ಶುಕ್ರವಾರ, ಆಗಸ್ಟ್ 30, 2013

ಕೈಲಾಸವಾಸ ಗೌರೀಶ ಈಶ : Kailasavasa Gourisha Isha

ಕೈಲಾಸವಾಸ ಗೌರೀಶ ಈಶ

ಕೀರ್ತನಕಾರರು : ವಿಜಯದಾಸರು

ಕೈಲಾಸವಾಸ ಗೌರೀಶ ಈಶ                                   ।।ಪ॥

ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ            ।।ಅ.ಪ॥ 

ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿವಾಗಿ 
ಮಹಿಯೊಳಗೆ ಚರಿಸಿದೆನೊ ಮಹದೇವನೆ 
ಅಹಿಭೂಷಣನೆ ಎನ್ನವಗುಣಗಳೆಣಿಸಿದಲೆ 
ವಿಹಿತಧರ್ಮದಲಿಡು ವಿಷ್ಣುಭಕುತಿ ಕೊಡೊ ಶಂಭೋ     ।।೧।।

ಮನಸು ಕಾರಣವಲ್ಲ ಪಾಪಪುಣ್ಯಂಗಳಿಗೆ 
ಅನಲಾಕ್ಷ ನಿನ್ನ ಪ್ರೇರಣೆ ಅಲ್ಲದೆ 
ದನುಜ ಗಜ ಹಾರಿಯೆ ದಂಡ ಪ್ರಣಮವ ಮಾಳ್ಪೆ 
ಮಣಿಸು ಈ ಮನಸು ಸಜ್ಜನರ ಸಿರಿ ಚರಣದಲ್ಲಿ             ।।೨।।

ಭಾಗೀರಥೀಧರನೆ ಭಯವ ಪರಿಹರಿಸೊ ಲೇ-
ಸಾಗಿ ಒಲಿದು ನೀ ಸತತ ಶರ್ವದೇವ 
ಭಾಗವತಜನಪ್ರೀಯ ವಿಜಯವಿಠಲನಂಘ್ರಿ 
ಜಗು ಮಾಡದೆ ಭಾಜಿಪ ಭಾಗ್ಯವನು ಕೊಡೊ ಶಂಭೋ  ।।೩।।

Labels: ಕೈಲಾಸವಾಸ ಗೌರೀಶ ಈಶ, Kailasavasa Gourisha Isha, ವಿಜಯದಾಸರು, Vijayadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ