

Labels: ಆರು ಹಿತವರು ಎಂದು ನಂಬಬೇಡ, Aru Hitavaru Endu Nambabeda, ಕನಕದಾಸರು, Kanakadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ