ಮಂಗಳವಾರ, ಸೆಪ್ಟೆಂಬರ್ 10, 2013

ಪಾಂಡುರಂಗ ತ್ವತ್ಪಾದ : Panduranga Tvatpada Palisayya

ಪಾಂಡುರಂಗ ತ್ವತ್ಪಾದ ಪಾಲಿಸಯ್ಯ

ಕೀರ್ತನಕಾರರು : ಶ್ರೀಪತಿ ವಿಠಲದಾಸರು

ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ಪಿಡಿಕೈಯ್ಯ              ||ಪ||

ಪುಂಢರೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ            ||ಅ.ಪ||

ವನಜಭವಾದಿ ಸಮಸ್ತ ಸುರವ್ರಾತಾ ವಂದಿತ ಶ್ರೀನಾಥಾ
ಪ್ರಣತಾರ್ಥಾಹರನೆ ಕಾಮಿತಫಲದಾತಾ ಮುನಿಗಣಸಂಧ್ಯಾ ತಾ
ನೆನೆವ ಜನರ ಮನದೊಳಿಹ ವಿಖ್ಯಾತಾ ಭುವನಾದಿನಾಥಾ
ಘನಮಹಿಮ ಒಲಿದು ಪಾಲಿಸೆನ್ನ ಮಾತಾ ದಯಮಾಡಿ ತ್ವರಿತಾ         ||೧||

ಸುರಚಿರ ಮಹಿಮನೆ ಭಜಕಾಮರಧೇನೂ ವಸುದೇವರ ಸೂನೂ
ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ ಮಾಡಿದ ಗಂಭೀರಾ
ದೊರೆಯೇ ನಿನ್ಹೊರತನ್ಯರನಾನರಿಯೇ ಕೇಳಲೊ ನರಹರಿಯೇ
ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ ಪೊರೆಯೆಂದು ನುಡಿವೇ     ||೨||

ಬಂದ ಜನರ ಭವಸಾಗರ ಪರಿಮಿತಿ ತೋರಿಸುತಿಹ ರೀತೀ
ಚೆಂದದಿಂದ ಕರವಿಟ್ಟು ಕಟಿಗಳಲ್ಲಿ ಈ ಸುಕ್ಷೇತ್ರದಲೀ
ನಿಂದಿಹ ಭೀಮಾತೀರ ಚಂದ್ರಭಾಗಾದಲ್ಲಿಯ ವೈಭೋಗಾ
ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ ಅನಾಥ ಬಂಧೋ               ||೩||

Labels: ಪಾಂಡುರಂಗ ತ್ವತ್ಪಾದ, Panduranga Tvatpada Palisayya
, ಶ್ರೀಪತಿ ವಿಠಲದಾಸರು, Sripati Vithaladasaru

2 ಕಾಮೆಂಟ್‌ಗಳು: