ಗುರುವಾರ, ಆಗಸ್ಟ್ 22, 2013

ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ ಪಾಡಿರೈ : Krishanna Nodirai

ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ ಪಾಡಿರೈ

ಕೀರ್ತನಕಾರರು : ಜಗನ್ನಾಥದಾಸರು  
ರಾಗ :  ಭೈರವಿ  
ತಾಳ : ಅಟ್ಟ 

ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ ಪಾಡಿರೈ 
ಕೃಷ್ಣಗೆ ಒಲಿದತಿ ದುಷ್ಟರಾಯನ ತರಿದ ಜಗದೊಳು ಮೆರೆದ                     ।।ಪ॥ 

ನಂದವ್ರಜದಲ್ಲಿ ಕಂದನಾಗಿ ತಾ ಬೆಳೆದ ದೈತ್ಯರನಳಿದ 
ವೃಂದಾವನದೊಳು ಇಂದುಮುಖಿಯರನು ಕೂಡಿ ಪರಿಪರಿಯಾಡಿ 
ಒಂದೊಂದು ಪರಿ ಲೀಲೆ ಸಂದೋಹಗಳ ತೋರಿಸಿದ ಮೋಹ ಬೆರೆಸಿದ 
ಕಂದರ್ಪಪಿತ ತನ್ನ ಹೊಂದಿದ ಜನರನ್ನು ಕಾವ ವರಗಳನೀವ                    ।।೧।।

ಬಾಲೇರ ಮನೆಯಲ್ಲಿ ಪಾಲು ಮೊಸರುಗಳ ಕದ್ದ ತೀವ್ರದಿ ಮೆದ್ದ 
ಕಾಲಕಾಲದಲಿ ಗೋಪಾಲರ ಒಡಗೂಡಿ ಗೋವ ಕಾಯ್ದನು ದೇವ 
ಶೈಲವ ಬೆರಳಲಿ ತಾಳಿ ಗೋಕುಲವ ಪೊರೆದ ಗರುವ ಮುರಿದ 
ಶ್ರೀಲೋಲುಪನು ವಿಶಾಲ ಮಹಿಮೆಗಳ ತೋರಿದ ಸುರರಿಂದ ಮೆರೆದ        ।।೨।।

ಮಧುರಾಪಟ್ಟಣದಿ ಕದನ ಕರ್ಕಶರ ಕೊಂದ ಸಚ್ಚಿದಾನಂದ 
ಸದುಗುಣನಿಧಿಯ ಪಡೆದವಳ ಜನಕಗೆ ಪಟ್ಟಗಟ್ಟಿದ ದಿಟ್ಟ 
ಸುದತಿಯಗೋಸುಗ ಸುರಪನ ಪುರದಿಂದ ಸುರತರು ತಂದ 
ಪದುಮಜಾಂಡಧರ ಜಗನ್ನಾಥ ವಿಠಲನೀತ ತ್ರಿಗುಣಾತೀತ                      ।।೩।।

Labels: ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ ಪಾಡಿರೈ , Krishanna Nodirai, ಜಗನ್ನಾಥದಾಸರು, Jagannathadasaru 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ