ಬುಧವಾರ, ಆಗಸ್ಟ್ 21, 2013

ಧರಣಿಗೆ ದೊರೆಯೆಂದು ನಂಬಿದೆ : Dharanige Doreyendu Nambide

ಧರಣಿಗೆ ದೊರೆಯೆಂದು ನಂಬಿದೆ 

ಕೀರ್ತನಕಾರರು : ಪುರಂದರದಾಸರು  
ರಾಗ :  ಶಂಕರಾಭರಣ  
ತಾಳ : ತ್ರಿವಿಡೆ

ಧರಣಿಗೆ ದೊರೆಯೆಂದು ನಂಬಿದೆ ಇಂಥ 
ಪರಮಲೋಭಿ ಎಂಬುದರಿಯೆ ಶ್ರೀ ಹರಿಯೆ                   ।।ಪ॥ 

ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ 
ಓಡಿ ನೀರೊಳು ಸೇರಿಕೊಂಡೆ ಬೇಗ 
ಹೇಡಿಯ ತೆರದಲಿ ಮೋರೆಯ ತೋರದೆ
ಓಡಿ ಅರಣ್ಯದಿ ಮೃಗಗಳ ಸೇರಿದೆ                               ।।೧।।

ಬಡವರ ಬಿನ್ನಹ ಲಾಲಿಸದೆ ಹಲ್ಲ 
ಕಡು ಕೋಪದಲಿ ತೆರೆದಂಜಿಸಿದೆ 
ತಡೆಯದೆ ಭಿಕ್ಷುಕನಾದರೆ ಬಿಡರೆಂದು
ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆ                   ।।೨।।

ಉತ್ತಮನೆಂದರೆ ಮತ್ತೆ ಚೋರನಾದೆ 
ಬತ್ತಲೆ ನಿಂತೆ ತೇಜಿಯನೇರಿದೆ 
ಎತ್ತಹೋದರು ಬಿಡೆ ಮತ್ತೆ ನಿನ್ನನು ದೇವ
ಚಿತ್ತಜಜನಕ ಶ್ರೀ ಪುರಂದರವಿಠಲ                               ।।೩।।

Labels: ಧರಣಿಗೆ ದೊರೆಯೆಂದು ನಂಬಿದೆ , Dharanige Doreyendu Nambide, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ