ಶುಕ್ರವಾರ, ಆಗಸ್ಟ್ 30, 2013

ಹೇಳಿದ ಯಮಧರ್ಮ ತನ್ನಾಳಿಗೆ : Helida Yamadharma Tannalige

ಹೇಳಿದ ಯಮಧರ್ಮ ತನ್ನಾಳಿಗೆ

ಕೀರ್ತನಕಾರರು : ಪ್ರಸನ್ನ ವೆಂಕಟದಾಸರು
ರಾಗ :  ಸಾರಂಗ
 
ತಾಳ : ಆದಿ

ಹೇಳಿದ ಯಮಧರ್ಮ ತನ್ನಾಳಿಗೆ                        ।।ಪ॥ 

ಹೇಳಿದ ಯಮ ತನ್ನೂಳಿಗದವರಿಗೆ 
ಖೂಳ ದುರಾತ್ಮರಾಗಿ ಬಾಳುವರನು ತರ             ।।೧।।

ಹರಿ ಸಂಕೀರ್ತನೆಯ ನರನಾರಿಯರು ಆ-
ದರದಲಿ ಮಾಡಿದವರ ನಿಂದಿಪರ ತರ                 ।।೨।।

ಹರಿದಸರಿಗುಣಕರಿಯದೆ ಜನ್ಮಾಂತ 
ಒರಟು ಮಾತಿನ ಲುಬ್ಧ ನರನಲ್ಲದೇ ತರ              ।।೩।।

ಹರಿಕಥಾಮೃತ ಉಪಚಾರಕಾಗಿ ಕೇಳುವಾ 
ಪರನಾರೇರಾಳುವ ದುರುಳನ ಕಟ್ಟಿತರ               ।।೪।।

ಗುರುಹಿರಿಯರೊಳು ಪ್ರತ್ಯುತ್ತರ ಕೊಡುವರ 
ಮರುಳಾಗಿ ಮಮತೆಯಾ ಸತಿ ವಶದನ ತರ        ।।೫।।

ಅಂಬುಜಾಕ್ಷನೆ ಪೂಜೆ ಜಂಭದಿ ಮಾಡುವ 
ರಂಭೆಯರೊಡನಾಟದ ಡಂಭನ ಹಿಡಿತರ             ।।೬।।

ಒಳ್ಳೇದು ಹಳಿದು ತಾ ಬಲ್ಲವನೆನುವನ 
ಚೆಲ್ವಾ ಪ್ರಸನ್ವೆಂಕಟಾ ವಲ್ಲಭಾಗರಿತರ                 ।।೭।।

Labels: ಹೇಳಿದ ಯಮಧರ್ಮ ತನ್ನಾಳಿಗೆ, Helida Yamadharma Tannalige, ಪ್ರಸನ್ನ ವೆಂಕಟದಾಸರು, Prasanna Venkatadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ