ಗುರುವಾರ, ಜುಲೈ 25, 2013

ನಡತೆ ಹೀನನಾದರೇನಯ್ಯ : Nadate Heenanadarenayya

ನಡತೆ ಹೀನನಾದರೇನಯ್ಯ 

ಕೀರ್ತನಕಾರರು : ಕನಕದಾಸರು 
ರಾಗ : ಕಾಪಿ 
ತಾಳ : ಅಟ್ಟ

ನಡತೆ ಹೀನನಾದರೇನಯ್ಯ ಜಗ 
ದೊಡೆಯನ ಭಕುತಿ  ಇದ್ದರೆ ಸಾಲದೆ                      ।।ಪ।।

ಪುಂಡರಾ  ಪಾಂಡುನಂದನರು ಮತ್ತದರೊಳು 
ಕಂಡೋರ್ವಳೈವರು ಭೋಗಿಪರು 
ಖಂಡಿಸಿದರು ರಣದೊಳು ಗುರುಹಿರಿಯರ 
ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ                   ।।೧।।

ಒಂದೊಂದು ಪರಿ ಬುದ್ಧಿಯ ಹೇಳಿ ಹಿರಣ್ಯಕ 
ಕಂದನ ನಿರ್ಬಂಧಿಸುತಿರಲು 
ಅಂದು ಸಾಧಿಸಲು ಕಂಬದ ಬಳಿಯೆ ತನ್ನ 
ತಂದೆಯ ಕೊಲಿಸಿದನೆಂಬರು ಜನರು                     ।।೨।।

ದಾಸಿಯ ಜಠರದೊಳು ಜನಿಸಿದ ವಿದುರ ಸ
ನ್ಯಾಸಿಯೆಂದೆನಿಸಿಕೊಂಡ 
ಸಾಸಿರನಾಮದೊಡೆಯ ಕೃಷ್ಣ ಬಾಡದಾದಿ 
ಕೇಶವನ ಭಕುತಿಯೊಂದಿದ್ದರೆ ಸಾಲದೆ                    ।।೩।।

Labels: ನಡತೆ ಹೀನನಾದರೇನಯ್ಯ, Nadate Heenanadarenayya, ಕನಕದಾಸರು, Kanakadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ