ಭಾನುವಾರ, ಆಗಸ್ಟ್ 4, 2013

ಹರಿಸ್ಮರಣೆಯೆಂಬೊ : Harismaraneyembo

ಹರಿಸ್ಮರಣೆಯೆಂಬ

ಕೀರ್ತನಕಾರರು : ವ್ಯಾಸರಾಯರು 
ರಾಗ :  ಕಾಂಬೋದಿ ತಾಳ : ಝಂಪೆ

ಹರಿಸ್ಮರಣೆಯೆಂಬೊ ಹಿರಿಪುತ್ರನಿರಲಿಕ್ಕೆ ಈ 
ನರಪುತ್ರರಿಂದ ಗತಿಯಾಹುದೇನಯ್ಯ                                ।।ಪ।।

ಹೊಟ್ಟೆಯಲಿ ಹುಟ್ಟಿದವ ಪುತ್ರನೆಂದೆನಿಸುವನು 
ಹೊಟ್ಟೆ ಕಾದರೆ ಹೊಳೆಯ ಮನೆ ಹೊಗಿಸುವನು 
ಎಷ್ಟೊಂದು ಪೇಳಲಿ ಕಷ್ಟನಿಷ್ಠುರಗಳು
ಬತ್ತ ಬಯಲು ಸಂಸಾರ ಸಹ್ಯವಲ್ಲ ಮನುಜಾ                        ।।೧।।

ಜರೆ ಬಂದು ಕವಿದಾಗ ಜರೆವರು ಸತಿ ಸುತರು 
ಹೊರಗೊಳಗೆ ತಾವು ಅಸಹ್ಯಿಸಿಕೊಂಬರು 
ಘೋರ ಯಮನವರು ಬಂದು ಗುದಿಕಟ್ಟಿ ಒಯ್ವಾಗ 
ನರಹರಿಯ ನಾಮ ದೊರಕೊಂಬುದೇನಯ್ಯ                         ।।೨।।

ಸಂತತ ನಿಮ್ಮ ನಾಮ ಒಂದು ದಿನ ನೆನೆಯದೆ 
ಚಿಂತಿಸಿ ಬರಿದೆ ಬಳಲಿದೆನೊ ಸ್ವಾಮಿ 
ಕಂತು ಪಿತ ನಿಮ್ಮ ನಾಮ ಕೈವಲ್ಯ ಸಾಧನವು
ಎಂತು ಪೇಳಲಿ ಅನಂತಮೂರುತಿ ಕೃಷ್ಣ                               ।।೩।।


Labels : ಹರಿಸ್ಮರಣೆಯೆಂಬೊ, Harismaraneyembo, ವ್ಯಾಸರಾಯರು, Vyasarayaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ