ಗುರುವಾರ, ಜುಲೈ 25, 2013

ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ, Nyayave Ninage Enage Sirikrishna

ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ

ಕೀರ್ತನಕಾರರು : ವ್ಯಾಸರಾಯರು
ರಾಗ : ಕೇದಾರಗೌಳ 
ತಾಳ : ಅಟ್ಟ 

ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ 
ಬಾಯಾಡಬಹುದೆ ಕೈಯೊಳಿತ್ತ ಹಣಗಳ            ।।ಪ।।

ಆರು ಅರಿಯರು ಹಾಗೆ ಒಂಬತ್ತು ಕೊಡುವಾಗ 
ತೋರಿಯಾಡಿದೆ ಒಮ್ಮೆ ನಿನ್ನ ಹೆಸರ
ಗಾರು ಮಾಡದೆ ಬಡ್ಡಿತೆತ್ತು ಬರುವೆನೆಂದು 
ಪೂರೈಸಿ ಕೊಡದೆ ಚುಂಗಡಿಯ ನಿಲಿಸುವರೆ       ।।೧।।

ಸಾಲವ ಬೇಡಿದರೆ ಕೋಪವೇ ಕಮಲಾಕ್ಷ 
ಕಾಲಿಗೆನ್ನ ಕೊರಳ ಕಟ್ಟಿಕೊಂಬೆ 
ಆಲಯದವರ ಕೇಳದೆ ಒಳಗಾದೆನೊ
ಭೋಳೆಯತನದಲಿ ನಿನ್ನ ನಂಬಿದೆ ಹರಿಯೆ        ।।೨।।

ಅಸಲು ನಿನಗೆ ಸಮರ್ಪಣೆ ಆಯಿತೆಲೊ ದೇವ 
ಮೀಸಲು ಪೊಂಬೆಸರುನಿರುತ ನಡೆಯಲಿ 
ಶಶಿಧರ ಬ್ರಹ್ಮಾದಿವಂದ್ಯ ಸತ್ಯವೆಂಬ ಬಿರುದು 
ಮೀಸಲು ಉಳುಹಿ ಎನ್ನ ಸಲಹಯ್ಯ ಸಿರಿಕೃಷ್ಣ     ।।೩।।

Labels: ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ, Nyayave Ninage Enage Sirikrishna, ವ್ಯಾಸರಾಯರು, Vyasarayaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ