ಗುರುವಾರ, ಜುಲೈ 25, 2013

ನಂಬಿಕೆಟ್ಟವರಿಲ್ಲವೊ ರಂಗಯ್ಯನ : Nambikettavarillavo Rangayyana

ನಂಬಿಕೆಟ್ಟವರಿಲ್ಲವೊ ರಂಗಯ್ಯನ

ಕೀರ್ತನಕಾರರು : ವ್ಯಾಸರಾಯರು 
ರಾಗ : ಕಲ್ಯಾಣಿ 
ತಾಳ : ಮಿಶ್ರಛಾಪು 

ನಂಬಿಕೆಟ್ಟವರಿಲ್ಲವೊ ರಂಗಯ್ಯನ 
ನಂಬದೆ ಕೆಟ್ಟರೆ ಕೆಡಲಿ                             ।।ಪ।।

ಅಂಬುಜನಾಭನ ಅಖಿಳಲೋಕೇಶನ 
ಕಂಬುಕಂಧರ ಕೃಷ್ಣ ಕರುಣಾಸಾಗರನ         ।।ಅ.ಪ।।

ತರಳ ಪ್ರಹ್ಲಾದ ಸಾಕ್ಷಿ ಸರಸಿಯೊಳಿದ್ದ 
ಕರಿರಾಜನೊಬ್ಬ ಸಾಕ್ಷಿ 
ಮರಣಕಾಲದಿ ಅಜಾಮಿಳ ಮಗನ ಕರೆಯೆ 
ಗರುಡನೇರಿ ಬಂದ ಗರುವರಹಿತನ             ।।೧।।

ದೊರೆಯೂರು ಏರಬಂದ ಪುತ್ರನನ್ನು 
ಕೊರಳ್ಹಿಡದ್ಹೊರಡಿಸಲು 
ಅರಣ್ಯದೊಳಗವನಿದ್ದ ಸ್ಥಳದಲ್ಲಿ 
ಭರದಿಂದೋಡಿ ಬಂದ ಭಕ್ತವತ್ಸಲನ            ।।೨।।

ತರುಣಿ ದ್ರೌಪದಿ ಸೀರೆಯ ದುಶ್ಯಾಸನ 
ಸರಸರ ಸೆಳೆಯುತ್ತಿರೆ 
ತರಳೆಯೊಡನೆ ತಾನಾಡುವುದು ಬಿಟ್ಟು 
ತ್ವರಿತದಕ್ಷಯವಿತ್ತ ಸಿರಿಕೃಷ್ಣರಾಯನ            ।।೩।।


Labels: ನಂಬಿಕೆಟ್ಟವರಿಲ್ಲವೊ ರಂಗಯ್ಯನ, Nambikettavarillavo Rangayyana, ವ್ಯಾಸರಾಯರು, Vyasarayaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ