ಸೋಮವಾರ, ಆಗಸ್ಟ್ 19, 2013

ಮರೆತೆಯೇನೋ ರಂಗ ಮಂಗಳಾಂಗ : Mareteyeno Ranga Mangalanga

ಮರೆತೆಯೇನೋ ರಂಗ ಮಂಗಳಾಂಗ

ಕೀರ್ತನಕಾರರು : ಶ್ರೀಪಾದರಾಜರು  
ರಾಗ :  ಕಾಂಬೋಧಿ  
ತಾಳ : ಝಂಪೆ  

ಮರೆತೆಯೇನೋ ರಂಗ ಮಂಗಳಾಂಗ 
ತುರುಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ                          ।।ಪ।।

ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲ 
ಮ್ಯಾಲೆ ಕಲ್ಲಿಚೀಲಿ ಕೊಂಕಳಲ್ಲಿ 
ಕಾಲಗಡಗವನಿಟ್ಟು ಕಾಡೊಳಿಹ ಪಶುಹಿಂಡ 
ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ                     ।।೧।।

ಕಲ್ಲು ಮಣಿ ಕವಡೆಯನು ಕಾಡೊಳಿಹ ಗುಲಗಂಜಿ 
ಸಲ್ಲದೊಡವೆಯ ನೀನು ಸರ್ವಾಂಗಕೆ 
ಅಲ್ಲಲ್ಲೆಸೆಯೆ ಧರಿಸಿ ನವಿಲುಗರಿಗಳ ಗೊಂಡೆ 
ಅಲ್ಲಿ ಗೊಲ್ಲರ ಕೂಡ ಚಲ್ಲಾಟ ಮಾಡುತಲಿ                       ।।೨।।

ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿ 
ಸಿರಿ ಅರಸನೆಂದು ಸೇವಕರರಿವರೋ 
ಶರಣಾಗತರ ಪೊರೆವ ಶ್ರೀ ರಂಗವಿಠಲಯ್ಯ 
ನರಸಿಂಗ ನೀನಿರುವ ಪರಿಯ ಮುಂದಿನ ಸಿರಿಯು             ।।೩।।

Labels: ಮರೆತೆಯೇನೋ ರಂಗ ಮಂಗಳಾಂಗ , Mareteyeno Ranga Mangalanga, ಶ್ರೀಪಾದರಾಜರು, Sripadarajaru

1 ಕಾಮೆಂಟ್‌: